ಕರ್ನಾಟಕ ಆಯುಷ್ ಫೆಡರೆಷನ್ ಆಫ್ ಇಂಡಿಯಾ ಬೆಳ್ತಂಗಡಿ ಘಟಕದ ಪದಾಧಿಕಾರಿಗಳ ಪದಗ್ರಹಣ

ಕರ್ನಾಟಕ ಆಯುಷ್ ಫೆಡರೆಷನ್ ಆಫ್ ಇಂಡಿಯಾ ಬೆಳ್ತಂಗಡಿ ಘಟಕದ ಪದಾಧಿಕಾರಿಗಳ ಪದಗ್ರಹಣ
Facebook
Twitter
LinkedIn
WhatsApp

ಬೆಳ್ತಂಗಡಿ: ಕರ್ನಾಟಕ ಆಯುಷ್ ಫೆಡರೆಷನ್ ಆಫ್ ಇಂಡಿಯಾದ (ಎ.ಎಫ್.ಐ.) ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಅಕ್ಟೋಬರ್ 13ರಂದು ಉಜಿರೆಯ ಓಷಿಯನ್ ಪರ್ಲ್ ಹೋಟೆಲ್‌ನ ಸಭಾಂಗಣದಲ್ಲಿ ಎ.ಎಫ್.ಐ. ಬೆಳ್ತಂಗಡಿ ಘಟಕದ ನೂತನ ಅಧ್ಯಕ್ಷೆ ಡಾ| ಸುಷ್ಮಾ ಡೋಂಗ್ರೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಪದಗ್ರಹಣ ಸಭಾರಂಭವನ್ನು ಎ.ಎಫ್.ಐ. ದಕ್ಷಿಣಕನ್ನಡ ಜಿಲ್ಲಾ ಘಟಕದ ಅಧ್ಯಕ್ಷರಾಗಿರುವ ಮಂಗಳೂರಿನ ಡಾ| ಕೃಷ್ಣ ಗೋಖಲೆ ನಿರ್ವಹಿಸಿಕೊಟ್ಟರು.ಮುಖ್ಯ ಅತಿಥಿಗಳಾಗಿ ಕೆ.ಎಂ.ಸಿ. ಆಸ್ಪತ್ರೆಯ ಖ್ಯಾತ ವೈದ್ಯರೂ ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳೂ ಆಗಿರುವ ಡಾ| ಚಕ್ರಪಾಣಿ ಹಾಗೂ ಕೆ.ಎಂ.ಸಿ. ಆಸ್ಪತ್ರೆಯ ಖ್ಯಾತ ಸೊಂಟ ಮತ್ತು ಮಂಡಿ ಶಸ್ತ್ರ ಚಿಕಿತ್ಸಾ ತಜ್ಞರಾಗಿರುವ ಡಾ| ಯೋಗೀಶ್ ಕಾಮತ್ ಭಾಗವಹಿಸಿದ್ದರು. ತಾಲೂಕಿನ ಹಿರಿಯ ವೈದ್ಯ ಡಾ| ಮೋಹನ್ ದಾಸ್ ಗೌಡ ಕೊಕ್ಕಡ ಹಾಗೂ ಹಿಂದಿನ ಅವಧಿಯ ಕಾರ್ಯದರ್ಶಿ ಅಳದಂಗಡಿಯ ಡಾ|ಹರಿಪ್ರಸಾದ್ ಸುವರ್ಣ ಶುಭಹಾರೈಸಿದರು.ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ಹೋಮಿಯೋಪತಿ ವೈದ್ಯೆಯಾಗಿರುವ ಡಾ। ಗ್ರೆಟ್ಟಾ ಲೋಬೋ ಸ್ವಾಗತಿಸಿ ಡಾ| ಪ್ರದೀಪ್ ನಾವೂರು ವಂದಿಸಿದರು. ಉಜಿರೆ ನ್ಯಾಚುರಪತಿ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿನಿ ಡಾ| ಚಾಂದಿನಿ ಕಾರ್ಯಕ್ರಮ ನಿರೂಪಿಸಿದರು. ನೂತನ ಘಟಕದ ಅಧ್ಯಕ್ಷರಾಗಿ ಡಾ| ಸುಷ್ಮಾ ಡೋಂಗ್ರೆ ಅಳದಂಗಡಿ, ಕಾರ್ಯದರ್ಶಿಯಾಗಿ ಡಾ| ಪದ್ರೀಪ್ ನಾವೂರು ಉಪಾಧ್ಯಕ್ಷರಾಗಿ ಡಾ|ಸುಜಾತ ಸರಳಾಯ, ಡಾ| ಶಿವಾನಂದ ಸ್ವಾಮಿ ಹಾಗೂ ಡಾ|ಗ್ರೆಟ್ಟಾ ಲೋಬೋ, ಜೊತೆಕಾರ್ಯದರ್ಶಿಯಾಗಿ ಡಾ| ಗಣೇಶ್ ಪ್ರಸಾದ್ ಕೊಕ್ಕಡ, ಕೋಶಾಧಿಕಾರಿಯಾಗಿ ಡಾ| ಅಮಿತ್ ಖಾಡಿಲ್ಕರ್ ಜವಾಬ್ದಾರಿಯನ್ನು ವಹಿಸಿಕೊಂಡರು. ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ಆಯುಷ್ ವೈದ್ಯರುಗಳು ಭಾಗವಹಿಸಿದ್ದರು. ನಂತರ ಕೆ.ಎಂ.ಸಿ. ವೈದ್ಯ ಡಾ| ಚಕ್ರಪಾಣಿ ಹಾಗೂ ಡಾ| ಯೋಗೀಶ್ ಕಾಮತ್ ಇವರು ವೈದ್ಯರುಗಳಿಗೆ ಕಾರ್ಯಾಗಾರವನ್ನು ನಡೆಸಿಕೊಟ್ಟರು.ಎ.ಎಫ್.ಐ. ಘಟಕದ ಜಿಲ್ಲಾ ಕಾರ್ಯದರ್ಶಿ ಡಾ| ಧನಂಜಯ್,ದಕ್ಷಿಣ ಕನ್ನಡದ ಆಯುಷ್ ಪೆಢರೆಷನ್ ನ ಪೂರ್ವಾಧ್ಯಕ್ಷ ಡಾ|ನಾರಾಯಣ ಪುತ್ತೂರು ಉಪಸ್ಥಿತರಿದ್ದರು.

Latest 5

Related Posts