ಬೆಳ್ತಂಗಡಿ: ಮಾ.12 ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ವತಿಯಿದ ಅಪಾಯಕಾರಿ ಕೋವಿಡ್-19 ಕೊರೊನಾ ವೈರಸ್ ವಿರುದ್ಧ ಕಾಯ೯ನಿವ೯ಹಿಸುತ್ತಿರುವ ಪೋಲಿಸ್ ಠಾಣೆ ಧರ್ಮಸ್ಥಳ ಹಾಗೂ ಪ್ರಾಥಮಿಕ ಅರೋಗ್ಯ ಕೇಂದ್ರ ಇಂದಬೆಟ್ಟು ಗೆ. ಘಟಕದ ವತಿಯಿಂದ ಸ್ಯಾನಿಟೈಸರ್ ಯಂತ್ರ ಹಸ್ತಾಂತರಿಸಲಾಯಿತು .

ಈ ಸಂಧರ್ಭದಲ್ಲಿ ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಎಂ.ಕೆ. ಪ್ರಸಾದ್ , ಘಟಕದ ಉಪಾಧ್ಯಕ್ಷರಾದ ದೇವಿಪ್ರಸಾದ್ ಬರಮೇಲು, ಶ್ರೀಮತಿ ಸುಜಾತ ಅಣ್ಣಿ ಪೂಜಾರಿ, ಕಾರ್ಯದರ್ಶಿ ಗುರುರಾಜ್ ಸಾಲ್ಯಾನ್, ಕೋಶಧಿಕಾರಿ ಸಂತೋಷ್ ಕಾಶಿಬೆಟ್ಟು, ನಿರ್ದೇಶಕರಾದ ಮನೋಜ್ ಕುಂಜರ್ಪ,ಕಿಶೋರ್ ಪೆರ್ಲ, ಸಂಘಟನ ಕಾರ್ಯದರ್ಶಿ ಶ್ರೀಮತಿ ವೇದಾ ಪ್ರಭಾಕರ್, ಘಟಕದ ಸಲಹೆಗಾರರಾದ ನಿವೃತ್ತ ಬಿ.ಎಸ್.ಎನ್.ಎಲ್ ಇಂಜಿನಿಯರ್ ಅಣ್ಣಿ ಪೂಜಾರಿ ಉಜಿರೆ, ರವಿ ಕುಮಾರ್ ಬರಮೇಲು,ಪುರುಷೋತ್ತಮ ಧರ್ಮಸ್ಥಳ ,ಚಂದ್ರಶೇಖರ್ ಇಂದಬೆಟ್ಟು, ಯುವವಾಹಿನಿ ಕೇಂದ್ರ ಸಮಿತಿಯ ನಾಮನಿರ್ದೇಶಿತ ಸದಸ್ಯರಾದ ಯಶೋಧರ ಚಾರ್ಮಾಡಿ,ಘಟಕದ ಸದಸ್ಯರಾದ ಗುರುಪ್ರಸಾದ್ ಕೋಟ್ಯಾನ್ ಉಜಿರೆ ,ಪ್ರಶಾಂತ್ ಬರಮೇಲು ಉಪಸ್ಥಿತರಿದ್ದರು.







