ಬೆಳ್ತಂಗಡಿ: ಬೆಸ್ಟ್ ಪೌಂಡೇಶನ್ ಬೆಳ್ತಂಗಡಿ ವತಿಯಿಂದ ಮುಂಡೂರು ಗ್ರಾಮದ ಸುಮಾರು 90ಕುಟುಂಬಗಳಿಗೆ ಶಾರದಾಂಬ ಯುವಕ ಮಂಡಲದ ವಠಾರದಲ್ಲಿ ಹೈಕೋರ್ಟ್ ವಕೀಲರು ಬೆಸ್ಟ್ ಫೌಂಡೇಶನ್ನ ರಕ್ಷಿತ್ ಶಿವರಾಂ ರವರ ನೇತೃತ್ವದಲ್ಲಿ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಂಡೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ಅರವಿಂದ ಭಟ್, ಮೇಲಂತಬೆಟ್ಟು ಗ್ರಾಮ ಪಂಚಾಯಿತ್ನ ಉಪಾಧ್ಯಕ್ಷೆ ಸವಿತಾ, ಗ್ರಾಮ ಪಂಚಾಯಿತಿನ ಮಾಜಿ ಸದಸ್ಯೆ ನೀತಾ ಮಹೇಶ್ ಕುಮಾರ್, ಬೆಳ್ತಂಗಡಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಪೈ, ನವೀನ್ ಗೌಡ ಬೆಳ್ತಂಗಡಿ, ಅಜಯ್ ಮಟ್ಲ, ರಾಘವ್ ಮೆಲಂತಬೆಟ್ಟು, ಪ್ರಗತಿಭಂದು ಒಕ್ಕೂಟ ಮುಂಡೂರಿನ ಅಧ್ಯಕ್ಷ ಚಾಮರಾಜ ಸೇಮಿತ, ಆಶಾಕಾರ್ಯಕರ್ತೆ ಸುಶೀಲ ಶೆಟ್ಟಿ, ದೇವಸ್ಥಾನದ ಮಹಿಳಾ ಸಮಿತಿಯ ಅಧ್ಯಕ್ಷೆ ಭಾರತಿ, ಸ್ಟೇನಿ ವೇಗಸ್, ಹರಿಶ್ಚಂದ್ರ ಹೆಗ್ಡೆ, ಹಕೀಂ ದರ್ಕಾಸ್, ದಿನೇಶ್ ಕೊಡಕಾಲ್, ಅಶೋಕ್ ಕುಮಾರ್ ಜೈನ್, ಇಸುಬು ಬಡಕ್ಕಿಲ, ಚೆನ್ನಪ್ಪ ಬಂಗೇರ, ರಮೇಶ್ ದೇವಾಡಿಗ ಜಯಾನಂದ ಬಂಗೇರ, ಅಶೋಕ್ ಕುಮಾರ್ ಕೊಡಕ್ಕಾಲ್ ಮತ್ತಿತರರು ಹಾಜರಿದ್ದರು.






