ಬೆಳ್ತಂಗಡಿ: ನಡ ಗ್ರಾಮದ ಬಸ್ರಾಯ ಕಿಂಡಿ ಅಣೆಕಟ್ಟಿನಲ್ಲಿ ನಲ್ಲಿ ಸಿಲುಕಿಕೊಂಡಂತಹ ಮರದ ಕೊಂಬೆ ಹಾಗೂ ಕಸಕಡ್ಡಿಗಳನ್ನು ಸ್ಥಳೀಯರ ಸಹಕಾರದಿಂದ ಶ್ರಮದಾನದ ಮೂಲಕ ತೆರವುಗೊಳಿಸಲಾಯಿತು.ನಡ ಗ್ರಾಮದ ಅಜಯನಗರ ಹಾಗೂ ಅಣ್ಣಪ್ಪ ಕೋಡಿಯ ನಿವಾಸಿಗರಾದ ಜೈಸನ್ ಡಿ’ಸೋಜ, ವಿಕ್ಟರ್ ಡಿ’ಸೋಜಾ, ವಿಜಯ್ ಪೌಲ್, ಶ್ಯಾಮ್ ಭಟ್, ಲಿಂಗಪ್ಪ, ಬಿನೋಯ್ ಹಾಗೂ ಬೆಳ್ತಂಗಡಿ ಸಿ.ಎ. ಬ್ಯಾಂಕ್ ನಿರ್ದೇಶಕ ಶ್ರೀನಾಥ್ ಕೆ.ಎಂ. ಮತ್ತಿತರರು ಶ್ರಮದಾನದಲ್ಲಿ ಭಾಗವಹಿಸಿದ್ದರು. ಡ್ಯಾಮಿಗೆ ಆಗಲಿರುವ ತೊಂದರೆಯನ್ನು ಸರಿಪಡಿಸಲಾಯಿತು.






