ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿಯ ಬೆಳ್ತಂಗಡಿ ಮಂಡಲ ಎಸ್. ಟಿ. ಮೋರ್ಚಾದ ವತಿಯಿಂದ ಕೊಕ್ಕಡ ಗ್ರಾಮದ ಮುಂಡೂರು ಪಳಿಕೆಯಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಜನ್ಮದಿನದ ಪ್ರಯುಕ್ತ ವೃಕ್ಷಾರೊಪಣ ಕಾರ್ಯಕ್ರಮದಂತೆ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ ಹಾಗೂ ತಾಲೂಕು ಎಸ್. ಟಿ. ಮೋರ್ಚಾ ಅಧ್ಯಕ್ಷ ಹರೀಶ್ ಎಳನೀರು, ಕಾರ್ಯದರ್ಶಿ ವಿಠಲ ಕೊಕ್ಕಡ, ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹಾಗೂ ಕೊಕ್ಕಡ ಗ್ರಾಮ ಪಂಚಾಯತ್ ಅಧ್ಯಕ್ಷ ಯೊಗೀಶ್ ಆಲಂಬಿಲ, ಪಂಚಾಯತ್ ಸದಸ್ಯರಾದ ವಿಶ್ವನಾಥ ಕಕ್ಕುದೋಳಿ, ಪ್ರಮೀಳಾ,ಶರತ್, ಪ್ರಭಾಕರ್ ಮಲ್ಲಿಗೆಮಜಲು ಹಾಗೂ ಎಸ್. ಟಿ. ಮೋರ್ಚಾ ಬೂತ್ ಸಂಚಾಲಕ ಗಣೇಶ್, ಸಹಸಂಚಾಲಕ ಹರೀಶ್, ಹಾಗೂ ಕಾರ್ಯಕರ್ತರಾದ ಭರತ್, ಯಶವಂತ್, ಭಾಸ್ಕರ್, ಬಾಬು ಪಿತ್ತಿಲಕೋಡಿ, ವಸಂತ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.







