ಬೆಳ್ತಂಗಡಿ: 1997-98ನೇ ಸಾಲಿನಲ್ಲಿ ಸುಮಾರು 604 ಸದಸ್ಯರನ್ನು ಒಳಗೊಂಡು ರೂಪಾಯಿ 6 ಲಕ್ಷದಷ್ಟು ಪಾಲು ಬಂಡವಾಳದೊಂದಿಗೆ 1998 ಜನವರಿ 26 ರಂದು ‘ಪರಸ್ಪರ ಸಹಕಾರ’ ಎಂಬ ಧ್ಯೇಯವನ್ನು ಮುಂದಿಟ್ಟುಕೊಂಡು ಅಂದಿನ ಮಂಗಳೂರು ಧರ್ಮಪ್ರಾಂತ್ಯದ ಧರ್ಮಧ್ಯಕ್ಷರಾದ ವಂದನೀಯ ಬಿಷಪ್ ಅಲೋಶಿಯಸ್ ಪಾವ್ಲ್ ಡಿ’ಸೊಜರವರಿಂದ ಆರ್ಶೀವಚನಗೊಂಡು, ಅಂದಯ ಬೆಳ್ತಂಗಡಿಯ ವಿದಾನಸಭಾ ಕ್ಷೇತ್ರದ ಶಾಸಕರಾಗಿದ್ದ ಕೆ. ವಸಂತ ಬಂಗೇರ ರಿಂದ ಉದ್ಘಾಟನೆಗೊಂಡು; ಸುಮಾರು ನಾಲ್ಕು ವರ್ಷಗಳ ಕಾಲ ಬೆಳ್ತಂಗಡಿಯ ಪಿಂಟೊ ಕಾಂಪ್ಲೆಕ್ಸ್ನಲ್ಲಿ ಎಲ್ಲರ ಸಹಕಾರದೊಂದಿಗೆ ವ್ಯವಹಾರ ನಡೆಸಿ ದಿನಾಂಕ 07-07-2001ರಂದು ಸುಮಾರು 1,000 ಚದರಅಡಿ ವಿಸ್ತೀರ್ಣದ ಸ್ವಂತ ಕಟ್ಟಡ ಸ್ಥಳವನ್ನು ಖರೀದಿಸಿ, ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಬಿಷಪ್ ಲಾರೆನ್ಸ್ ಮುಕ್ಕುಝಿಯವರಿಂದ ಆಶೀರ್ವಚನಗೊಂಡಿತು. ಸಹಕಾರ ಇಲಾಖೆಯ ಸಹಕಾರದಿಂದ; ಸದಸ್ಯರ ಹಾಗೂ ಗ್ರಾಹಕರ ಸಹಕಾರದಿಂದ ಕಾನೂನು ಸಲಹೆಗಾರರ ಸಲಹೆಯೊಂದಿಗೆ 2007ರಲ್ಲಿ ನಾರಾವಿ ಶಾಖೆಯನ್ನೂ, 2012ರಲ್ಲಿ ಅಳದಂಗಡಿ ಶಾಖೆಯನ್ನೂ, 2021ರಲ್ಲಿ ವೇಣೂರು ಶಾಖೆಯನ್ನೂ ತೆರೆದು ವ್ಯವಹರಿಸಲು ಅನೇಕ ಮಹನೀಯರು ಸಹಕರಿಸುತ್ತಾರೆ. ನಮ್ಮ ಸಹಕಾರ ಸಂಘವು ಹತ್ತು ಹಲವು ಜನಪರ ಕೆಲಸಗಳನ್ನು ಕೈಗೊಂಡಿರುತ್ತದೆ. ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನ, ಬಡವರಿಗೆ ಧನ ಸಹಾಯ, ವೈದಕೀಯ ನೆರವು, ಧಾರ್ಮಿಕ ಕೆಲಸಗಳಿಗೆ ಧನ ಸಹಾಯ ಮಾಡುತ್ತಿದ್ದು, ಅನೇಕ ರೀತಿಯ ಕಡಿಮೆ ಬಡ್ಡಿ ದರದಲ್ಲಿ ಗ್ರಾಹಕರರಿಗೆ ಸಾಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಠೇವಣಿದಾರರಿಗೆ ಆಕರ್ಷಕ ಬಡ್ಡಿಯನ್ನು ನೀಡುತ್ತಿದ್ದೇವೆ. ಸಾಲ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಪ್ರಸ್ತುತ ನಮ್ಮ ಸಹಕಾರ ಸಂಘವು 2,700 ಸದಸ್ಯರನ್ನು ಒಳಗೊಂಡು ರೂಪಾಯಿ 93 ಲಕ್ಷ ಪಾಲು ಬಂಡವಾಳ ಮೊತ್ತವನ್ನು ಸಂಗ್ರಹಿಸಿ; ರೂಪಾಯಿ 95 ಕೋಟಿ ಮೊತ್ತದ ಠೇವಣಿ ಸಂಗ್ರಹಿಸಿ ಅನೇಕ ನಿಧಿಗಳನ್ನು ಸ್ಥಾಪಿಸಿ, 100ಕೋಟಿ ರೂಪಾಯಿ ದುಡಿಯುವ ಬಂಡವಾಳ ಹೊಂದಿದ್ದು; ಒಟ್ಟು ಸಾಲ 80 ಕೋಟಿ ರೂಪಾಯಿ ಹೊರಬಾಕಿ ಇರುತ್ತದೆ. ನಮ್ಮ ಸಹಕಾರ ಸಂಘವು ಪ್ರತಿವರ್ಷವು ಲಾಭದಲ್ಲಿ ನಡೆಯುತ್ತಿದ್ದು ಕಳೆದ ಸಾಲಿನಲ್ಲಿ ಸರಿಸುಮಾರು 3 ಕೋಟಿ ರೂಪಾಯಿ ಲಾಭಗಳಿಸಿರುತ್ತದೆ. ಬೆಳ್ಳಿಹಬ್ಬದ ಸವಿನೆನಪಿಗಾಗಿ ಕಳೆದ 3 ವರ್ಷದಿಂದ 25% ಪಾಲುಮುನಾಫೆಯನ್ನು ನೀಡುತ್ತಿದ್ದೇವೆ. ಪ್ರಸ್ತುತ ಸಂಘದಲ್ಲಿ ಅಧ್ಯಕ್ಷರಾಗಿ ಶ್ರೀ ಹೆನ್ರಿ ಲೋಬೊ, ಉಪಾಧ್ಯಕ್ಷರಾಗಿ ಶ್ರೀ ಡೇನಿಸ್ ಸಿಕ್ವೇರಾ, ನಿರ್ದೇಶಕರಾಗಿ ಶ್ರೀ ಜೇಮ್ಸ್ ಡಿ ಸೋಜ, ಶ್ರೀ ಹೆರಾಲ್ಡ್ ಪಿಂಟೊ, ಶ್ರೀ ಜೋಸೆಫ್ ಪೀಟರ್ ಸಲ್ಡಾನ್ಹಾ, ಶ್ರೀ ಅಲ್ಫೋನ್ಸ್ ರೊಡ್ರೀಗಸ್, ಶ್ರೀ ವಿನ್ಸೆಂಂಟ್ ಪ್ರಕಾಶ್ ಪಿಂಟೊ, ಶ್ರೀ ತೋಮಸ್ ಆರ್. ನೊರೊನ್ಹಾ, ಶ್ರೀ ಪ್ರಸಾದ್ ಪಿಂಟೊ, ಶ್ರೀ ರಫಾಯಲ್ ವೇಗಸ್, ಶ್ರೀ ಪೌಲಿನ್ ರೇಗೊ, ಶ್ರೀಮತಿ ಪ್ಲಾವಿಯ ಡಿ’ಸೋಜ, ಶ್ರಿ ವಿನಯ್ ಜೋನ್ಸನ್ ಡಿ’ಸೋಜ, ಶ್ರೀ ರಿಯೋ ಮೈಕಲ್ ರೊಡ್ರೀಗಸ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಶ್ರೀ ಐವನ್ ಗೊನ್ಸಾಲ್ವಿಸ್ ಹಾಗೂ ಸಿಬ್ಬಂದಿ ವರ್ಗದವರು ಉತ್ತಮ ಸೇವೆ ನೀಡುತ್ತಿದ್ದಾರೆ.ಪ್ರಸ್ತುತ ಸಹಕಾರ ಸಂಘವು ಸ್ವಂತ ಜಾಗ ಖರೀದಿಸಿ, ಕಟ್ಟಡ ನಿರ್ಮಿಸಿ ಇದೇ ಜನವರಿ 23 ರಂದು ಬೆಳಿಗ್ಗೆ 10-30 ಗಂಟೆಗೆ ಭವ್ಯವಾದ ಎಲ್ಲಾ ಸೌಲಭ್ಯಗನ್ನೊಳಗೊಂಡ ‘ಆಶಾಕಿರಣ’ ವಾಣಿಜ್ಯ ಸಂಕೀರ್ಣವು ಹೆನ್ರಿ ಲೋಬೊರವರ ಅಧ್ಯಕ್ಷತೆಯಲ್ಲಿ ಹೋಲಿ ರಿಡೀಮರ್ ಚರ್ಚ್ನ ಪ್ರಧಾನ ಧರ್ಮಗರುಗಳಾದ ಅತೀ ವಂದನೀಯ ವಾಲ್ಟರ್ ಡಿಮೆಲ್ಲೊರವರ ಆಶೀರ್ವಚನದೊಂದಿಗೆ ಲೋಕಾರ್ಪಣೆಗೊಳ್ಳಲಿದೆ. ಉಧ್ಘಾಟಕರಾಗಿ ಶ್ರೀ ಹರೀಶ್ ಪೂಂಜ, ಶಾಸಕರು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ, ಶ್ರೀ ರಕ್ಷಿತ್ ಶಿವರಾಂ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ, ಎಚ್.ಎನ್. ರಮೇಶ್ ಸಹಕಾರ ಸಂಘಗಳ ಉಪನಿಬಂದಕರು, ಮಂಗಳೂರು, ಸಹಕಾರ ರತ್ನ ಶ್ರೀ ಅನಿಲ್ ಲೋಬೊ, ಅಧ್ಯಕ್ಷರು ಎಮ್ಸಿಸಿ ಬ್ಯಾಂಕ್, ಮಂಗಳೂರು. ಗೌರವ ಅತಿಥಿಗಳಾಗಿ ಶ್ರೀ ಎಸ್.ಎಮ್. ರಘು, ಸಹಕಾರ ಸಂಘಗಳ ಸಹಾಯಕ ನಿಬಂದಕರು, ಉಪವಿಭಾಗ ಪುತ್ತೂರು, ಶ್ರೀಮತಿ ಪ್ರತಿಮಾ ಸಹಕಾರ ಅಭಿವೃದ್ಧಿ ಅಧಿಕಾರಿ, ಬೆಳ್ತಂಗಡಿ, ಶ್ರೀ ಜಯಾನಂದ ಗೌಡ ಅಧ್ಯಕ್ಷರು, ಪಟ್ಟಣ ಪಂಚಾಯತ್ ಬೆಳ್ತಂಗಡಿ, ಶ್ರೀ ಸೇವಿಯರ್ ಪಾಲೇಲಿ, ನಿಕಟ ಪೂರ್ವ ಅದ್ಯಕ್ಷರು, ಬೆಳ್ತಂಗಡಿ ತಾಲೂಕು ವಕೀಲರ ಸಂಘ ಹಾಗೂ ನೋಟರಿ ವಕೀಲರು ಬೆಳ್ತಂಗಡಿ ಇವರು ಭಾಗವಹಿಸಲಿರುವರು.