ಬೆಳಾಲಿನಲ್ಲಿ ಕೋವಿಡ್ ಸಹಾಯಹಸ್ತ ಕಾರ್ಯಕ್ರಮ ಮಾಹಿತಿ

ಬೆಳ್ತಂಗಡಿ: ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ಬೆಳಾಲು ಗ್ರಾಮ ಸಮಿತಿಯ ಸಭೆ ಹಾಗೂ ಕೋವಿಡ್ ಸಹಾಯ ಹಸ್ತ ಕಾರ್ಯಕ್ರಮದ ಮಾಹಿತಿ ಕಾರ್ಯಕ್ರಮವು ಆಗಸ್ಟ್ 2ರಂದು ಬೆಳಾಲು ಮೈತ್ರಿ ಯುವಕ ಮಂಡಲದಲ್ಲಿ ನಡೆಯಿತು.ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ್‌ರವರ ನಿರ್ದೇಶನದಂತೆ ಪ್ರತೀ ಗ್ರಾಮ ಮಟ್ಟದಲ್ಲೂ ಕೋವಿಡ್ ಸಹಾಯ ಹಸ್ತ ಎಂಬ ಕಾರ್ಯಕ್ರಮದ ಅನುಷ್ಠಾನ ಮಾಡಿದ್ದು, ಅದರ ಮಾಹಿತಿಯನ್ನ ಗ್ರಾಮೀಣ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷ ರಂಜನ್ ಜಿ. ಗೌಡರವರು ಸಭೆಗೆ ನೀಡಿದರು. ಈ ಸಭೆಯಲ್ಲಿ ಕೊರೊನದಿಂದ […]

ಕೊಕ್ರಾಡಿಯಲ್ಲಿ ‘ಆಷಾಡ ಮಾಸದಲ್ಲಿ ಒಂದು ದಿನ’

ಬೆಳ್ತಂಗಡಿ: ಶ್ರೀ  ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗುರುವಾಯನಕೆರೆ ಯೋಜನಾ ಕಚೇರಿಯ ನಾರಾವಿ ವಲಯದ ಕೊಕ್ರಾಡಿ ಹಾಗೂ ಸಾವ್ಯ ಕಾರ್ಯಕ್ಷೇತ್ರದ ಬನಶಂಕರಿ ಹಾಗೂ ನಿಸರ್ಗ ಜ್ಞಾನವಿಕಾಸ ಕೇಂದ್ರದ ‘ಆಷಾಢ ಮಾಸದಲ್ಲಿ ಒಂದು ದಿನ’ ಕಾರ್ಯಕ್ರಮವನ್ನು ಕೊಕ್ರಾಡಿ ಶಾರದಾಂಭಾ ಯುವಕ ಮಂಡಲದಲ್ಲಿ ಮರದ ಕಳ ಸೆಗೆ ಭತ್ತ ತುಂಬಿಸುವ ಮೂಲಕ ವೇದಿಕೆಯಲ್ಲಿರುವ ಗಣ್ಯರು ಉದ್ಘಾಟಿಸಿದರು.ತಾಲೂಕಿನ ಯೋಜನಾಧಿಕಾರಿ ಯಶವಂತ ಯಸ್.  ಪ್ರಸ್ತಾವಿಸಿ, ಹಿಂದಿನ ಕಾಲದಲ್ಲಿ ಹಿರಿಯರು ಆಷಾಢ ಮಾಸದಲ್ಲಿ ಅರೋಗ್ಯವರ್ಧಕ ಆಹಾರ ಪದ್ಧತಿಗಳನ್ನು ಅನುಸ ರಿಸುತಿದ್ದು ಇದನ್ನು ಮುಂದಿನ ಯುವಪೀಳಿಗೆಗೆ ಇಂದಿನ ಮಹಿಳೆಯರು ವರ್ಗಾಯಿಸ […]

ಮುಂಡಾಜೆ ರೋಟರಿ ಸಮುದಾಯದಳ ಪದಗ್ರಹಣ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿಯ ಅಂಗಸಂಸ್ಥೆಯಾದ ಮುಂಡಾಜೆ ರೋಟರಿ ಸಮುದಾಯ ದಳದ 2021-22ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಮುಂಡಾಜೆ  ಶ್ರೀ ಸನ್ಯಾಸಿಕಟ್ಟೆ ಪರಶುರಾಮ ದೇವಸ್ಥಾನದ ಸಭಾಭವನದಲ್ಲಿ ಜರುಗಿತು. ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ನಾಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಸೇವೆಯಲ್ಲಿ ತೊಡಗಿದವರಿಗೆ ಸವಾಲುಗಳಿವೆ. ಸವಾಲುಗಳನ್ನು ಎದುರಿಸಿ ಕೆಲಸ ಮಾಡಿದರೆ ತಕ್ಕ ಪ್ರತಿಫಲ ಸಿಗುತ್ತದೆ. ಸಮಾಜದ ಅಭಿವೃದ್ಧಿಗಾಗಿ ದುಡಿಯುವ ಸಂಘ-ಸಂಸ್ಥೆಗಳು ಗೌರವಕ್ಕೆ ಅರ್ಹವಾಗಿರುತ್ತವೆ ಎಂದು ಹೇಳಿದರು.ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ ಅಬೂಬಕರ್, ನಿಕಟಪೂರ್ವ ಅಧ್ಯಕ್ಷ ಬಿ. ಕೆ. […]

ಕುವೆಟ್ಟು ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲಾ ಪ‌ಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕುವೆಟ್ಟು ಇಲ್ಲಿ ಜುಲೈ 31ರಂದು ಗ್ರಾಮ ಪಂಚಾಯತ್ ಕುವೆಟ್ಟು ವತಿಯಿಂದ ನೀಡಿದಂತಹ ಕೆಲವು ಸಸಿಗಳನ್ನು ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿಕುವೆಟ್ಟು ಗ್ರಾಮ ಪಂಚಾಯತ್ ಸದಸ್ಯರಾದ ಸಿಲ್ವೆಸ್ಟರ್ ಮೋನಿಸ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಿರಾಜ್ ಚಿಲಿಂಬಿ, ಉಪಾಧ್ಯಕ್ಷೆ ಜಾನಕಿ ದಿನಕರ್, ಗ್ರಾಮ ಪಂಚಾಯತ್ ಸದಸ್ಯೆ ಆಮಿನಾ, ಹಿರಿಯ ವಿಧ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಕರ್ ಬಿ. ಶೆಟ್ಟಿ ಪೆರಂಗೋಡಿ ಮತ್ತು ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, […]

‘ವೃಕ್ಷಯಜ್ಞ’ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ

ಬೆಳ್ತಂಗಡಿ: ನರಸಿಂಹಗಡದ ತಪ್ಪಲಿನ ಕೂಡೆಲು ಪ್ರದೇಶದಲ್ಲಿ ಬದುಕು ಕಟ್ಟೋಣ ಬನ್ನಿ ತಂಡ ಉಜಿರೆ ಮತ್ತು ರೋಟರಿ ಕ್ಲಬ್ ಬೆಳ್ತಂಗಡಿ ಇವರ ಜಂಟಿ ಆಶ್ರಯದಲ್ಲಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಮತ್ತು ಗ್ರಾಮ ಪಂಚಾಯತ್ ಲಾಯಿಲ‌ ಇವರ ಸಹಯೋಗದಲ್ಲಿ ಆಗಸ್ಟ್ 1ರಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ‘ವೃಕ್ಷಯಜ್ಞ’ ಹಣ್ಣಿನ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ 400ಕ್ಕೂ ಅಧಿಕ ಜನರಿಂದ ಕೂಡೆಲು ಪ್ರದೇಶದ ವಿವಿಧ ಭಾಗಗಳಲ್ಲಿ 1000 ಕ್ಕೂ ಮಿಕ್ಕಿ […]

ಪಡಂಗಡಿ ಪ್ರಾ. ಕೃ. ಪ. ಸಹಕಾರಿ ಸಂಘದ ಮಹಾಸಭೆ

ಬೆಳ್ತಂಗಡಿ: ಸಂಘದ ಸದಸ್ಯರ ಅನುಕೂಲತೆಯ ದೃಷ್ಠಿಯಿಂದ ಶಾಸಕರ ನಿರ್ದೇಶನದಂತೆ ಗೃಹನಿರ್ಮಾಣ ಸಾಲವನ್ನು 11% ಬಡ್ಡಿದರದಲ್ಲಿ ಸಂಘದ ವತಿಯಿಂದ ನೀಡುವ ಮಹತ್ವದ ಚಿಂತನೆಯನ್ನು ನಡೆಸಿದ್ದೇವೆ ಎಂದು ಪಡಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಯೋಗೀಶ್ ಕುಮಾರ್ ಕೆ. ಎಸ್. ತಿಳಿಸಿದರು.ಅವರು ಜುಲೈ 31ರಂದು ಸಂಘದ ವಠಾರದಲ್ಲಿ ಜರಗಿದ 2020-21ನೇ ಸಾಲಿನ ಪಡಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರ್ವ ಸದಸ್ಯರ ಸಹಕಾರದಿಂದ ಸಂಘ ನಿರಂತರ ಅಭಿವೃದ್ಧಿ ಕಂಡಿದೆ. ಪ್ರಸಕ್ತ ಸಾಲಿನಲ್ಲಿ […]

ಜನಜಾಗೃತಿ ವೇದಿಕೆಯ ವಾರ್ಷಿಕ ವರದಿ ಬಿಡುಗಡೆ

ಬೆಳ್ತಂಗಡಿ: ಜನಜಾಗೃತಿ ವೇದಿಕೆ ಬೆಳ್ತಂಗಡಿ ಪ್ರಾದೇಶಿಕ ವಿಭಾಗದ ವಾರ್ಷಿಕ ವರದಿ ಹಾಗೂ ಪ್ರಾಕೃತಿಕ ದುರಂತಗಳು ಮತ್ತು ನಿರ್ವಹಣೆಯ ಬಗ್ಗೆ ಮಾಹಿತಿ ಕೈಪಿಡಿಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಜುಲೈ 31ರಂದು ನಡೆದ ಸರಳ ಕಾರ್ಯಕ್ರಮದಲ್ಲಿ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು.ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸನಮುಕ್ತ ಆರೋಗ್ಯಪೂರ್ಣ ಸಮಾಜ ರೂಪಿಸುವಲ್ಲಿ ಜನಜಾಗೃತಿ ವೇದಿಕೆಯ ಸೇವೆಯನ್ನು ಈ ಸಂದರ್ಭದಲ್ಲಿ ಡಾ. ಹೆಗ್ಗಡೆಯವರು ಮುಕ್ತಕಂಠದಿಂದ ಶ್ಲಾಘಿಸಿದರು. ಇದರೊಂದಿಗೆ ವಿಪತ್ತು ನಿರ್ವಹಣಾ ಸ್ವಯಂ ಸೇವಕರ ಕಾರ್ಯ ಹಾಗೂ ಪರಿಸರ […]

ಉಜಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಮಾಲೋಚನಾ ಸಭೆ

ಬೆಳ್ತಂಗಡಿ: ಉಜಿರೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 15ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು  ಸರಕಾರದ ಕೋವಿಡ್ ನಿಯಂತ್ರಣ ಮಾರ್ಗಸೂಚಿಯನ್ವಯ  ಮೂರು ದಿನಗಳ ಕಾಲ ಶ್ರೀ ಶಾರದಾ ಮಂಟಪದಲ್ಲಿ  ಸರಳ ರೀತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ  ವಿದ್ಯುಕ್ತವಾಗಿ ನಡೆಸಲು  ಸಮಿತಿ ನಿರ್ಧರಿಸಿದೆ ಎಂದು ಸಮಿತಿ ಅಧ್ಯಕ್ಷ ಅರವಿಂ ದ ಕಾರಂತ ಹೇಳಿದ್ದಾರೆ              ಅವರು ಜುಲೈ 24ರಂದು ಉಜಿರೆ ಶ್ರೀ ರಾಮಕೃಷ್ಣ ಸಭಾಮಂಟಪದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪೂರ್ವಭಾವಿ  ಸಮಾಲೋಚನಾ ಸಭೆಯಲ್ಲಿ  ಸರ್ವಾನುಮತದ ನಿರ್ಣಯ […]

‘ಕೆಸರ್ಡ್ ಒಂಜಿ ದಿನ-ನೇಜಿ ನಡ್ಪುನ ಕಜ್ಜ’

ಬೆಳ್ತಂಗಡಿ: ಅಭಯಾ ಮಹಿಳಾ ವೃಂದ ಉಜಿರೆ ತಂಡದಿಂದ ತುಳುನಾಡ ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳು ಅಡಕವಾಗಿರುವ, ಯುವಜನತೆಯಲ್ಲಿ ಭತ್ತ ಬೇಸಾಯದ ಬಗ್ಗೆ  ಜನಜಾಗೃತಿ ಉಂಟುಮಾಡುವ ‘ಕೆಸರ್ಡ್ ಒಂಜಿ ದಿನ- ನೇಜಿ ನೆಡ್ಪುನ ಕಜ್ಜ’ ಎಂಬ ವಿಶೇಷ ಕಾರ್ಯಕ್ರಮ ಸುರ್ಯದ ಮೂಡಬೆಟ್ಟುಗುತ್ತು ಗದ್ದೆಯಲ್ಲಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟು ಎಲ್ಲಾ ವ್ಯವಸ್ಥೆಗಳನ್ನು ರೂಪಿಸುವಲ್ಲಿ ಮೋಹನ್ ಕೆ. ಜೈನ್, ನೋಟರಿ ಪಬ್ಲಿಕ್ ನ್ಯಾಯವಾದಿ ಶಶಿಕಿರಣ್ ಜೈನ್,  ರಾಜಶೇಖರ್ ಅಜ್ರಿ ಹಾಗೂ ಅರುಣ್ ಕುಮಾರ್ ಇವರು ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು […]

ಅರ್ಹ ಕಾರ್ಮಿಕರಿಗೆ ಸವಲತ್ತು ವಿತರಣೆ

ಬೆಳ್ತಂಗಡಿ: ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅವರ ಉತ್ತಮ ಸ್ಪಂದನೆ, ಇಲಾಖೆಯ ಅಧಿಕಾರಿಗಳ ನಿರಂತರ ಪ್ರಯತ್ನದಿಂದ ತಾಲೂಕಿನ ಕಾರ್ಮಿಕ ವರ್ಗದ ಅರ್ಹರೆಲ್ಲರಿಗೂ ಸವಲತ್ತು ಸಿಗುವಂತಾಗಿದೆ. ಭಾರತೀಯ ಮಜ್ದೂರ್ ಸಂಘ ತಾಲೂಕಿನಾದ್ಯಂತ ಉತ್ಕೃಷ್ಟ ಮಟ್ಟದಲ್ಲಿ ಅರ್ಹ ಕಾರ್ಮಿಕರನ್ನು ಗುರುತಿಸಿದ್ದು, ಅದರ ಪದಾಧಿಕಾರಿಗಳು ಅಭಿನಂದನೆಗೆ ಅರ್ಹರು ಎಂದು ಶಾಸಕ ಹರೀಶ್ ಪೂಂಜ ಹೇಳಿದರು.ಅವರು  ಜುಲೈ 25ರಂದು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೀಡಾದ ಕಟ್ಟಡ ಹಾಗೂ ಇತರ ವರ್ಗದ ಕಾರ್ಮಿಕರಿಗೆ ಅಗತ್ಯ ಸಾಮಗ್ರಿಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲೂಕಿನ ಪ್ರತಿ […]