ಮೋಹನ ಬೈಪಾಡಿತ್ತಾಯರಿಗೆ ‘ಗೋಪಣ್ಣ ಗೌರವ’ ಸಮ್ಮಾನ

ಬೆಳ್ತಂಗಡಿ: ಯಕ್ಷಗಾನ, ಭರತನಾಟ್ಯ ಸಹಿತ ಸಾಂಸ್ಕೃತಿಕ ರಂಗಕಲೆಗಳಲ್ಲಿ  ಗುರು-ಶಿಷ್ಯ ಪರಂಪರೆ  ಇಂದಿಗೂ ಜಾಗೃತವಾಗಿದೆ. ಗುರು-ಶಿಷ್ಯ ಪರಂಪರೆ ಭಾರತೀಯ ಸಂಸ್ಕೃತಿ ಎಂದು ಹಿರಿಯ ಯಕ್ಷಗಾನ ಗುರು ಮೋಹನ ಬೈಪಾಡಿತ್ತಾಯ ಹೇಳಿದರು.                            ಪುತ್ತೂರು ಬಪ್ಪಳಿಗೆ ಅಗ್ರಹಾರ ನಿವಾಸದಲ್ಲಿ ಜುಲೈ 8ರಂದು  ತಮ್ಮ ಶಿಷ್ಯ ಹಾಗು ಯಕ್ಷಗಾನ ಕಲಾವಿದ ಪಿ. ಜಿ. ಜಗನ್ನಿವಾಸ ರಾವ್ ಮನೆಯವರು ನೀಡಿದ ಪುತ್ತೂರು ಗೋಪಣ್ಣ ಗೌರವ  ಸಮ್ಮಾನ ಸ್ವೀಕರಿಸಿ  […]

ರೋಟರಿ ಕ್ಲಬ್ ವತಿಯಿಂದ ವಿಶ್ವ ವೈದ್ಯರ ದಿನಾಚರಣೆ

ಬೆಳ್ತಂಗಡಿ: ವಿಶ್ವ ವೈದ್ಯರ ದಿನದ ಅಂಗವಾಗಿ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ  ಉಜಿರೆಯಲ್ಲಿ ಕಳೆದ 50 ವರ್ಷಗಳಿಂದ ವೈದ್ಯಕೀಯ  ಸೇವೆ ಸಲ್ಲಿಸುತ್ತಿರುವ ಹಿರಿಯ ವೈದ್ಯರಾದ ಡಾl ಪ್ರಕಾಶ್ಚಂದ್ರ ಅವರನ್ನು ಅವರ ನಿವಾಸಕ್ಕೆ ತೆರಳಿ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಶರತ್‌ಕೃಷ್ಣ ಪಡುವೆಟ್ಣಾಯ, ಕಾರ್ಯದರ್ಶಿ ಅಬೂಬಕ್ಕರ್, ಸದಸ್ಯರಾದ ಅರವಿಂದ ಕಾರಂತ, ವಿದ್ಯಾಕುಮಾರ ಕಾಂಚೋಡು, ಡಾl ಚಾರುಲತಾ ಮತ್ತಿತರರು ಉಪಸ್ಥಿತರಿದ್ದರು.

ಸ್ವಸಹಾಯ ಸಂಘಗಳಿಗೆ ಲಾಭಾಂಶ ಹಂಚಿಕೆ

ಬೆಳ್ತಂಗಡಿ: ಕಳೆಂಜದ ಕಾಯಾರ್ತಡ್ಕ ವಿಭಾಗದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂಧು ಸ್ವಸಹಾಯ ಸಂಘಗಳ ಲಾಭಾಂಶ ವಿತರಣಾ ಕಾರ್ಯಕ್ರಮ ಜುಲೈ 9ರಂದು ಕಾಯರ್ತಡ್ಕದ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.  ಶಾಲೆಯ ಮುಖ್ಯೋಪಾಧ್ಯಾಯರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಜನಜಾಗೃತಿ ವೇದಿಕೆ ಸದಸ್ಯ ವಿಜಯಕುಮಾರ್ ಲಾಭಾಂಶದ ಚೆಕ್ ಹಸ್ತಾಂತರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಜಯಕರ ಶೆಟ್ಟಿ, ಮೇಲ್ವಿಚಾರಕ ಪ್ರಶಾಂತ್, ಸೇವಾಪ್ರತಿನಿಧಿ ಜನಾರ್ದನ ಹಾಗೂ ಅರ್ಪಿತಾ, ಒಕ್ಕೂಟದ ಅಧ್ಯಕ್ಷ ಚಿನ್ನಮ್ಮ ಮತ್ತು ಕೊರಗಪ್ಪ […]

ಪತ್ನಿಯನ್ನು ಮನೆಯಲ್ಲಿ ಬಿಟ್ಟು ನಾದಿನಿಯನ್ನು ಕರೆದುಕೊಂಡು ಹೋದ ಹೊಸ ಅಳಿಯ!

ಬೆಳ್ತಂಗಡಿ: ದೊಡ್ಡ ಮಗಳನ್ನು 9 ತಿಂಗಳ ಹಿಂದೆ ವಿವಾಹವಾಗಿದ್ದ ನವ ವಿವಾಹಿತ ನಾದಿನಿಯ ಜೊತೆ ಸಲುಗೆಯಿಂದಿದ್ದು, ಇದೀಗ ಪತ್ನಿಯನ್ನು ತವರು ಮನೆಯಲ್ಲಿ ಬಿಟ್ಟು ನಾದಿನಿಯನ್ನು ಕರೆದುಕೊಂಡುಹೋದ ಘಟನೆ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಕೈಕಂಬ ಎಂಬಲ್ಲಿಂದ ವರದಿಯಾಗಿದೆ. ನಾಪತ್ತೆಯಾಗಿರುವ ಯುವತಿಯ ತಂದೆ ಮುಹಮ್ಮದ್ ಅವರು ಈ ಬಗ್ಗೆ ಬೆಳ್ತಂಗಡಿ ಠಾಣೆಗೆ ದೂರು ನೀಡಿದ್ದಾರೆ.ಮುಹಮ್ಮದ್ ಅವರ ಪುತ್ರಿ ಸೌಧಾ ಎಂಬಾಕೆಯನ್ನು 9 ತಿಂಗಳ ಹಿಂದೆ ಮುಸ್ತಫಾ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದು, ಮಗಳು ಹಾಗೂ ಅಳಿಯ ಆಗಾಗ ಮಾವನ ಮನೆಗೆ ಬಂದು […]

ಮನೆ ನಿರ್ಮಾಣಕ್ಕೆ ನೆರವು

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮುಂಡಾಜೆ ಗ್ರಾಮದ ಕಡಂಬಳ್ಳಿಯ ಗಣಪತಿ ಭಟ್ ಅವರ ಮನೆ ನಿರ್ಮಾಣಕ್ಕೆ ರೂಪಾಯಿ 25 ಸಾವಿರ ಮೊತ್ತದ ಚೆಕ್ಕನ್ನು ನೀಡಲಾಯಿತು.ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿ ಜಯಕರ ಶೆಟ್ಟಿ, ವಲಯ ಮೇಲ್ವಿಚಾರಕ ನವೀನ್, ಪ್ರತಿನಿಧಿ ದಿಶಾ, ರಬ್ಬರ್ ಸೊಸೈಟಿ ಉಪಾಧ್ಯಕ್ಷ ಮಚ್ಚಿಮಲೆ ಅನಂತ ಭಟ್, ರೋಟರಿ ಜಿಲ್ಲಾ ಪ್ರತಿನಿಧಿ ಗೋಪಾಲಕೃಷ್ಣ ಜೋಷಿ, ರೋಟರಿ ಸಮುದಾಯದಳ ಮುಂಡಾಜೆಯ ಅಧ್ಯಕ್ಷೆ ಅಶ್ವಿನಿ ಹೆಬ್ಬಾರ್, ಸಚಿನ್ ಭಿಡೆ, ಮಹಾದೇವ ಬೆಂಡೆ ಮತ್ತಿತರರು […]

ಮೃತರಿಗೆ ನುಡಿನಮನ ಹಾಗೂ ಶ್ರದ್ಧಾಂಜಲಿ ಸಭೆ

ಬೆಳ್ತಂಗಡಿ: ಇತ್ತೀಚೆಗೆ ನಿಧನರಾದ ಬೆಳ್ತಂಗಡಿಯ ಸುವರ್ಣ ಪ್ರಿಂಟರ್ಸ್ ಮಾಲಕ ಗಣೇಶ್ ಸುವರ್ಣ ಹಾಗೂ ಸ್ಕೂಲ್ ಬುಕ್ ಕಂಪೆನಿ ಆಡಳಿತ ನಿರ್ದೇಶಕ ಮೋಹನ್ ದಾಸ್ ಭಂಡಾರಿ ಯವರ ಶೃದ್ಧಾಂಜಲಿ ಸಭೆಯು ಬೆಳ್ತಂಗಡಿ ಪ್ರಿಂಟರ್ಸ್ ಅಶೋಸಿಯೇಷನ್ ವತಿಯಿಂದ ಬೆಳ್ತಂಗಡಿಯ ಜೇಸಿಐ ಭವನದಲ್ಲಿ ಜುಲೈ ,7ರಂದು ಜರಗಿತು. ಪ್ರಿಂಟರ್ಸ್ ಅಶೋಸಿಯೇಷನ್ ಅಧ್ಯಕ್ಷ ವಸಂತ್ ಶೆಟ್ಟಿ ಶ್ರದ್ಧಾ, ಉಪಾಧ್ಯಕ್ಷ ಶೇಖರ್ ಟಿ. ನುಡಿನಮನ ಸಲ್ಲಿಸಿದರು. ಸಂಘದ ಕೋಶಾಧಿಕಾರಿ ಬಾಲಕೃಷ್ಣ, ಜತೆ ಕಾರ್ಯದರ್ಶಿ ನಾರಾಯಣ್ ಶೆಟ್ಟಿ, ನಿರ್ದೇಶಕರಾದ ಅನಿಲ್, ರಾಮಕೃಷ್ಣ, ಜೋಬಿನ್, ಸಾದಿಕ್, ಕಮಲಾಕ್ಷ, […]

ಬೆಲೆಬಾಳುವ ಗಿಡ ವಿತರಣೆ

ಬೆಳ್ತಂಗಡಿ: ಡಾl ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮದಿನದ ಅಂಗವಾಗಿ, ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸುಮಾರು 700 ಉತ್ತಮ ಜಾತಿಯ ಹಣ್ಣು ಹಾಗೂ ಇತರ ಗಿಡಗಳನ್ನು ನೀಡಲಾಯಿತು. ಚಾರ್ಮಾಡಿ ಗ್ರಾಮ ಪಂಚಾಯಿತ್ ಅಧ್ಯಕ್ಷ ಕೆ. ವಿ. ಪ್ರಸಾದ್‌ರಿಗೆ ಈ ಗಿಡಗಳನ್ನು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಕಾಶ ನಾರಾಯಣ ರಾವ್ ಸಾಂಕೇತಿಕವಾಗಿ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿಈ ಗಿಡಗಳನ್ನು ಗ್ರಾಮ ಪಂಚಾಯಿತಿಯ 10ಬೂತ್‌ಗಳಿಗೆ ಹಂಚಿಕೆ ಮಾಡಲಾಯಿತು.ಚಾರ್ಮಾಡಿ ಗ್ರಾಮ ಪಂಚಾಯತ್ […]

ಗಿಡ ನೆಡುವ ಕಾರ್ಯಕ್ರಮ

ಬೆಳ್ತಂಗಡಿ: ಚಾರ್ಮಾಡಿ ಪೋಲೀಸ್ ಚೆಕ್‌ಪೋಸ್ಟ್ ಪರಿಸರದಲ್ಲಿ ಗಿಡ ನೆಡುವ ಕಾರ್ಯಕ್ರಮವು ಜುಲೈ 8ರಂದು ನಡೆಯಿತು. ಎಸ್‌ಕೆಡಿಆರ್‌ಡಿಪಿಯ ಶೌರ್ಯ ವಿಪತ್ತು ಘಟಕ ಚಾರ್ಮಾಡಿ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಮುಂಡಾಜೆ ಸಿ‌. ಎ. ಬ್ಯಾಂಕ್ ಉಪಾಧ್ಯಕ್ಷ ಪ್ರಕಾಶ್ ನಾರಾಯಣರಾವ್, ಧರ್ಮಸ್ಥಳ ಪೊಲೀಸ್ ಠಾಣೆಯ ಸುಕನ್ಯಾ ರಾಮಯ್ಯ ಹೆಗಡೆ, ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೊರಗಪ್ಪ ಗೌಡ, ಅರಣ್ಯ ರಕ್ಷಕ ಸಂತೋಷ್, ವಿವಿಧ ಒಕ್ಕೂಟಗಳ ಮೇಲ್ವಿಚಾರಕರು, ಅಧ್ಯಕ್ಷರು, ಸದಸ್ಯರು ಹಾಗೂ ವಿಪತ್ತು ನಿರ್ವಹಣಾ ತಂಡದವರು, ಪೋಲಿಸ್ ಚೆಕ್‌ಪೋಸ್ಟ್ […]

ಕೊಕ್ಕಡದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿಯ ಬೆಳ್ತಂಗಡಿ ಮಂಡಲ ಎಸ್. ಟಿ. ಮೋರ್ಚಾದ ವತಿಯಿಂದ ಕೊಕ್ಕಡ ಗ್ರಾಮದ ಮುಂಡೂರು ಪಳಿಕೆಯಲ್ಲಿ ಶ್ಯಾಮ್ ಪ್ರಸಾದ್ ಮುಖರ್ಜಿ ಯವರ ಜನ್ಮದಿನದ ಪ್ರಯುಕ್ತ ವೃಕ್ಷಾರೊಪಣ  ಕಾರ್ಯಕ್ರಮದಂತೆ ವಿವಿಧ ಬಗೆಯ ಸಸಿಗಳನ್ನು ನೆಡಲಾಯಿತು.ಈ ಸಂದರ್ಭ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೊರಗಪ್ಪ ನಾಯ್ಕ ಹಾಗೂ ತಾಲೂಕು ಎಸ್. ಟಿ. ಮೋರ್ಚಾ ಅಧ್ಯಕ್ಷ ಹರೀಶ್ ಎಳನೀರು, ಕಾರ್ಯದರ್ಶಿ ವಿಠಲ ಕೊಕ್ಕಡ, ಧರ್ಮಸ್ಥಳ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಹಾಗೂ ಕೊಕ್ಕಡ ಗ್ರಾಮ ಪಂಚಾಯತ್ […]

ಅಗತ್ಯ ಸಾಮಗ್ರಿಗಳ ಮತ್ತು ಪೆಟ್ರೋಲ್- ಡಿಸೇಲ್ ಬೆಲೆಯೇರಿಕೆ ವಿರುದ್ಧ ಬೃಹತ್ ಪ್ರತಿಭಟನಾ ಯಾತ್ರೆ

ಬೆಳ್ತಂಗಡಿ: ಕೇಂದ್ರ ಮತ್ತು ರಾಜ್ಯ ಸರಕಾರದ ನೀತಿಗಳು ಜನ ವಿರೋಧಿಯಾಗಿವೆ. ತೈಲ ಹಾಗೂ ಇಂಧನಗಳ ಬೆಲೆ ಏರಿಕೆಯಿಂದ ಜನರು ಕಂಗಾಲಾಗಿದ್ದಾರೆ. ಹಿಂದೆ ಸದಾ ಪ್ರತಿಭಟನೆಗಳಲ್ಲಿ ತೊಡಗಿಕೊಂಡಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರು ಪ್ರತಿಭಟನೆ ಕೈಗೊಳ್ಳಬೇಡಿ ಎಂದು ಕರೆ ನೀಡಿರುವುದು ಹಾಸ್ಯಾಸ್ಪದವಾಗಿದೆ ಎಂದು ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ಹೇಳಿದರು.ಅವರು ಜುಲೈ 7ರಂದು ಉಜಿರೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಮ್ಮಿಕೊಂಡ ತೈಲ ಬೆಲೆ ಏರಿಕೆ ವಿರುದ್ಧದ ಪ್ರತಿಭಟನಾ ಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕೊರೊನಾ ಪೀಡಿತರು ಹಾಗೂ ಅದರಿಂದ ಸಾವನ್ನಪ್ಪಿದವರ ಮನೆ […]