ಪ್ರತಿಭಟನೆಯಲ್ಲೂ ಮಾಸ್ಕ್ ಧರಿಸಿ-ವೈಯಕ್ತಿಕ ಅಂತರದ ಜಾಗೃತಿ
ಕಾರ್ಮಿಕ ಕಾಯಿದೆಗೆ ತಿದ್ದುಪಡಿ ತರುವ ನೆಪದಲ್ಲಿ ಕಾರ್ಮಿಕರ ವಿರೋದವಾಗಿ ತಿದ್ದುಪಡಿ ಮಾಡಲು ಸುಗ್ರಿವಾಜ್ಞೆ ಮಾಡ ಹೊರಟ ರಾಜ್ಯದ ಬಿಜೆಪಿ ಸರಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ದ ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಕಮ್ಯೂನಿಸ್ಟ್ ನಾಯಕ ಬಿ.ಎಂ.ಭಟ್ ನಾಯಕತ್ವದಲ್ಲಿ ಮೇ 16ರಂದು ಪ್ರತಿಭಟನೆ ನಡೆಯಿತು. ಕೆಲಸದ ಅವಧಿ ಹೆಚ್ಚಳ, ಸವಲತ್ತುಗಳ ಕಡಿತ ಇತ್ಯಾದಿ ತಿದ್ದುಪಡಿಯನ್ನ ವಿರೋದಿಸಿದ್ದಲ್ಲದೇ; ಎಲ್ಲಾ ವಿಭಾಗದ ದುಡಿಯುವ ಜನರಿಗೆ ಪ್ಯಾಕೇಜು ನೀಡಲು ಹಾಗೂ ಬಡ ಮಹಿಳೆಯರ ಸಾಲ ಮನ್ನಾ ಮಾಡಲು ಒತ್ತಾಯಿಸಲಾಯಿತು.






