ಕೊರೋನಾ ವಿರುದ್ಧ ಹೋರಾಟದ ವಾರಿಯರ್ಸ್ ಬೆಳ್ತಂಗಡಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಎಂ.ಎಲ್.ಸಿ‌. ಹರೀಶ್ ಕುಮಾರರಿಂದ ಪ್ರಯಾಣ ಭತ್ತೆ ಕೊಡುಗೆ

ಕೊರೋನಾ ವಿರುದ್ಧ ಹೋರಾಟದ ವಾರಿಯರ್ಸ್ ಬೆಳ್ತಂಗಡಿ ತಾಲೂಕಿನ ಆಶಾ ಕಾರ್ಯಕರ್ತೆಯರಿಗೆ ಎಂ.ಎಲ್.ಸಿ‌. ಹರೀಶ್ ಕುಮಾರರಿಂದ ಪ್ರಯಾಣ ಭತ್ತೆ ಕೊಡುಗೆ
Facebook
Twitter
LinkedIn
WhatsApp

ತಾಲೂಕಿನಲ್ಲಿರುವ 250 ಆಶಾ ಕಾರ್ಯಕರ್ತೆಯರು ಪ್ರತಿನಿತ್ಯ ತಮ್ಮ ಸ್ವಂತ ಹಣವನ್ನು ಪ್ರಯಾಣಕ್ಕಾಗಿ ಬಳಸುತ್ತಿದ್ದಾರೆ. ಸರ್ಕಾರದಿಂದ ಅಲ್ಪ ವೇತನವನ್ನು ಪಡೆದು ತಮ್ಮ ಜೀವದ ಹಂಗು ತೊರೆದು ಕೊರೋನಾ ವೈರಸ್ ವಿರುದ್ಧ ನಿರಂತರವಾಗಿ ಹೋರಾಟ ನಡೆಸುತ್ತಿರುವ ತಾಲೂಕಿನ ಕೊರೋನಾ ವಿರುದ್ಧದ ಹೋರಾಟದ ವಾರಿಯರ್ಸ್ ಗಳಾದ ಪ್ರತೀ ಆಶಾ ಕಾರ್ಯಕರ್ತೆಯರಿಗೆ ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಪ್ರಯಾಣ ಭತ್ಯೆಗಾಗಿ ಪ್ರತಿ ಆಶಾ ಕಾರ್ಯಕರ್ತೆಯರಿಗೆ ರೂ 500 ರಂತೆ ರೂಪಾಯಿ 1.25 ಲಕ್ಷ ಗಳನ್ನು ನೀಡಿದರು.
ವಾರದ ಹಿಂದೆಯಷ್ಟೇ ತಾಲೂಕಿನ ಎಲ್ಲ ಆಶಾ ಕಾರ್ಯಕರ್ತೆಯರಿಗೆ ಹರೀಶ್ ಕುಮಾರ್ ಆಹಾರ ಕಿಟ್ ಗಳನ್ನು ವಿತರಣೆ ಮಾಡಿದ್ದರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಕಲಾಮಧು , ಬ್ಲಾಕ್ ಕಾಂಗ್ರೆಸ್ (ನಗರ) ಅಧ್ಯಕ್ಷ ಕೆ.ಶೈಲೇಶ್ ಕುಮಾರ್, ಯುವ ಕಾಂಗ್ರೆಸ್ ಅಧ್ಯಕ್ಷ ಅಭಿನಂದನ್ ಹರೀಶ್ ಕುಮಾರ್ , ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ಬಿ. ಕೆ ವಸಂತ್ , ನಗರ ಪಂಚಾಯತ್ ಮಾಜಿ ನಾಮನಿರ್ದೇಶಿತ ಸದಸ್ಯ ರಮೇಶ್ ಪೂಜಾರಿ , ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಜಿರ , ಮಾಜಿ ಸೈನಿಕ ರಫೀಕ್ ಸಂಜಯ ನಗರ , ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಮೆಹಬೂಬ್ ಸಂಜಯ್ ನಗರ ಉಪಸ್ಥಿತರಿದ್ದರು.

Latest News

Related Posts