ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಎಪ್ರಿಲ್ 18ರಂದು ಚಾರ್ಮಾಡಿ ಘಾಟಿ ಪ್ರದೇಶಕ್ಕೆ ಭೇಟಿ ನೀಡಿ, ಇಲ್ಲಿ ಆಹಾರವಿಲ್ಲದೇ ಹಸಿದು ಕಂಗಾಲಾದ ಕೋತಿಗಳಿಗೆ ವಿವಿಧ ಹಣ್ಣುಗಳನ್ನು ಹಂಚಿ ಮಾನವೀಯತೆ ಮೆರೆದರು. ಆಹಾರಕ್ಕಾಗಿ ಈ ಘಾಟಿ ರಸ್ತೆ ಹಾದುಹೋಗುವ ಪ್ರಯಾಣಿಕರನ್ನೇ ಅವಲಂಬಿಸಿದ್ದ ಇಲ್ಲಿನ ಕೋತಿಗಳು; ಕೊರೋನಾ ಸೋಂಕಿನ ಬೀತಿಯಿಂದ ದೇಶವೇ ಲಾಕ್ ಡೌನ್ ಆದ ಕಾರಣ ಪ್ರವಾಸಿಗರಿಲ್ಲದೇ ಆಹಾರ ದೊರಕದೇ ಕಂಗಾಲಾಗಿ ಆಕಾಶದತ್ತ ನೋಡುತ್ತಿದ್ದವು.








