ನಾರಾವಿ ಜನಸೇವಾ ಟ್ರಸ್ಟ್ ಸದಸ್ಯರಿಂದ ರಕ್ತದಾನ

Facebook
Twitter
LinkedIn
WhatsApp

ಕೊರೊನಾ ಮಹಾಮಾರಿಯಿಂದಾಗಿ ಕೆಎಂಸಿ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರದಲ್ಲಿ ರಕ್ತ ಸಂಗ್ರಹಣೆಯಲ್ಲಿ ಕೊರತೆ ಕಂಡು ಬಂದ ಕಾರಣ ಮೇ 31ರಂದು ಭಾನುವಾರದಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತಕೇಂದ್ರದಲ್ಲಿ ಜನಸೇವಾ ಟ್ರಸ್ಟಿನ ಮಾರ್ಗದರ್ಶಕರಾದ ಡಾ.ಪ್ರಸಾದ್ ಬಿ ಶೆಟ್ಟಿ ನಾರಾವಿ ಇವರ ಸಹಕಾರದಲ್ಲಿ ಟ್ರಸ್ಟ್ ನ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ 25 ಮಂದಿ ರಕ್ತದಾನಿಗಳು ರಕ್ತದಾನ ಮಹಾದಾನ ಎನ್ನುವ ಧ್ಯೇಯದೊಂದಿಗೆ ಸ್ವ ಇಚ್ಛೆಯಿಂದ ಆಗಮಿಸಿ ನಮ್ಮೊಂದಿಗೆ ರಕ್ತದಾನವನ್ನು ಮಾಡಿ ಮತ್ತೊಂದು ಜೀವಕ್ಕೆ ಉಸಿರಾಗಲು ಕಾರಣೀಕರ್ತ ರಾದರು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷರಾದ ಉದಯ್ ಹೆಗ್ಡೆ ನಾರಾವಿ, ಪ್ರಧಾನ ಕಾರ್ಯದರ್ಶಿ ವಸಂತ್ ಆಚಾರ್ಯ ಮತ್ತು ನಿರ್ದೇಶಕರುಗಳಾದ ಅಭಿಜಿತ್ ಜೈನ್,ಜಗದೀಶ್ ಜೈನ್ ಮತ್ತು ಅಶೋಕ್ ಜೈನ್ ಉಪಸ್ಥಿತರಿದ್ದು ರಕ್ತದಾನ ಶಿಬಿರಕ್ಕೆ ಸಹಕರಿಸಿದರು.

Latest News

Related Posts