ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಬೆಟ್ಟು ವತಿಯಿಂದ ಪ್ರಾರ್ಥನೆ ಹಾಗೂ ಅಕ್ಕಿ ಮತ್ತು ದಿನಸಿ ವಸ್ತುಗಳ ವಿತರಣೆ-ವೈಯಕ್ತಿಕ ಅಂತರದತ್ತ ಎಲ್ಲರ ಚಿತ್ತ

ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಕಲ್ಲಬೆಟ್ಟು ಇದರ ವತಿಯಿಂದ ಪೂಜಾ ಕಟ್ಟೆಯಲ್ಲಿ ಕೊರೊನ ಮುಕ್ತ ಜಗತ್ತಿಗಾಗಿ ಹಾಗೂ ಉತ್ತಮ ಆರೋಗ್ಯಕ್ಕಾಗಿ ಅರ್ಚಕರಾದ ಸದಾನಂದ ಭಟ್ ರವರ ಪೌರೋಹಿತ್ಯದಲ್ಲಿ ಶ್ರೀ ಸತ್ಯನಾರಾಯಣ ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕೊರೊನ ತಡೆಗಟ್ಟಲು ಬೇಕಾದ ಮುಂಜಾಗ್ರತಾ ಕ್ರಮದ ಬಗ್ಗೆ ಸೂಕ್ತ ಸಲಹೆಯನ್ನು ಸಮಿತಿಯ ಅಧ್ಯಕ್ಷರಾದ ಎಂ. ಬಾಹುಬಲಿ ಪ್ರಸಾದ್ ರವರು ನೀಡಿದರು. ಈ ಬಗ್ಗೆ ವಿವರವುಳ್ಳ ಕರಪತ್ರವನ್ನು ವಿತರಿಸಲಾಯಿತು. ವೈಯಕ್ತಿಕ ಅಂತರದತ್ತ ಎಲ್ಲರ ಚಿತ್ತವಿದ್ದುದು ವಿಶೇಷವಾಗಿತ್ತು.50 ಕುಟುಂಬಗಳಿಗೆ […]

ಪುರಸಭೆ ಸ್ವಚ್ಛತಾ ಸಿಬ್ಬಂದಿಗೆ ಜವನೆರ್ ಬೆದ್ರ ಆಹಾರ ಕಿಟ್ ವಿತರಣೆ – ವೈಯಕ್ತಿಕ ಅಂತರ ಕಾಪಾಡಿ ಮಾದರಿಯಾದ ಸಿಬ್ಬಂದಿಗಳು

ಆರೋಗ್ಯ ಸಿಬ್ಬಂದಿಗಳು, ಪೊಲೀಸರು, ಮಾಧ್ಯಮದವರ ಜೊತೆಗೆ ಸ್ಥಳೀಯ ಸಂಸ್ಥೆಗಳ ಸ್ವಚ್ಛತಾ ಸಿಬ್ಬಂದಿಗಳನ್ನೂ ಕೊರೋನಾ ವಾರಿಯರ್ಸ್ ಎಂದು ಸರಕಾರ ಹೇಳಿದೆ. ಕೊರೋನಾ ರಣಕೇಕೆಯ ಮಧ್ಯೆ ನುಸುಳಿ ದಿನನಿತ್ಯ ಹೋರಾಟ ಮಾಡುವ, ಈ ಸೇವೆಯಲ್ಲಿ ವೈದ್ಯರಿಗೆ ಸರಿಸಮಾನವಾಗಿ ಶೇಕಡಾ 100 ಸಾಧನೆ ಮಾಡುತ್ತಿರುವ ಸ್ವಚ್ಛತಾ ಸಿಬ್ಬಂದಿಗಳ ಸೇವೆಯನ್ನು ಗುರುತಿಸುವ ಕಾರ್ಯ ಮೂಡುಬಿದಿರೆಯ ಜವನೆರ್ ಬೆದ್ರ ಸಂಘಟನೆಯ ಮುಖಾಂತರ ನಡೆದಿದೆ.ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ ನೇತ್ರತ್ವದ ತಂಡವು ಮೂಡುಬಿದಿರೆ ಪುರಸಭೆಯ ಎಲ್ಲಾ ಸ್ವಚ್ಛತಾ ಸಿಬ್ಬಂದಿಗಳಿಗೆ ಅಕ್ಕಿ ಮತ್ತು ದಿನಬಳಕೆಯ […]

ದಿವ್ಯಾಂಗರ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ ಯಂಗ್ ಚಾಲೆಂಜರ್ಸ್ ಮುಂಡಾಜೆ

ಮುಂಡಾಜೆ:ಬೆಳ್ತಂಗಡಿ ತಾ.ನ ಮುಂಡಾಜೆ ಗ್ರಾ.ಪಂ.ವ್ಯಾಪ್ತಿಯ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಊರ ದಾನಿಗಳ ಸಹಕಾರದಲ್ಲಿ,ಲಾಕ್ ಡೌನ್ ನಿಂದ ಸಂಕಷ್ಟ ಕ್ಕೊಳಗಾಗಿರುವ ಮುಂಡಾಜೆ ಗ್ರಾಮದ 40ಜನ ದಿವ್ಯಾಂಗರ ಕುಟುಂಬಗಳಿಗೆ ಸೇರಿದಂತೆ ಒಟ್ಟು 50 ಕುಟುಂಬಗಳಿಗೆ ಆಹಾರ ಕಿಟ್ಟನ್ನು ಎಪ್ರಿಲ್ 24ರಂದು ಕ್ಲಬ್ಬಿನ ಸಭಾ ಭವನದಲ್ಲಿ ವಿತರಿಸ ಲಾಯಿತು.ಕ್ರೀಡಾ ಸಂಘದ ಅಧ್ಯಕ್ಷರೂ ಆಗಿರುವ ತಾ.‌ ಪತ್ರಕರ್ತರ ಸಂಘದ ಅಧ್ಯಕ್ಷ ಅಶ್ರಫ್ ಆಲಿಕುಂಞಿ ಅಧ್ಯಕ್ಷತೆ ವಹಿಸಿದ್ದರು.ಬೆಳ್ತಂಗಡಿ ತಾ.ಔಷಧ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಸುಜಿತ್ ಭಿಡೆ , ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ […]

ಬಡಪಾಯಿಯ ದ್ವಿಚಕ್ರವಾಹನ ಬೆಂಕಿಗಾಹುತಿ ವೇಣೂರು ಪೊಲೀಸ್ ಠಾಣೆಯಲ್ಲಿ ಆರೋಪಿ ಅಪ್ಪ-ಮಗನ ಮೇಲೆ ಪ್ರಕರಣ ದಾಖಲು

ಬೆಳ್ತಂಗಡಿ: ಕೂಲಿ ಕಾರ್ಮಿಕನೋರ್ವನ ದ್ವಿಚಕ್ರ ವಾಹನ ಅಗ್ನಿಗೆ ಆಹುತಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ವೇಣೂರು ಠಾಣೆಯಲ್ಲಿ ತಂದೆ-ಮಗನ ಮೇಲೆ ಪ್ರಕರಣ ದಾಖಲಾಗಿದೆ.ಎ. 21 ರಂದು ತಾಲೂಕಿನ ಬಡಗಕಾರಂದೂರು ಗ್ರಾಮದ ಕಟ್ಟೂರು ಎಂಬಲ್ಲಿ ಅದೇ ಗ್ರಾಮದ ಮುಳ್ಳುಗುಡ್ಡೆ ನಿವಾಸಿ ಸಾಜಿ ಸಿ. ಎಂಬುವರು ಸದಾಶಿವ ರಾವ್ ಎಂಬುವರ ರಬ್ಬರ್ ತೋಟದ ಟ್ಯಾಪಿಂಗ್ ಮಾಡುತ್ತಿದ್ದರು. ಈ ಸಂದರ್ಭ ಬೆಳಿಗ್ಗೆ ಸಾಜಿ ಅವರ ಡಿಯೋ ಸ್ಕೂಟರ್ ಬೆಂಕಿಗೆ ಆಹುತಿಯಾಗಿತ್ತು. ಈ ಕೃತ್ಯವೆಸಗಿದವರು ಕಟ್ಟೂರು ಶಂಕರ ಭಟ್ ಹಾಗು ಅವರ ಮಗ ಎಂದು ದೂರುದಾರರು […]

ಮಾನವೀಯತೆಗೆ ಸಾಕ್ಷಿಯಾಯಿತು ಯುವಕರ ನಡೆ ಬಡಕುಟುಂಬಿಕರಿಗೆ ಅಕ್ಕಿ ವಿತರಿಸಿದ ಕೂಲಿಕಾರ್ಮಿಕರು.

ಇವರು ಅಡಿಕೆ ಸಿಪ್ಪೆ ಸುಳಿಯುವ ಕೂಲಿ ಕೆಲಸಗಾರರು. ಆದರೂ ಅವರ ಹೃದಯ ವೈಶಾಲ್ಯ ಇತರರಿಗೆ ಮಾದರಿ ಯಾಗುವಂತದ್ದು. ಕೊರೋನಾ ವೈರಸ್ ಲಾಕ್ ಡೌನ್ ನಿಂದಾಗಿ ಬಡಜನರು ಒಂದೊತ್ತಿನ ಊಟಕ್ಕೂ ಪರದಾಡುವಂತಾಗಿರುವುದನ್ನು ಕಣ್ಣಾರೆ ಕಂಡ ಇವರು ತಮ್ಮ ಉಳಿತಾಯದ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸಿದ್ದಾರೆ.ಇಂದಬೆಟ್ಟು ಹಾಗೂ ಬಂಗಾಡಿ ಪರಿಸರದಲ್ಲಿ ಅಡಿಕೆ ಸಿಪ್ಪೆ ಸುಲಿಯುವ ಕೆಲಸ ಮಾಡುತ್ತಿದ್ದ ಸುಪ್ರೀತಾ ಪ್ರಸನ್ನ ಬಂಗಾಡಿ, ನಾರಾಯಣ ನೇತ್ರಾವತಿ ನಗರ , ಭಾಸ್ಕರ ನೇತ್ರಾವತಿ ನಗರ, ಅಕ್ಷಯ್ ನೇತ್ರಾವತಿ ನಗರ, ಸುಜಯ್ , ಸಂತೋಷ್ […]

ಶಾಸಕ ಹರೀಶ್ ಪೂಂಜಾರ “ಶ್ರಮಿಕ ನೆರವು” ಕೊಕ್ಕಡದಲ್ಲಿ ವಿತರಣೆ.

ಕೊರೋನ ಮಹಾಮಾರಿ ನಿರ್ಮೂಲನೆಗಾಗಿ ದೇಶದ ಮಾನ್ಯ ಪ್ರಧಾನಿ ಮೋದಿಜಿ ಯವರ ಸೂಚನೆಯಂತೆ ದೇಶವೇ ಲಾಕ್ ಡೌನ್ ಆಗಿರುವ ಈ ಸಂಕಷ್ಟದ ಸಂದರ್ಭ.ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರು ಕೊಕ್ಕಡ ಗ್ರಾಮದ 4 ಬೂತುಗಳಿಗೆ ತಲಾ 100 ರಂತೆ 400 ಕಿಟ್ ನೀಡಿರುವುದನ್ನು ಆಯಾ ಬೂತು ಗಳಲ್ಲಿ ಕೂಲಿ ಕಾರ್ಮಿಕರಿಗೆ, ರಿಕ್ಷಾ ಚಾಲಕರಿಗೆ, ನಿರ್ಗತಿಕರಿಗೆ ಮನೆಮನೆಗೆ ತೆರಳಿ ವಿತರಣೆ ಮಾಡಲಾಯಿತು. ಗ್ರಾಮದ 400 ಕುಟುಂಬಗಳಿಗೆ ಶ್ರಮಿಕ ನೆರವು ನೀಡಿದ ಶಾಸಕ ಹರೀಶ್ ಪೂಂಜಾರಿಗೆ ಗ್ರಾಮಸ್ಥರ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು. ಈ […]

ಕ್ರಾಂತಿಯೋಗಿ ಬಸವಣ್ಣ ಜಯಂತಿ ಆಚರಣೆ ಇದ್ದ ಆರರಲ್ಲಿ ಒಬ್ಬರು ಮಾಸ್ಕ್ ರಹಿತರು

ಬೆಳ್ತಂಗಡಿ: ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಎಪ್ರಿಲ್ 26ರಂದು ಬೆಳ್ತಂಗಡಿಯ ಮಿನಿ ವಿಧಾನಸೌಧದಲ್ಲಿ ಕ್ರಾಂತಿಯೋಗಿ ಬಸವಣ್ಣ ಜಯಂತಿ ಆಚರಣೆಯನ್ನು ಸರಳ ರೀತಿಯಲ್ಲಿ ನಡೆಸಲಾಯಿತು. ವೇದಿಕೆಯಲ್ಲಿದ್ದ ತಹಶೀಲ್ದಾರ್ ಸಹಿತ ಆರು ಮಂದಿ ವೈಯಕ್ತಿಕ ಅಂತರ ಕಾಪಾಡಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕೊರೋನಾ ಸೋಂಕಿನ ವಿರುದ್ಧ ಹೋರಾಟದ ಮುನ್ನೆಚ್ಚರಿಕೆ ಸಾರಿದರಾದರೂ; ಆರರಲ್ಲಿ ಒಬ್ಬರು ಮಾಸ್ಕ್ ಧರಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಿ,ಕೊರೋನಾ ಸೋಂಕಿನ ವಿರುದ್ಧದ ಜಾಗೃತಿಗೇ ಸವಾಲಾದರು.ತಹಸೀಲ್ದಾರ್ ಗಣಪತಿ ಶಾಸ್ತ್ರೀ ಅವರು, ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, […]

ಗೃಹರಕ್ಷಕ ದಳದ ಸೇನಾನಿಗಳಿಗೆ ಆಹಾರ ಧಾನ್ಯದ ಕಿಟ್ ವಿತರಣೆ

ಕೊರೊನ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳ ನಿಜವಾದ ಸೈನಿಕರಂತೆ ಕಾರ್ಯ ನಿರ್ವಹಿಸುತ್ತಿದ್ದು, ಜನರಲ್ಲಿ ಶಿಸ್ತು ತರಲು ಸಹಕರಿಸುತ್ತಿದ್ದಾರೆ ಎಂದು ಉಜಿರೆ ಶ್ರೀ ಜನಾರ್ದನ ದೇವಾಲಯದ ಶರತ್ ಕ್ರಷ್ಣ ಪಡ್ವೆಟ್ನಾಯ ಹೇಳಿದರು. ಅವರು ಉಜಿರೆಯ ಕೃಷ್ಞಾನುಗ್ರಹ ಸಭಾಭವನದಲ್ಲಿ ಎ.25ರಂದು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದಿಂದ ತಾಲೂಕಿನ 75 ಗೃಹ ರಕ್ಷಕ ಸಿಬ್ಬಂದಿ ಯವರಿಗೆ ಆಹಾರ ಕಿಟ್ ವಿತರಿಸಿ ಮಾತನಾಡುತ್ತಿದ್ದರು.ಶಾಸಕ ಹರೀಶ್ ಪೂಂಜ ಮಾತನಾಡಿ ದೇಶದ ಲಾಕ್ ಡೌನ್ ಸಂದರ್ಭದಲ್ಲಿ ಜನರ ನಿಯಂತ್ರಣ ಮಾಡುವಲ್ಲಿ […]

ಉಜಿರೆ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಆಹಾರಧಾನ್ಯದ ಕಿಟ್ ವಿತರಣೆ

ಕೊರೊನ ಮುಕ್ತ ಸಮಾಜ ನಿರ್ಮಾಣ ಕಾರ್ಯದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ತರವಾದುದು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು,ಅವರು ಉಜಿರೆಯ ಕ್ರಷ್ಞಾನುಗ್ರಹ ಸಭಾಭವನದಲ್ಲಿ ಎ.25ರಂದು ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದಿಂದ ಉಜಿರೆ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ಆಹಾರಧಾನ್ಯದ ಕಿಟ್ ವಿತರಿಸಿ ಮಾತನಾಡುತ್ತದ್ದರು. ವೇದಿಕೆಯಲ್ಲಿ ಉಜಿರೆ ಶ್ರೀ ಜನಾರ್ದನ ದೇವಾಲಯದ ಶರತ್ ಕ್ರಷ್ಣ ಪಡ್ವೆಟ್ನಾಯ, ಬದುಕು ಕಟ್ಟೋಣ ಬನ್ನಿ ತಂಡದ ರಾಜೇಶ್ ಪೈ ಇದ್ದರು.ಬದುಕು ಕಟ್ಟೋಣ ಬನ್ನಿ ತಂಡದ ಮೋಹನ್ ಕುಮಾರ್ ಪ್ರಸ್ತಾವಿಸಿ, ತಿಮ್ಮಯ್ಯ ನಾಯ್ಕ […]

ಬಿಗ್ ಬ್ರೇಕಿಂಗ್ ನ್ಯೂಸ್ ಸಾಲದ ಕಂತು ಪಾವತಿಸುವಂತೆ ಆಶಾ ಕಾರ್ಯಕರ್ತೆಗೆ ದಮ್ಕಿ

ಉಜಿರೆಯ ದ್ವಿಚಕ್ರ ವಾಹನ ವಿತರಕನೋರ್ವ ಸಾಲದ ಕಂತು ಪಾವತಿಸುವಂತೆ ಆಶಾ ಕಾರ್ಯಕರ್ತೆಗೆ ಇಂದಿನ ಸಂಕಷ್ಟದ ದಿನಗಳಲ್ಲಿ ದಮ್ಕಿ ಹಾಕಿದ ಬಗ್ಗೆ ತಿಳಿದು ಬಂದಿದೆ.ತಾಲೂಕಿನ ಆಶಾ ಕಾರ್ಯಕರ್ತೆಯೋರ್ವಳು ಉಜಿರೆಯ ದ್ವಿಚಕ್ರ ವಾಹನ ವಿತರಕರಿಂದ ಕೆಲ ತಿಂಗಳ ಹಿಂದೆ ಸ್ಕೂಟಿಯೊಂದನ್ನು ಖರೀದಿಸಿದ್ದರು. ಈ ಸ್ಕೂಟಿ ಖರೀದಿಗೆ ಅದೇ ದ್ವಿಚಕ್ರ ವಾಹನ ವಿತರಕ ಸದ್ರಿ ಆಶಾ ಕಾರ್ಯಕರ್ತೆಗೆ ಖಾಸಗಿ ಫೈನಾನ್ಸಿನಿಂದ ಸಾಲ ಒದಗಿಸಿದ್ದರು ಎನ್ನಲಾಗಿದೆ. ಸಾಲಕ್ಕೆ ಭದ್ರತೆಯಾಗಿ ತಿಂಗಳ ಕಂತಿನ‌ ಮೊಬಲಗಿನ ಚೆಕ್ ಸಹಿತ ಸಾಕಷ್ಟು ಭದ್ರತೆಯನ್ನು ಆಶಾ ಕಾರ್ಯಕರ್ತೆ ಒದಗಿಸಿದ್ದರು. […]