ಕಲ್ಲಬೆಟ್ಟು: ಗೋವುಗುಡ್ಡೆಯಲ್ಲಿ ಆಹಾರ ಕಿಟ್ ವಿತರಣೆ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು 18ನೇ ವಾರ್ಡಿನ ಗೋವುಗುಡ್ಡೆ 5 ಸೆಂಟ್ಸ್ ನ ಅರ್ಹ ಕುಟುಂಬಗಳಿಗೆ ವಾರ್ಡ್ ಸದಸ್ಯ ಜೊಸ್ಸಿ ಮಿನೇಜಸ್ ಅವರು ವೈಯಕ್ತಿಕ ನೆಲೆಯಲ್ಲಿ ನೀಡಿರುವ ಅಕ್ಕಿ, ತರಕಾರಿ ಮತ್ತು ನಿತ್ಯ ಬಳಕೆಯ ವಸ್ತುಗಳನ್ನು ಒಳಗೊಂಡಿರುವ ಆಹಾರದ ಕಿಟ್ ಗಳನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ವಿತರಿಸಿದರು.ಮಾಸ್ಕ್ ತೊಟ್ಟು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕಿಟ್ ಗಳನ್ನು ವಿತರಿಸಿ ಮಾತನಾಡಿದ ಅಭಯಚಂದ್ರ ಜೈನ್ ಅವರು ಕೊರೋನಾ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಲಾಕ್ ಡೌನ್ […]
ಕರಿಂಜೆ: ರಾಮಗುಡ್ಡೆ ನಿವಾಸಿಗಳಿಗೆ ಆಹಾರ ಕಿಟ್ ವಿತರಣೆ

ಮೂಡುಬಿದಿರೆ : ಪುರಸಭಾ ವ್ಯಾಪ್ತಿಯ 20ನೇ ವಾರ್ಡ್ ನ ರಾಮಗುಡ್ಡೆ ಪರಿಸರದ ಕುಟುಂಬಗಳಿಗೆ ವಾರ್ಡ್ ಸದಸ್ಯ ಸುರೇಶ್ ಕೊಟ್ಯಾನ್ ಅವರು ವೈಯಕ್ತಿಕ ನೆಲೆಯಲ್ಲಿ ನೀಡಿರುವ ಅಕ್ಕಿ ಮತ್ತು ಇತರ ಆಹಾರ ಸಾಮಗ್ರಿಗಳನ್ನು ಒಳಗೊಂಡಿರುವ ಕಿಟ್ ಗಳನ್ನು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ವಿತರಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಪುರಸಭಾ ಸದಸ್ಯರಾದ ಸುರೇಶ್ ಕೊಟ್ಯಾನ್, ಜೊಸ್ಸಿ ಮಿನೇಜಸ್, ಮಾಜಿ ಸದಸ್ಯರುಗಳಾದ ಮೇರಿ ಪಿರೇರಾ, ಸುಂದರ, ಕಲ್ಲಬೆಟ್ಟು ಸೇವಾ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಆಲ್ವಿನ್ ಮಿನೇಜಸ್, […]
ಯಕ್ಷಗಾನ ಕಲಾವಿದರಿಗೆ ಆಹಾರ ಧಾನ್ಯದ ಕಿಟ್ ವಿತರಣೆ

ಬೆಳ್ತಂಗಡಿ: ಕೋವಿದ್ -19 ಸೋಂಕಿನ ಹಿನ್ನಲೆಯಲ್ಲಿ ಲಾಕ್ ಡೌನ್ ನಿಂದ ಯಕ್ಷಗಾನ ಮೇಳಗಳ ತಿರುಗಾಟವನ್ನು ಸ್ಥಗಿತಗೊಳಿಸಲಾಗಿದ್ದು, ಇದರಿಂದ ಸಂಕಷ್ಟದಲ್ಲಿರುವ ತಾಲೂಕಿನ ಯಕ್ಷಗಾನ ಕಲಾವಿದರು ಹಾಗೂ ರಂಗ ಪರಿಚಾಕರಿಗೆ ಶಾಸಕ ಹರೀಶ್ ಪೂಂಜ ಅವರು ಉಜಿರೆ ಶ್ರೀ ರಾಮಕೃಷ್ಣ ಸಭಾಭವನದಲ್ಲಿ ಸಾಂಕೇತಿಕವಾಗಿ ಶ್ರಮಿಕ ನೆರವು ಆಹಾರ ಕಿಟ್ ಗಳನ್ನು ಎಪ್ರಿಲ್ 24ರಂದು ವಿತರಿಸಿದರು.ಕಿಟ್ ವಿತರಿಸಿ ಮಾತನಾಡಿದ ಶಾಸಕ ಹರೀಶ್ ಪೂಂಜ ಅವರು, ಲಾಕ್ ಡೌನ್ ನಿಂದ ಮೇಳಗಳ ತಿರುಗಾಟವಿಲ್ಲದೇ ಕಲಾವಿದರು ಸಮಸ್ಯೆಯಲ್ಲಿದ್ದಾರೆ. ತಾಲೂಕಿನ ಸುಮಾರು 150ಕ್ಕೂ ಹೆಚ್ಚು ಕಲಾವಿದರಿದ್ದು, […]
ಮೃತರ ಅಂತ್ಯಸಂಸ್ಕಾರಕ್ಕೆ ಅಡ್ಡಿ ಪಡಿಸಿದ ಶಾಸಕರ ವಿರುದ್ಧ ಕ್ರಮಕ್ಕೆ ಎಂ.ಎಲ್.ಸಿ. ಹರೀಶ್ ಕುಮಾರ್ ಆಗ್ರಹ

ಜಿಲ್ಲೆಯಲ್ಲಿ ಕೋವಿಡ್ ನಿಂದ ಮೃತ ಪಟ್ಟ ಮಹಿಳೆಯ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡದೆ ತಡರಾತ್ರಿಯವರೆಗೆ ಜಿಲ್ಲಾಡಳಿತವನ್ನು ತಡೆದ ಜಿಲ್ಲೆಯ ಶಾಸಕರುಗಳ ವಿರುದ್ದ ಕೂಡಲೇ ಸರಕಾರ ಕೇಸು ದಾಖಲಿಸಿ ಬಂಧಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಕೆ ಹರೀಶ್ ಕುಮಾರ್ ಒತ್ತಾಯಿಸಿದ್ದಾರೆ.ಬೆಳ್ತಂಗಡಿ ಯಲ್ಲಿ ಎಪ್ರಿಲ್ 24ರಂದು ಮಾಧ್ಯಮದವರೊಂದಿಗೆ ಮಾತನಾಡಿದರು. ಮೃತದೇಹವನ್ನು ಗೌರವಯುತವಾಗಿ ಅಂತ್ಯಕ್ರಿಯೆ ನಡೆಸಬೇಕಾಗಿದೆ. ಅಲ್ಲಿ ಯಾವುದೇ ರೀತಿಯಲ್ಲಿ ಸೋಂಕು ಹರಡುವ ಸಾಧ್ಯತೆಗಳಿಲ್ಲ ಆದರೂ ಉದ್ದೇಶ ಪೂರ್ವಕವಾಗಿ ಬೇಜವಾಬ್ದಾರಿಯಿರುವ ಶಾಸಕರೆ ಮುಂದೆ ನಿಂತು ಅದನ್ನು […]
ಊರಿಗೆಲ್ಲಾ ಬುದ್ಧಿ ಹೇಳೋರು ಉಜಿರೆಗೆ ಬಂದರು ವೈಯಕ್ತಿಕ ಅಂತರಕ್ಕೇ ಸವಾಲು ಹಾಕಿದರು

ರಾಜ್ಯದ ಗೃಹ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಬೊಮ್ಮಾಯಿ ಎಪ್ರಿಲ್ 23ರ ಮಧ್ಯಾಹ್ನ ಪೂರ್ವ ನಿಗದಿತ ಸರಕಾರಿ ಕಾರ್ಯಕ್ರಮ ಇಲ್ಲದಿದ್ದರೂ ಉಜಿರೆಗೆ ಆಗಮಿಸಿ; ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜಾ ಏರ್ಪಡಿಸಿದ ಆಹಾರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ದೃಶ್ಯ ಮಾಧ್ಯಮದ ಮುಂದೆ ಅನಗತ್ಯ ಪೋಸ್ ನೀಡುವ ಸಂದರ್ಭ ವೈಯಕ್ತಿಕ ಅಂತರದ ಅನಿವಾರ್ಯತೆಗೇ ಸವಾಲು ಹಾಕಿ, ಕೊರೋನಾ ಸೋಂಕು ವಿರೋಧಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನಸಾಮಾನ್ಯರಲ್ಲಿ ಗೊಂದಲ ಮೂಡಿಸಿದರು.ಹೇಳಿಕೇಳಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ […]
ಸಮಾಜ ಘಾತುಕರ ವಿರುದ್ಧ ಕಠಿಣ ಕ್ರಮ-ಸಚಿವ ಬೊಮ್ಮಾಯಿ

ಕೋವಿಡ್ 19 ಸೋಂಕಿನ ವಿರುದ್ಧದ ಹೋರಾಟದ ಭಾಗವಾಗಿ ರಾಜ್ಯದಲ್ಲಿ ಲಾಕ್ ಡೌನ್ ಇದ್ದರೂ ಸಮಾಜದ ಈ ಹೋರಾಟಕ್ಕೆ ವಿರೋಧಾಭಾಸ ಆಗುವಂತೆ ಕೆಲವರು ನಡೆದುಕೊಳ್ಳುತ್ತಿದ್ದಾರೆ. ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಹೊಸ ಕಾನೂನನ್ನು ಜಾರಿಗೊಳಿಸಿದೆ ಎಂದು ರಾಜ್ಯ ಗ್ರಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.ಅವರು ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಎ.23ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರ ನೇತೃತ್ವದಲ್ಲಿ ಉಜಿರೆ ಬದುಕು ಕಟ್ಟೋಣ ಬನ್ನಿ ತಂಡದ ಸಹಕಾರದಲ್ಲಿ ನಡೆದ 30,000 ಆಹಾರ ಧಾನ್ಯದ ಕಿಟ್ […]
ಕೊರೋನಾ ಮಾರಿಯ ವಿರುದ್ಧ ಹೋರಾಟ ಪ್ರಧಾನಿ ಮೋದಿ ಕರೆಗೆ ಜನತೆಯ ಸ್ಪಂದನ-ಕಟೀಲ್

ದೇಶದಲ್ಲಿ ಕೋವಿಡ್ 19 ವೈರಸ್ ಹೆಚ್ಚಾದಾಗ ಇದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ ಕರೆಗೆ ಜನತೆ ಗೌರವ ನೀಡಿ ಸಹಕರಿಸಿದ್ದು ಕೊರೋನಾ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಇಡೀ ದೇಶವೇ ಭಾಗವಹಿಸಿದಂತಾಗಿದೆ.. ರಾಜ್ಯದ ಲ್ಲಿ ಮುಖ್ಯ ಮಂತ್ರಿ ಯಡಿಯೂರಪ್ಪ ಅವರು ಆರ್ಥಿಕವಾಗಿ ಹಿಂದುಳಿದ ಜನತೆಗೆ ವಿವಿಧ ಕಾರ್ಯಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯ ಪಟ್ಟರು.ಅವರು ಧರ್ಮಸ್ಥಳದಲ್ಲಿ ಎ.23 ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ […]
ಕೊರೋನಾ ಸೋಂಕು ತಡೆಗೆ ಕ್ರಮ ಪ್ರಧಾನಿ ಮನವಿಗೆ ಜನತೆಯಿಂದ ಒಳ್ಳೆಯ ಸ್ಪಂದನ- ಡಾl ಹೆಗ್ಗಡೆ

ಪ್ರಧಾನಿ ಮನವಿಗೆ ಜನತೆಯಿಂದ ಒಳ್ಳೆಯ ಸ್ಪಂದನ- ಡಾl ಹೆಗ್ಗಡೆಕೊರೊನ ಮುಕ್ತ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಗೆ ದೇಶದ ಜನತೆ ಉತ್ತಮವಾಗಿ ಸಹಕರಿಸಿದ್ದಾರೆ. ಜನರು ಶಿಸ್ತಿನಿಂದ ಆದೇಶವನ್ನು ಪಾಲನೆ ಮಾಡಿ ಜಿಲ್ಲೆಯಲ್ಲೂ ಸಾಕಷ್ಟು ಎಚ್ಚರಿಕೆ ವಹಿಸಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.ಅವರು ಧರ್ಮಸ್ಥಳದಲ್ಲಿ ಎ.23ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಉಜಿರೆ ಬದುಕು ಕಟ್ಟೋಣಬನ್ನಿ ತಂಡದ ಸಹಕಾರದಲ್ಲಿ ನಡೆದ 30,000 ಆಹಾರ ಕಿಟ್ ಗಳನ್ನು ಸಾಂಕೇತಿಕವಾಗಿ ವಿತರಿಸಿ, ಬಳಿಕ […]
ವೈಯಕ್ತಿಕ ಅಂತರಕ್ಕೆ ಸವಾಲಾದ ಮಾಧ್ಯಮ ಮೈಕ್ ಗಳು

ಈ ಸತ್ಯವನ್ನು ಹೇಳಿದರೆ ದೃಶ್ಯ ಮಾಧ್ಯಮದವರು ಹಾಗೂ ಆನ್ ಲೈನ್ ಮಾಧ್ಯಮದ ಕೆಲವರು ನನ್ನ ಮೇಲೆ ಹರಿಹಾಯ್ದಾರು. ಮುಂಬಯಿಯಲ್ಲಿ 53 ಮಂದಿ ನನ್ನ ಮಾಧ್ಯಮ ಸಹೋದರರು ಕೊರೋನಾ ಸೋಂಕು ತಗಲಿಸಿಕೊಂಡ ಮೇಲೆ ಓರ್ವ ಪತ್ರಿಕಾ ಸಂಪಾದಕನಾಗಿ ನಾನು ಈ ಸತ್ಯವನ್ನು ಹೇಳಲೇ ಬೇಕಾಗಿದೆ. ನಿಮಗೆ ಅಚ್ಚರಿಯಾಗಬಹುದು ನಾನ್ಯಾಕೆ ‘ಮುಂಬಯಿಯ ನನ್ನ ಮಾಧ್ಯಮ ಸಹೋದರರು ಕೊರೋನಾ ಸೋಂಕು ತಗಲಿಸಿಕೊಂಡರು’ ಎಂದು ಉಲ್ಲೇಖ ಮಾಡಿದೆ ಎಂಬ ಬಗ್ಗೆ. ಪ್ರಾಯಶಃ ಮುಂಬಯಿಯ ಈ ಮಾಧ್ಯಮ ಸಹೋದರರು ಲಾಕ್ ಡೌನ್ ಸಂದರ್ಭದಲ್ಲಿ ಈ […]
ಕಾಶಿಪಟ್ಣ ಪಂಚಾಯತ್ ವ್ಯಾಪ್ತಿಯಲ್ಲಿ ಆಹಾರ ಕಿಟ್ ವಿತರಣೆ, ವೈಯಕ್ತಿಕ ಅಂತರ ಇಲ್ಲೂ ಇಲ್ಲ.

ಕೊವಿಡ್ 19ಕೊರೊನ ಸೋಂಕು ಹರಡುವಿಕೆಯನ್ನು ತಡೆಯಲು ಸರಕಾರ ಲಾಕ್ ಡೌನ್ ವಿಧಿಸಿರುವ ಪರಿಣಾಮ ಗ್ರಾಮೀಣ ಭಾಗದ ಬಡವರಿಗೆ, ಕೃಷಿ-ಕೂಲಿ ಕಾರ್ಮಿಕರಿಗೆ ಜೀವನ ಸಾಗಿಸುವುದೇ ದುಸ್ತರವಾಗಿದ್ದ ಈ ಸಂಧರ್ಭದಲ್ಲಿ ಊರಿನ ದಾನಿಗಳು, ಸಾಮಾಜಿಕ ಸೇವಾ ಕಾರ್ಯಕರ್ತರ ನೆರವಿನಿಂದ ಕಾಶಿಪಟ್ಣ ಪಂಚಾಯತ್ ವತಿಯಿಂದ ಎಲ್ಲಾ ಅರ್ಹ ಬಡ ಕುಟುಂಬಿಕರಿಗೆ ಪ್ರತಿವಾರ್ಡ್ ಗಳಲ್ಲಿ ಮನೆ ಮನೆಗೆ ಹೋಗಿ ದಿನಸಿ ಕಿಟ್ ಗಳನ್ನು ವಿತರಿಸಲಾಯಿತು. ಕಿಟ್ ವಿತರಣೆಗೆ ಸಾಂಕೇತಿಕವಾಗಿ ಚಾಲನೆ ನೀಡಿದ ಜಿಲ್ಲಾ ಪಂಚಾಯತ್ ಸದಸ್ಯ ಧರಣೇಂದ್ರ ಕುಮಾರ್; ಇಲ್ಲಿನ ಗ್ರಾಮ ಪಂಚಾಯತ್ […]