ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಬೆಟ್ಟು ವತಿಯಿಂದ ಪ್ರಾರ್ಥನೆ ಹಾಗೂ ಅಕ್ಕಿ ಮತ್ತು ದಿನಸಿ ವಸ್ತುಗಳ ವಿತರಣೆ-ವೈಯಕ್ತಿಕ ಅಂತರದತ್ತ ಎಲ್ಲರ ಚಿತ್ತ

ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಬೆಟ್ಟು ವತಿಯಿಂದ ಪ್ರಾರ್ಥನೆ ಹಾಗೂ ಅಕ್ಕಿ ಮತ್ತು ದಿನಸಿ ವಸ್ತುಗಳ ವಿತರಣೆ-ವೈಯಕ್ತಿಕ ಅಂತರದತ್ತ ಎಲ್ಲರ ಚಿತ್ತ
Facebook
Twitter
LinkedIn
WhatsApp

ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಬೆಟ್ಟು ಇದರ ವತಿಯಿಂದ ಪೂಜಾ ಕಟ್ಟೆಯಲ್ಲಿ ಕೊರೊನ ಮುಕ್ತ ಜಗತ್ತಿಗಾಗಿ ಹಾಗೂ ಉತ್ತಮ ಆರೋಗ್ಯಕ್ಕಾಗಿ ಅರ್ಚಕರಾದ ಸದಾನಂದ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೊರೊನ ತಡೆಗಟ್ಟಲು ಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಸೂಕ್ತ ಸಲಹೆಯನ್ನು ಸಮಿತಿಯ ಅಧ್ಯಕ್ಷರಾದ ಎಂ. ಬಾಹುಬಲಿ ಪ್ರಸಾದ್ ರವರು ನೀಡಿದರು. ಈ ಬಗ್ಗೆ ವಿವರವುಳ್ಳ ಕರಪತ್ರವನ್ನು ವಿತರಿಸಲಾಯಿತು. ವೈಯಕ್ತಿಕ ಅಂತರದತ್ತ ಎಲ್ಲರ ಚಿತ್ತವಿದ್ದುದು ವಿಶೇಷವಾಗಿತ್ತು.
50 ಕುಟುಂಬಗಳಿಗೆ ಅಕ್ಕಿ ಮತ್ತು ದಿನಸಿ ವಸ್ತುಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳಾದ ಸುಂದರ ಶೆಟ್ಟಿ, ಕರುಣಾಕರ ಶೆಟ್ಟಿ, ರಮೇಶ್ ಚಂದ್ರ, ಪ್ರದೀಪ್ ರೈ, ನಿರಂಜನ ರಾವ್, ಪ್ರವೀಣ್ ಶೆಟ್ಟಿ, ಮಂಜುನಾಥ್ ಪೈ ಮತ್ತು ಚುನಾಯಿತ ಪುರಸಭಾ ಸದಸ್ಯೆ ಸುಜಾತ ಶಶಿಧರ್ ಕೋಟ್ಯಾನ್ ಉಪಸ್ಥಿತರಿದ್ದರು.

Latest News

Related Posts