ಉಪ್ಪಿನಂಗಡಿಯ ಕೊರೋನಾ ಸೋಂಕಿತ ವ್ಯಕ್ತಿ ದೆಹಲಿಗೆ ವಕೀಲನಾಗಿ ತನ್ನ ಕಛೇರಿಯ ಕೆಲಸಕ್ಕೆ ತೆರಳಿದ್ದು, ತಬ್ಲಿಘಿ ಜಮಾತಿನಲ್ಲಿ ಭಾಗವಹಿಸಿಲ್ಲ ಎಂದು ಸ್ವತಹ ಧ್ನನಿಮುದ್ರಿಕೆ ಯೊಂದರಲ್ಲಿ ತಿಳಿಸಿದ್ದಾರೆ ಎನ್ನಲಾಗಿದ್ದು; ಇನ್ನೊಂದೆಡೆ ಸ್ಥಳೀಯರಿಗೆ ಈತ ತಬ್ಲಿಘಿ ಜಮಾತಿನಲ್ಲಿ ಭಾಗವಹಿಸಿರಬಹುದೆಂಬ ಶಂಕೆ ಇದೆ. ಈ ವಿಚಾರವಾಗಿ ಜಿಲ್ಲಾ ಪೊಲೀಸರು ವಿಸ್ತ್ರತ ತನಿಖೆ ನಡೆಸಿ, ಸತ್ಯವನ್ನು ನಾಡಿಗೆ ತಿಳಿಸಬೇಕಾಗಿದೆ.








