Warning: Constant WP_AUTO_UPDATE_CORE already defined in /home/u584898912/domains/jaikannadamma.in/public_html/wp-config.php on line 100
ತಣ್ಣೀರುಪಂತ ಸೊಸೈಟಿಗೆ ಪ್ರಶಸ್ತಿಯ ಗೌರವ - Jai Kannadamma

ತಣ್ಣೀರುಪಂತ ಸೊಸೈಟಿಗೆ ಪ್ರಶಸ್ತಿಯ ಗೌರವ

ತಣ್ಣೀರುಪಂತ ಸೊಸೈಟಿಗೆ ಪ್ರಶಸ್ತಿಯ ಗೌರವ
Facebook
Twitter
LinkedIn
WhatsApp

ಬೆಳ್ತಂಗಡಿ: 2020-21ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸದಸ್ಯರ ಸಾಲ ವಸೂಲಾತಿಯಲ್ಲಿ 100% ಸಾಧನೆ ಮಾಡುವುದರ ಜೊತೆಗೆ ಎಲ್ಲ ಆರ್ಥಿಕ ವ್ಯವಹಾರದಲ್ಲಿ ಸರ್ವತೋಮುಖ ಪ್ರಗತಿಯನ್ನು ಸಾಧಿಸಿದ ತಣ್ಣೀರುಪಂತ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವಸದಸ್ಯರ ಹಾಗೂ ಸಿಬ್ಬಂದಿವರ್ಗದವರ ಪರವಾಗಿ ಅಧ್ಯಕ್ಷ ನಿರಂಜನ ಬಾವಂತಬೆಟ್ಟು ಮತ್ತು‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಂದ್ರ ಪ್ರಸಾದ್‌ರನ್ನು ಡಿಸೆಂಬರ್ 13ರಂದು ಮಂಗಳೂರಿನಲ್ಲಿ‌ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ವಾರ್ಷಿಕ ಮಹಾಸಭೆಯ ಸಂದರ್ಭ ಬ್ಯಾಂಕಿನ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್ ಪ್ರಶಸ್ತಿ ನೀಡಿ ಪುರಸ್ಕರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ವೇದಿಕೆಯಲ್ಲಿದ್ದು ಸಹಕರಿಸಿದರು.

Latest 5

Related Posts