ಉಪ್ಪಿನಂಗಡಿ-ಕಲ್ಲೇರಿ -ಬಳ್ಳಮಂಜ- ಮಡಂತ್ಯಾರ್- ಮಂಗಳೂರು ಮಾರ್ಗವಾಗಿ ಸರಕಾರಿ ಬಸ್ ಪ್ರಾರಂಭಿಸುವಂತೆ ಮನವಿ

ಉಪ್ಪಿನಂಗಡಿ-ಕಲ್ಲೇರಿ -ಬಳ್ಳಮಂಜ- ಮಡಂತ್ಯಾರ್- ಮಂಗಳೂರು ಮಾರ್ಗವಾಗಿ ಸರಕಾರಿ ಬಸ್ ಪ್ರಾರಂಭಿಸುವಂತೆ   ಮನವಿ
Facebook
Twitter
LinkedIn
WhatsApp

ಬೆಳ್ತಂಗಡಿ: ಉಪ್ಪಿನಂಗಡಿ-ಕಲ್ಲೇರಿ-ಬಳ್ಳಮಂಜ- ಮಡಂತ್ಯಾರ್- ಧರ್ಮಸ್ಥಳ ಮತ್ತು ಮಂಗಳೂರು ಮಾರ್ಗವಾಗಿ ಸರಕಾರಿ ಬಸ್ ಪ್ರಾರಂಭಿಸುವಂತೆ, ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗ ರೆಡ್ಡಿಯವರು ಜೂನ್ 30ರಂದು ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮನವಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಪ್ರಮೋದ್ ಕುಮಾರ್, ಅಸಂಘಟಿತ ಕಾರ್ಮಿಕ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾರಾಯಣ ಪೂಜಾರಿ ಮಚ್ಚಿನ, ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಸದಸ್ಯ ಪ್ರಶಾಂತ್ ಮಚ್ಚಿನ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Latest 5

Related Posts