ಬೆಳ್ತಂಗಡಿ: ನಿರ್ಮಲ ಮನಸ್ಸು- ನೈರ್ಮಲ್ಯ ಪರಿಸರ ಎಂಬ ಘೋಷಣೆಯೊಂದಿಗೆ ಕಾರ್ಯಚರಿಸುತ್ತಿರುವಸಹಾಯ್ ಉಪ್ಪಿನಂಗಡಿ ಸರ್ಕಲ್ನ ಕುಪ್ಪೆಟ್ಟಿ ಸೆಂಟರ್ ವ್ಯಾಪ್ತಿಯ ಸ್ವಚ್ಚತಾ ಅಭಿಯಾನವನ್ನು ಸರಕಾರಿ ಹಿರಿಯ ಪ್ರಾಥಮಿಜ ಶಾಲೆ ಇಳಂತಿಲದ ವಠಾರದಲ್ಲಿ ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ನ್ಯಾಯವಾದಿ ಮನೊಹರ್ ಕುಮಾರ್ ಸಹಾಯ್ ತಂಡ ಕೊರೋನಾ ಮಹಾಮಾರಿಯ ಸಂದರ್ಭದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ನಡೆಸಿದ್ದು, ನೊಂದವರ ನೆರವಿಗೆ ಧಾವಿಸುವ ಮೂಲಕ ಕಾರ್ಯಾಚರಣೆ ನಡೆಸುವ ಸಹಾಯ್ ತಂಡ ರಾಜ್ಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಉಪ್ಪಿನಂಗಡಿ ಸಹಕಾರಿ ಸಂಘದ ಅಧ್ಯಕ್ಷರಾದ ಪ್ರಸಾದ್ ಕೆ. ವಿ. ಭಟ್ ಮಾತನಾಡಿ, ನಮ್ಮ ಗ್ರಾಮದಲ್ಲಿ ಕೋರೋನಾ ಪಾಸಿಟಿವ್ ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಝ್ ಮಾಡುವುದರ ಜೊತೆಗೆ ಸಂಕಷ್ಟದಲ್ಲಿದ್ದವರಿಗೆ ಕಿಟ್ ನೀಡುವುದು, ಸ್ವಚ್ಚತೆಯನ್ನು ಕಾಪಾಡುವುದು ಸಹಿತ ಹಲವಾರು ಸೇವೆಯನ್ನು ಮಾಡುತ್ತಾ ಬರುತ್ತಿದ್ದೀರಾ. ಸಹಾಯ್ ತಂಡದ ಸೇವೆಯು ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.ಕಾರ್ಯಕ್ರಮವು SYS, SSF ಹಾಗೂ KMJಯ ಸಹಕಾರದೊಂದಿಗೆ ನಡೆಯಿತು. ಅಭಿಯಾನ ಚಾಲನಾ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಆನಂದ ಪೂಜಾರಿ, ಸಮಿತಿ ಸದಸ್ಯರಾದ ಈಶ್ವರ ಗೌಡ ಉಪಸ್ಥಿತರಿದ್ದರು. ಸಹಾಯ್ ಕುಪ್ಪೆಟ್ಟಿ ವಲಯ ಉಸ್ತುವಾರಿ ಯಾದ ಅತಾವುಲ್ಲಾ ಹಿಮಮಿ ಸಖಾಫಿರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿಅಬ್ದುಲ್ ಖಾದರ್ ಮದನಿ ಉಸ್ತಾದರು ದುವಾ ನೆರವೇರಿಸಿದರು. ಗ್ರಾಮ ಪಂಚಾಯತ್ ಸದಸ್ಯರಾದ ಸಿದ್ದೀಕ್ ಸ್ವಾಗತಿಸಿದರು. ಸಹಾಯ್ ಉಪ್ಪಿನಂಗಡಿ ಸರ್ಕಲ್ ಉಸ್ತುವಾರಿಯಾದ ಯನ್. ಎಂ. ಶರೀಫ್ ಸಖಾಫಿ ದಿಕ್ಸೂಚಿ ಭಾಷಣ ಮಾಡಿದರು. ಸಹಾಯ್ ತಂಡದ ನಾಯಕರಾದ ಜಿ. ಯಂ. ಕುಂಞ ಜೊಗಿಬೊಟ್ಟು, KMJ ಗ್ರಾಮ ಸಮಿತಿ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ, KMJ ಕಣಿಯೂರು ಬ್ಲಾಕ್ ಕಾರ್ಯದರ್ಶಿ ಝಾಕಿರ್ ಹುಸೇನ್, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರಾದ ಲತೀಫ್ ಕನ್ಯಾರಕೋಡಿ, ಸಹಾಯ್ ಕುಪ್ಪೆಟ್ಟಿ ವಲಯ ತುರ್ತು ಸೇವಾ ತಂಡದ ಉಸ್ತುವಾರಿ ಶರೀಫ್ ಯನ್., ಯನ್. ಬಿ. ಅಶ್ರಫ್ ಮಾಪಲ್ ಹಾಗೂ SYS SSF ಸ್ಥಳಿಯ ಶಾಖೆಗಳ ಅಧ್ಯಕ್ಷರುಗಳು ಭಾಗವಹಿಸಿದ್ದರು.






