ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಸ್ವಾಬ್ ಸಂಗ್ರಹ ಕೇಂದ್ರಕ್ಕೆ ಪೂಂಜಾ ಚಾಲನೆ

ಬೆಳ್ತಂಗಡಿ : ಜಿಲ್ಲಾ ನಿರ್ಮಿತಿ ಕೇಂದ್ರದಿಂದ ಕೊಡಮಾಡಲ್ಪಟ್ಟ ಕೋವಿಡ್-19 ಗಂಟಲು ದ್ರವದ ಮಾದರಿ ಸಂಗ್ರಹಣ ಕೇಂದ್ರವನ್ನು ಶಾಸಕ ಹರೀಶ್ ಪೂಂಜಾ ಎಪ್ರಿಲ್ 22ರಂದು ಆಸ್ಪತ್ರೆಗೆ ಹಸ್ತಾಂತರಿಸಿ ಚಾಲನೆ ನೀಡಿದರು.ಸುಮಾರು 35 ಸಾವಿರ ರೂ. ವೆಚ್ಚದಿಂದ ನಿರ್ಮಾಣಗೊಂಡ ಈ ಕೇಂದ್ರ ಜಿಲ್ಲಾಡಳಿತದ ಆದೇಶದ ಮೇರೆಗೆ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಲಿದೆ. ಇದರಿಂದ ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯಲ್ಲೂ ಕೋವಿಡ್-19 ಸೋಂಕಿತ ವ್ಯಕ್ತಿಯ ಗಂಟಲು ದ್ರವ ಸಂಗ್ರಹ (ಕಿಯೋಸ್ಕ್) ನಾಳೆಯಿಂದಲೇ ಆರಂಭವಾಗಲಿದೆ. ಸೋಂಕಿತ ವ್ಯಕ್ತಿ ಮತ್ತು ವೈದ್ಯರ ನೇರ ಸಂಪರ್ಕ […]

ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಇದರ ವತಿಯಿಂದ ಕೋವಿಡ್-19 ಪರಿಹಾರ ನಿಧಿಗೆ 2 ಲಕ್ಷದ ಚೆಕ್ ಶಾಸಕರಿಗೆ ಹಸ್ತಾಂತರ.

ಕೊಕ್ಕಡ, ಎ.22: ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ಸೌತಡ್ಕ ಇದರ ವತಿಯಿಂದ ಪ್ರಧಾನ ಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಹಾಗೂ ಮುಖ್ಯಮಂತ್ರಿಗಳ ಕೊವಿಡ್ ಪರಿಹಾರ ನಿಧಿಗೆ ತಲಾ 1 ಲಕ್ಷ ಮೊತ್ತದ ಚಕ್ ಅನ್ನು ಟ್ರಸ್ಟ್ ಅಧ್ಯಕ್ಷ ಕೆ. ಕೃಷ್ಣ ಭಟ್ ರವರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರವರಿಗೆ ಟ್ರಸ್ಟ್ ಆವರಣದಲ್ಲಿ ಹಸ್ತಾಂತರಿಸಿದರು.ದೇಶದೆಲ್ಲೆಡೆ ಮಹಾಮಾರಿ ಕೋವಿಡ್ 19 ನಿಂದ ಜನರು ಸಂಕಷ್ಟಕ್ಕೆ ಒಳಗಾಗಿದ್ದು ಈ ಸಂದರ್ಬದಲ್ಲಿ ಸಾಮಾಜಿಕ ಸೇವೆಯನ್ನು ನಡೆಸಿಕೊಂಡು ಬರುತ್ತಿರುವ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ […]

ಆಶಾ ಕಾರ್ಯಕರ್ತೆಯರಿಗೆ ಅಕ್ಕಿ, ಆಹಾರ ಸಾಮಾಗ್ರಿ ವಿತರಣೆ

ನೆಲ್ಯಾಡಿ, ಎ. 21: ನೆಲ್ಯಾಡಿ ಕ್ಷೇತ್ರದ ತಾ.ಪಂ.ಸದಸ್ಯೆ, ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷೆಯೂ ಆಗಿರುವ ಉಷಾ ಅಂಚನ್‍ರವರು ತಮ್ಮ ತಾ.ಪಂ.ಕ್ಷೇತ್ರ ವ್ಯಾಪ್ತಿಯ ನೆಲ್ಯಾಡಿ, ಕೊಣಾಲು ಹಾಗೂ ಆಲಂತಾಯ ಗ್ರಾಮದ ಆಶಾ ಕಾರ್ಯಕರ್ತೆಯರಿಗೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಕ್ಕಿ ಹಾಗೂ ಆಹಾರ ಸಾಮಾಗ್ರಿ ವಿತರಣೆ ಮಾಡಿದರು.ಈ ವೇಳೆ ಮಾತನಾಡಿದ ಉಷಾ ಅಂಚನ್‍ರವರು, ಆಶಾ ಕಾರ್ಯಕರ್ತೆಯರು ವೈದ್ಯರು, ಆರೋಗ್ಯ ಸಹಾಯಕಿಯರಿಗೆ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಮಹಾಮಾರಿ ಒಕ್ಕರಿಸಿಕೊಂಡಿರುವ ಸಂಕಷ್ಟ ಕಾಲದಲ್ಲಿ ಆಶಾ […]

ಮಿಡಿಯಿತು ಪೊಲೀಸರ ಮಾನವೀಯ ಹೃದಯ, ವೈಯಕ್ತಿಕ ಅಂತರ ಜಾಗೃತಿ ಇವರಲ್ಲೂ ಇಲ್ಲ..

ಬೆಳ್ತಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹಾಗೂ ಸಿಬ್ಬಂದಿಯವರು ತಮ್ಮ ಠಾಣಾ ವ್ಯಾಪ್ತಿಯ ಪ್ರತೀ ಗಸ್ತಿನ 2 ಅಶಕ್ತ ಕುಟುಂಬಗಳಂತೆ ಒಟ್ಟು 70 ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ಅವರವರ ಮನೆಗಳಿಗೆ ಎಪ್ರಿಲ್ 20ರಂದು ತಲುಪಿಸಿ ಮಾನವೀಯತೆ ತೋರಿದರು.ನೂತನ ಗಸ್ತು ವ್ಯವಸ್ಥೆಯ ಜನಸ್ನೇಹಿ ಪೊಲೀಸ್ ವ್ಯವಸ್ಥೆಯಂತೆ ಬೆಳ್ತಂಗಡಿ ಪಿಎಸ್ಐ ನಂದಕುಮಾರ್ ಎಂ. ಎಂ. ರವರ ನೇತೃತ್ವದಲ್ಲಿ ಠಾಣಾ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಯವರು ತಮ್ಮ ವೇತನದಿಂದ ಅಗತ್ಯ ವಸ್ತುಗಳ ಕಿಟ್ ತಯಾರಿಸಿ ಹಂಚಿಕೆ ಮಾಡಿರುವುದಾಗಿದೆ.ಕೋವಿಡ್ 19 ತಡೆಗಟ್ಟಲು […]

ಊರು ಕಾಯುವವರೂ ಮರೆತ ವೈಯಕ್ತಿಕ ಅಂತರ.

ಎಪ್ರಿಲ್21ರಂದು ಬೆಳಿಗ್ಗೆ ಬೆಳ್ತಂಗಡಿ ಗೃಹ ರಕ್ಷಕ ಇಲಾಖೆಯ ಕಛೇರಿಗೆ ಆಗಮಿಸಿದ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್, ಕೋರೊನಾ ವೈರಸ್ ತಡೆಗಟ್ಟುವ ಸರಕಾರದ ಕಾರ್ಯಪಾಲನೆಯಲ್ಲಿ ಗೃಹ ರಕ್ಷಕ ಸಿಬ್ಬಂದಿಗಳು ತನ್ನ ಜೀವದ ಹಂಗು ತೊರೆದು ಶ್ರಮಿಸುತ್ತಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.. ಮತ್ತು ಗೃಹ ರಕ್ಷಕ ಸಿಬ್ಬಂದಿಗಳ ವೇತನ ಮತ್ತು ಮೂಲಭೂತ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸರಕಾರದ ಗಮನ ಸೆಳೆದು ಸೂಕ್ತ ರೀತಿಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದರು. ಕೋರೊನ ವೈರಸ್ ಲಾಕ್ಡೌನ್ ನಡುವೆ ಕಾರ್ಯ ನಿರ್ವಹಿಸುತ್ತಿರುವ […]

ಅಕ್ರಮ ದನ ಸಾಗಾಟದ ಪಿಕಪ್ ಸಹಿತ ಆರೋಪಿಗಳು ಪರಾರಿ

ಎಪ್ರಿಲ್ 21 ರಂದು ರಾತ್ರಿ ಸುಮಾರು 8 ಗಂಟಗೆ ಗುರುವಾಯನಕೆರೆ ಯಿಂದ ಉಪ್ಪಿನಂಗಡಿ ಕಡೆಗೆ ಅತೀ ವೇಗವಾಗಿ ಬಿಳಿ ಬಣ್ಣದ ಅಕ್ರಮ ದನ ಸಾಗಾಟದ ಪಿಕಪ್ ಒಂದು ಅತೀ ವೇಗವಾಗಿ ಚಲಿಸುತಿದ್ದು, covid-19ನ ಲಾಕ್ ಡೌನ್ ನಿಮಿತ್ತ ಬೆಳ್ತಂಗಡಿ ಪೊಲೀಸ್ ರು ಗಸ್ತು ನಲ್ಲಿದ್ದರು ಪರಪ್ಪು ಎಂಬಲ್ಲಿ ಸಂಶಯಗೊಂಡ ಪೊಲೀಸ್ ರು ತಮ್ಮ ಬೈಕನ್ನು ರಸ್ತೆಗೆ ಅಡ್ಡಲಾಗಿ ಇಟ್ಟಿದ್ದರು ವೇಗವಾಗಿ ಬಂದ ಪಿಕಪ್ ವಾಹನವು ಚಾಲಕ ಮತ್ತ ಇಬ್ಬರು ಆರೋಪಿಗಳೊಂದಿಗೆ ಪೊಲೀಸರನ್ನು ಯಾಮಾರಿಸಿ ನಾಳ ದೇವಸ್ಥಾನದ ಪಳ್ಳಾದೆ […]

ಕಿಡಿಗೇಡಿಗಳ ಕುಕೃತ್ಯಕ್ಕೆ ಸೋಮಾವತಿ ನದಿನೀರು ಕಲುಷಿತ

ಬೆಳ್ತಂಗಡಿ: ನಗರ ಪಂಚಾಯತ್ ವ್ಯಾಪ್ತಿಯಲ್ಲಿ 11 ವಾರ್ಡ್ ಗಳಿಗೆ ನೀರು ಪೂರೈಸುತ್ತಿದ್ದ ಸೋಮಾವತಿ ನದಿ ನೀರಿಗೆ ದುಷ್ಕರ್ಮಿಗಳು ವಿಷ ಬೆರಸಿರುವ ಅನುಮಾನ ವ್ಯಕ್ತವಾಗಿದ್ದು ಮೀನುಗಳ ಮಾರಣಹೋಮವಾಗಿವೆ. ಬೆಳ್ತಂಗಡಿ ನಗರ ಪಂಚಾಯತದ ಕುಡಿಯುವ ನೀರಿನ ಪಂಪುಹೌಸ್ ಬಳಿಯ ಸೋಮವತಿ ನದಿಯ ಗುಂಡಿಯಲ್ಲಿ ಎಪ್ರಿಲ್ 20ರ ರಾತ್ರಿ ಕಿಡಿಗೇಡಿಗಳು ಸ್ಫೋಟಕ ಬೆರೆಸಿ ಮೀನು ಹಿಡಿಯಲು ಯತ್ನಿಸಿ, ನೀರನ್ನು ಕುಲುಷಿತಗೊಳಿಸಿದ ಪರಿಣಾವಾಗಿ ಮೀನುಗಳು ಸಾವನ್ನಪ್ಪಿವೆ.ರಾತ್ರಿ ಐದಾರು ಮಂದಿಯ ತಂಡ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದ್ದು, ಸ್ಥಳೀಯರು ನೀಡಿದ ಖಚಿತ ಮಾಹಿತಿಯನ್ವಯ ಬೆಳ್ತಂಗಡಿ […]

ಆಹಾರ ಸಾಮಗ್ರಿ ವಿತರಣೆ ಜವನೆರ್ ಬೆದ್ರ ನಂ. ೧ ಸಾಧನೆ

ಮೂಡುಬಿದಿರೆ : ಕೊರೋನಾ ವೈರಸ್ ಸಮುದಾಯ ಮಟ್ಟದಲ್ಲಿ ಹರಡುವುದನ್ನು ತಡೆಗಟ್ಟಲು ಸರಕಾರ ಮಾಡಿರುವ ಲಾಕ್ ಡೌನ್ ಆದೇಶ ದೈನಂದಿನ ಸಂಪಾದನೆಯಿಂದ ಜೀವಿಸುವ ಮತ್ತು ಬಾಡಿಗೆ ಮನೆಗಳಲ್ಲಿ ವಾಸಿಸುವ ಕುಟುಂಬಗಳನ್ನು ಹೆಚ್ಚು ಕಂಗೆಡಿಸುವಂತೆ ಮಾಡಿದೆ. ಈ ಸಂದರ್ಭದಲ್ಲಿ ಮೂಡುಬಿದಿರೆ ವಲಯದ ನಾಗರಿಕರ ನೆರವಿಗೆ ಪ್ರಥಮವಾಗಿ ಧಾವಿಸಿದ್ದು ಇಲ್ಲಿನ ಜವನೆರ್ ಬೆದ್ರ ಸಂಘಟನೆ. ಕಳೆದ ಎರಡು ವರ್ಷಗಳಿಂದ ಮೂಡುಬಿದಿರೆಯ ಸ್ವಚ್ಛತೆಗೆ ವಿಶೇಷ ಕೊಡುಗೆ ನೀಡಿರುವ ಜವನೆರ್ ಬೆದ್ರ ಸಂಘಟನೆ ಈಗ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಜನರ ನೆರವಿಗೆ ಮಿಂಚಿನ […]

ಬಿಹಾರದ ಕಾರ್ಮಿಕರಿಗೆ ಅಕ್ಕಿ ವಿತರಣೆ-ಹಸಿವಿನ ಬೇಗೆಯಲ್ಲಿ ವೈಯಕ್ತಿಕ ಅಂತರ ಮರೆತ ಬಡಪಾಯಿಗಳು

ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮದಲ್ಲಿ ಹೊಟ್ಟೆಪಾಡಿಗಾಗಿ ಉದ್ಯೋಗವನ್ನರಸಿ ಬಂದ 24ಮಂದಿ ವಲಸೆ ಕಾರ್ಮಿಕರಿದ್ದಾರೆ. ಇದೀಗ ಲಾಕ್ ಡೌನಿನಿಂದಾಗಿ ಇತ್ತ ಕೆಲಸವೂ ಇಲ್ಲದೇ, ಅತ್ತ ತಮ್ಮೂರಿಗೂ ಹೋಗಲಾಗದೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಇವರೆಲ್ಲರೂ ಒಪ್ಪೊತ್ತಿನ ಕೂಳಿಗೂ ಪರದಾಡಬೇಕಾಗಿದೆ. ಇವರ ವೇದನೆಯನ್ನರಿತ ಬೆಳ್ತಂಗಡಿಯ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಈ ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ಪರಿಹಾರವಾಗಿ ನೀಡಿದ 50ಕೆ.ಜಿ. ಅಕ್ಕಿ ಹಾಗೂ 5ಕೆ.ಜಿ. ಅವಲಕ್ಕಿಯನ್ನು ತಣ್ಣೀರುಪಂತ ಗ್ರಾಮ ಪಂಚಾಯತ್ ಅಧ್ಯಕ್ಷ ಜಯವಿಕ್ರಮ್ ಹಸ್ತಾಂತರಿಸಿದರು. ಇದರೊಂದಿಗೆ ಸ್ಥಳೀಯ ದಾನಿಗಳಿಂದ ಗ್ರಾಮ ಪಂಚಾಯತಿನ‌ ಸಂಗ್ರಹಿಸಿದ ಮೂಲಕ […]

ಕೊಕ್ಕಡ ಸ್ವಾಭಿಮಾನಿ ಗೆಳೆಯರ ಬಳಗ ಮತ್ತು ದಾನಿಗಳಿಂದ ಕಿಟ್ ಗಳ ವಿತರಣೆ

ಕೊಕ್ಕಡ, ಎ. 20: ಕೊರೋನಾ ಸಂಬಂದಿ ದೇಶವೇ ಲಾಕ್ ಡೌನ್ ಆಗಿರುವ ಸಂದರ್ಭ ಕೊಕ್ಕಡ ಗ್ರಾಮದಲ್ಲಿರುವ ಸುಮಾರು 80 ಕ್ಕಿಂತಲೂ ಅಧಿಕ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಬಡಕುಟುಂಬಗಳ ಕಷ್ಟವನ್ನು ಮನಗಂಡು ತಾ.ಪಂ. ಸದಸ್ಯ ಲಕ್ಷ್ಮೀನಾರಾಯಣ ಟಿ.ಎಂ. ನೇತೃತ್ವದಲ್ಲಿ ಮತ್ತು ಸ್ವಾಭಿಮಾನಿ ಗೆಳೆಯರ ಬಳಗದಿಂದ ಕಿಟ್ ವಿತರಣೆ ಮಾಡುವ ಕಾರ್ಯ ಸೋಮವಾರದಂದು ಉಪ್ಪಾರು ಸುಬ್ರಹ್ಮಣ್ಯ ಉಪ್ಪಾರ್ಣ ಇವರ ಸಹಯೋಗದಲ್ಲಿ ನಡೆಯಿತು.ಜೈ ಕನ್ನಡಮ್ಮ ಪತ್ರಿಕೆಗೆ ಮಾಹಿತಿ ನೀಡಿದ ಕೊಕ್ಕಡ ತಾ.ಪಂ.ಲಕ್ಷ್ಮೀನಾರಾಯಣ ಟಿ.ಎಂ, ಬಡತನದಲ್ಲಿರುವ ದಿನಗೂಲಿ ಕಾರ್ಮಿಕರು ಅತ್ತ ಕಡೆ […]