ಅಭಯಚಂದ್ರ ಜೈನ್ ಅವರಿಂದ 57 ಪೌರಕಾರ್ಮಿಕರಿಗೆ ಆಹಾರ ಕಿಟ್ ಔಷಧಿ ಕಿಟ್ ವಿತರಣೆ

ಅಭಯಚಂದ್ರ ಜೈನ್ ಅವರಿಂದ 57 ಪೌರಕಾರ್ಮಿಕರಿಗೆ ಆಹಾರ ಕಿಟ್ ಔಷಧಿ ಕಿಟ್ ವಿತರಣೆ
Facebook
Twitter
LinkedIn
WhatsApp

ಮೂಡಬಿದಿರೆ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಮೂಡಬಿದಿರೆಯ ಪುರಸಭಾ ವ್ಯಾಪ್ತಿಯ ಸುಮಾರು 57 ಪೌರಕಾರ್ಮಿಕರಿಗೆ ಆಹಾರ ಕಿಟ್ ಮತ್ತು ಹೋಮ್ ಐಸೊಲೇಷನ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಹಾಗೂ ಜಿಲ್ಲಾ ಕಾಂಗ್ರೆಸ್ ನಾಯಕರಾದ ಮಿಥುನ್ ರೈ ಭಾಗವಹಿಸಿ ಕಿಟ್ ಗಳನ್ನು ವಿತರಿಸಿದರು.ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಲೇರಿಯನ್ ಸಿಕ್ವೇರಾ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಜಯ ಕುಮಾರ್ ಶೆಟ್ಟಿ, ವಕ್ತಾರರಾದ ರಾಜೇಶ್ ಕಡಲಕೆರೆ, ಪುರಸಭಾ ಸದಸ್ಯರಾದ ಸುರೇಶ್ ಕೋಟ್ಯಾನ್, ಸುರೇಶ್ ಪ್ರಭು ಕೊರಗಪ್ಪ, ಜೊಸ್ಸಿ ಮೆನೆಜಸ್, ಪುರಂದರ ದೇವಾಡಿಗ, ಕಲ್ಲಬೆಟ್ಟು ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಪ್ರವೀಣ್ ಜೈನ್ ಶಿರ್ತಾಡಿ, ಎಪಿಎಂಸಿ ಸದಸ್ಯರಾದ ಚಂದ್ರಹಾಸ ಸನಿಲ್, ಅರುಣ್ ಕುಮಾರ್ ಶೆಟ್ಟಿ, , ನಿತೀನ್ ಬೆಳುವಾಯಿ, ಕಿರಣ್ ಕುಮಾರ್,ಕುಮಾರ್ ಪೂಜಾರಿ, ವಾಸುದೇವ್ ನಾಯಕ್, ಸತೀಶ್ ಭಂಡಾರಿ, ರೇಕ್ಸಾನ್ ಪಿಂಟೊ,ರಿಹಾನ್ ಬೆಳುವಾಯಿ,ಪ್ರವೀಣ್ ಮೆಂಡೊನ್ಸಾ,ಸುಕುಮಾರ್ ಜೈನ್, ನಿಸ್ಸಾಮ್ , ಗಣೇಶ್, ಸಂತೋಷ್ ಶೆಟ್ಟಿ, ಕ್ಲಾರಿಯೊ ಡಿಸೋಜ, ರಿವಾನ್, ಮುಂತಾದವರು ಉಪಸ್ಥಿತರಿದ್ದರು.

Latest News

Related Posts