ಬಿಗ್ ಬ್ರೇಕಿಂಗ್ ನ್ಯೂಸ್

ಹೆಮ್ಮಾರಿ ಕೊರೋನಾಗೆ ವೇಣೂರಿನ ವ್ಯಕ್ತಿ ಬಲಿ – ವೇಣೂರು ಸೀಲ್ ಡೌನ್ ಸಾಧ್ಯತೆ ಹೆಮ್ಮಾರಿ ಕೊರೋನಾಗೆ ವೇಣೂರಿನ ವ್ಯಕ್ತಿಯೋರ್ವ ಬಲಿಯಾದ ಘಟನೆ ಮೇ 25ರಂದು ವರದಿಯಾಗಿದೆ.ಕೊರೋನಾ ಚೀನಾದ ವುಹಾನಿನಲ್ಲಿ ಹುಟ್ಟಿದೆ. ಅಮೇರಿಕಾದಲ್ಲಿದೆ, ಇಟಲಿಯಲ್ಲಿದೆ, ಬ್ರಿಟನಿನಲ್ಲಿದೆ, ಜರ್ಮನಿಯಲ್ಲಿದೆ…..ದೇಶದ ಇತರ ರಾಜ್ಯಗಳಲ್ಲಿದೆ….ಬೆಂಗಳೂರಿನಲ್ಲಿದೆ…ಮಂಗಳೂರಿನಲ್ಲಿದೆ….ನಮ್ಮೂರಿಗೆ ಬಂದಿಲ್ಲ, ನಮಗಾವ ಮುಂಜಾಗ್ರತೆಯೂ ಅಗತ್ಯವಿಲ್ಲ….ಎಂದು ಮಾಸ್ಕ್ ಧರಿಸದೇ-ವೈಯಕ್ತಿಕ ಅಂತರ ಕಾಪಾಡದೇ ಬೇಕಾಬಿಟ್ಟಿ ತಿರುಗಾಡುತ್ತಿದ್ದ ಬೆಳ್ತಂಗಡಿಯ ಜನತೆಯನ್ನು‌ ಕಳೆದ ಶುಕ್ರವಾರ ಮೇ 22ರಂದು ಶಿರ್ಲಾಲಿನ ಕೊರೋನಾ ಪಾಸಿಟಿವ್ ಪ್ರಕರಣ ಎಚ್ಚರಿಸಿತ್ತು. ಇದೀಗ ಮೇ 25ರಂದು ವೇಣೂರಿನ ವ್ಯಕ್ತಿಯೋರ್ವ ಕೊರೋನಾ […]

ಶಿಬಾಜೆ – ರಕ್ಷಿತಾರಣ್ಯದ ಪ್ಲಾಂಟೇಶನ್ ಗಿಡಗಳ ಮಾರಣ ಹೋಮ

ಘಟನೆ ನಡೆದು ಮೂರು ದಿನಗಳಾದರೂ ಪ್ರಕರಣ ದಾಖಲಿಸದ ಇಲಾಖೆ ನಡೆಯಲ್ಲಿ ಸಂಶಯ. ಕೊಕ್ಕಡ:ಉಪ್ಪಿನಂಗಡಿ ವಲಯಾರಣ್ಯದ ವ್ಯಾಪ್ತಿಯ ಶಿಬಾಜೆ ಸೆಕ್ಷನ್ ನ ಕುರುಂಬು ಎಂಬಲ್ಲಿಂದ ಬೈಕರ ವರೆಗಿನ ಭಾಗದ ರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಅರಣ್ಯ ಇಲಾಖೆಯು ಬೆಲೆ ಬಾಳುವ ವಿವಿಧ ಜಾತಿಯ ನೆಡುತೋಪುಗಳ ರೀಪ್ಲಾಂಟೇಶನ್ ನಡೆಸಿ ಬೆಳೆಸಲಾಗಿದ್ದ ಸುಮಾರು 2500 ಮಿಕ್ಕಿ ದಷ್ಟ ಪುಷ್ಟ ಗಿಡಗಳನ್ನ ದುರುದ್ದೇಶಪೂರಿತವಾಗಿ ಕಳೆದ ಮೂರು ದಿನಗಳ ಹಿಂದೆ ದುಷ್ಕರ್ಮಿಗಳು ಕಡಿದು ತುಂಡರಿಸಿದ ವಿಲಕ್ಷಣ ಘಟನೆ ವರದಿಯಾಗಿದೆ.ಕಳೆದ ಮೂರು ದಿನಗಳ […]

ಮೂಡುಬಿದಿರೆಗೆ ಶಾಸಕರ ಭರವಸೆ ನಂಬಿ ಕೆಟ್ಟರಿವರು

ಉತ್ತರಕ್ರಿಯೆಯಲ್ಲಿ ಭಾಗವಹಿಸಲು ಬರುತ್ತಿದ್ದವರ ಮೇಲೆ ನಿಪ್ಪಾಣಿ ಪೊಲೀಸರ ದೌರ್ಜನ್ಯ ಮೂಡುಬಿದಿರೆಯ ಶಾಸಕ ಉಮಾನಾಥ ಕೋಟ್ಯಾನರ ಭರವಸೆಯ ಮೇಲೆ ನಂಬಿಕೆಯಿಟ್ಟು ಮೃತ ತಮ್ಮನ ಉತ್ತರಕ್ರಿಯೆ ನಡೆಸಲು ಮಹಾರಾಷ್ಟ್ರದ ಪುಣೆಯಿಂದ ಮೂಡುಬಿದಿರೆಗೆ ಹೊರಟಿದ್ದ ವ್ಯಕ್ತಿಯೊಬ್ಬರ ಮೇಲೆ ನಿಪ್ಪಾಣಿ ಚೆಕ್ ಪೋಸ್ಟ್ ಬಳಿ ಕರ್ನಾಟಕದ ಪೊಲೀಸರು ದೌರ್ಜನ್ಯ ಎಸಗಿದ್ದು ಪೊಲೀಸರ ಈ ಅನಿರೀಕ್ಷಿತ ಧಾಳಿಯಿಂದ ತೀವ್ರವಾಗಿ ಗಾಯಗೊಂಡು, ಮಾನಸಿಕವಾಗಿ ನೊಂದಿರುವ ವ್ಯಕ್ತಿ ಮತ್ತೆ ಪುಣೆಗೆ ಮರಳಿರುವ ಘಟನೆ ಮೇ 21ರ ಮಧ್ಯಾಹ್ನ ನಡೆದಿದೆ.ಮೂಲತಃ ಮೂಡುಬಿದಿರೆಯವರಾದ ಶರತ್ ದೇವಾಡಿಗರ ಕಿರಿಯ ಸಹೋದರ ಮುಂಬಯಿಯಲ್ಲಿ […]

ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ

ಮೂಡುಬಿದಿರೆಯಲ್ಲಿ ಹೊಂಚು ಹಾಕಿ ಕುಳಿತಿದೆ ಕೊರೋನಾ ಮೂಡುಬಿದಿರೆ : ಮುಂಬಯಿ ವಲಸಿಗರಿಂದಲೇ ಕರ್ನಾಟಕದಲ್ಲಿ ಕೊರೋನಾ ಮೃತ್ಯುಕೂಪವಾಗಿ ಕಾಡತೊಡಗಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ.ಅದಕ್ಕಾಗಿ ಮುಂಬಯಿಯಿಂದ ಕರ್ನಾಟಕ ರಾಜ್ಯವನ್ನು ಯಾರೂ ಪ್ರವೇಶಿಸದಂತೆ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗಿದೆ. ಗಡಿ ಬಾಗದಲ್ಲಿ ಅಂತೂ ಹೆದರಿಸಿ, ಬೆದರಿಸಿ, ಲಾಠಿಚಾರ್ಜ್ ನಡೆಸಿ ಜನರು ಗಡಿಯೊಳಗೆ ಪ್ರವೇಶಿಸದಂತೆ ಪೊಲೀಸರು ಶಕ್ತಿಮೀರಿ ಶ್ರಮಿಸುತ್ತಿದ್ದಾರೆ.ಆದರೆ ಈಗಾಗಲೇ ಗಡಿಯೊಳಗೆ ಬಂದು ಕ್ವಾರಂಟೈನ್ ಸ್ವೀಕರಿಸಿದವರನ್ನು, ಅವರು ಕರ್ನಾಟಕಕ್ಕೆ ಬರುವಾಗ ಉಪಯೋಗಿಸಿರುವ ವಾಹನಗಳನ್ನು ಆ ವಾಹನಗಳ ಚಾಲಕರನ್ನು ಸೂಕ್ತ ಕ್ರಮಕ್ಕೆ ಒಳಪಡಿಸುವ ಜವಾಬ್ದಾರಿ […]

ಬಿಗ್ಗೆಸ್ಟ್ ಬ್ರೇಕಿಂಗ್ ಹಾಗೂ ಶಾಕಿಂಗ್ ನ್ಯೂಸ್

ಬೆಳ್ತಂಗಡಿ ತಾಲೂಕಿಗೆ ವಕ್ಕರಿಸಿದ ಕೊರೋನಾ ಹೆಮ್ಮಾರಿ ಇದುವರೆಗೆ ಕೊರೋನಾ ಸೋಂಕು ಅಲ್ಲಿದೆ, ಇಲ್ಲಿದೆ…ಆದರೆ ನಮ್ಮೂರಲ್ಲಿ ಇಲ್ಲ ಎಂದು ನಿರಾಳವಾಗಿ ಭಂಡ ಧೈರ್ಯದಲ್ಲಿದ್ದ ಬೆಳ್ತಂಗಡಿ ತಾಲೂಕಿನ ಜನತೆಗೆ ‘ನಾನು ನಿಮ್ಮಲ್ಲಿಯೇ ಇದ್ದೇನೆ’ ಎಂದು ಹೇಳುತ್ತಿದೆ ಕೊರೋನಾ ಹೆಮ್ಮಾರಿ.ಬೆಳ್ತಂಗಡಿ ತಾಲೂಕಿನ ಆರಂಬೋಡಿಗೆ ಐದು ದಿನಗಳ ಹಿಂದೆ ಮುಂಬಯಿಯಿಂದ ಆಗಮಿಸಿ, ಸ್ಥಳೀಯ ಶಾಲೆಯಲ್ಲಿ ಕ್ವಾರಂಟೈನಿಗೆ ಒಳಗಾಗಿದ್ದ 28ವರ್ಷದ ಮಹಿಳೆಗೆ ಇದೀಗ ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತೆಗಳ ಬಗ್ಗೆ ಹಾಸ್ಯಾಸ್ಪದವಾಗಿ ಮಾತನಾಡುವ ಬೆಳ್ತಂಗಡಿ ತಾಲೂಕಿನ ಜನತೆ ಇನ್ನಾದರೂ […]

ರೋಟರಿ ಕ್ಲಬ್ಬಿನಿಂದ ಜೈ‌ಕನ್ನಡಮ್ಮ ಕಛೇರಿಗೆ ಸ್ಯಾನಿಟೈಸರ್ ಸ್ಟ್ಯಾಂಡ್ ಕೊಡುಗೆ

ಮೇ 21ರಂದು ಬೆಳ್ತಂಗಡಿ ರೋಟರಿ‌ ಕ್ಲಬ್ಬಿನವರು ಬೆಳ್ತಂಗಡಿ ಪೇಟೆಯಲ್ಲಿರುವ ಜೈ ಕನ್ನಡಮ್ಮ ಕಛೇರಿಗೆ ಸ್ಯಾನಿಟೈಸರ್ ಸ್ಟ್ಯಾಂಡನ್ನು‌ ಕೊಡುಗೆಯಾಗಿ ನೀಡಿದರು.ಸುವರ್ಣ ಮಹೋತ್ಸವದ ಸಂಭ್ರಮ ದಲ್ಲಿರುವ ಬೆಳ್ತಂಗಡಿ ರೋಟರಿ ಸಂಸ್ಥೆ ಈ ಬಾರಿ ಹತ್ತುಹಲವು ಸಮಾಜಮಖೀ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಯೋಜನೆ ರೂಪಿಸಿದೆ. ಈ ನಡುವೆ ವಿಶ್ವಕ್ಕೇ ವಕ್ಕರಿಸಿದ ಕೊರೋನಾ ಸೋಂಕು ಹರಡುವಿಕೆ ತಡೆಯುವಲ್ಲಿ ಜನತೆಯಲ್ಲಿ ಜಾಗೃತಿ ಮೂಡಿಸಲು ಸಂಕಲ್ಪಿಸಿರುವ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಪದಾಧಿಕಾರಿಗಳು ಹಾಗೂ ಸದಸ್ಯರು ಸುಮಾರು 50 ಸಾರ್ವಜನಿಕ ಹಾಗೂ ಸರಕಾರಿ ಸಂಸ್ಥೆಗಳಿಗೆ ಸ್ಯಾನಿಟೈಸರ್ ಸ್ಟ್ಯಾಂಡ್ ನೀಡುವ […]

ಬಿಗ್ ಬ್ರೇಕಿಂಗ್ ನ್ಯೂಸ್ ಕಡಂದಲೆಯಲ್ಲಿ ಕ್ವಾರಂಟೈನ್ ಗೆ ಒಳಪಟ್ಟ ವ್ಯಕ್ತಿ ಆತ್ಮಹತ್ಯೆ

ಮೂಡುಬಿದಿರೆ : ಮುಂಬೈಯಿಂದ ಮೇ 20ರ ತಡರಾತ್ರಿ ಕಡಂದಲೆಗೆ ಆಗಮಿಸಿ ಕಡಂದಲೆ ಮೈನ್ ಶಾಲೆಯಲ್ಲಿ ಕ್ವಾರಂಟೈನ್ ಗೆ ಒಳಗಾಗಿದ್ದ ವ್ಯಕ್ತಿಯೋರ್ವರ ಶವ ಮೇ 21ರ ಮುಂಜಾನೆ ವರಾಂಡದ ತೊಲೆಗೆ ನೇಣುಹಾಕಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.ಕಡಂದಲೆ ಕಾಂಗ್ಲಾಯಿಯ ದಯಾನಂದ (52ವ.) ಅವರು ಹಲವು ವರ್ಷಗಳಿಂದ ಮುಂಬಯಿಯಲ್ಲಿ ಹೋಟೆಲ್ ಕಾರ್ಮಿಕರಾಗಿ ದುಡಿಯುತ್ತಿದ್ದು ಕೊರೋನಾ ಸಂಕಷ್ಟದ ಸಮಯದಲ್ಲಿ ಲಾಕ್ ಡೌನ್ ಕೂಡಾ ಇದ್ದುದರಿಂದ ಊರಿಗೆ ಹಿಂತಿರುಗಲು ಹಾತೊರೆಯುತ್ತಿದ್ದರು. ಕೊನೆಗೂ ಊರಿಗೆ ಮರಳಲು ಅವಕಾಶ ಸಿಕ್ಕಿದ್ದು ತನ್ನ ಇತರ 6 ಮಂದಿ ಸಂಬಂಧಿಕರ ಜೊತೆಗೆ […]

ಜೈ ಕನ್ನಡಮ್ಮ ವರದಿಗೆ ಜೈ ಎಂದ ಪಟ್ಟಣ ಪಂಚಾಯತು ಆಡಳಿತ

ಬೆಳ್ತಂಗಡಿ ಮಾರಿಗುಡಿ ಬಳಿಯ ಚರಂಡಿ ದುರ್ನಾತ ಮುಕ್ತ ನಿನ್ನೆಯಷ್ಟೇ (ಮೇ 20) ರಂದು ಬೆಳ್ತಂಗಡಿ ಮಾರಿಗುಡಿಯ ಬಳಿಯ ಚರಂಡಿಯ ದುರವಸ್ಥೆಯ ಬಗ್ಗೆ, ಹರಡುತ್ತಿರುವ ಗಬ್ಬು ವಾಸನೆಯ ಬಗ್ಗೆ, ಸೊಳ್ಳೆ ಉತ್ಪಾದನೆಯಾಗುತ್ತಿರುವ ಆತಂಕದ ಬಗ್ಗೆ ಹಾಗೂ ಇವೆಲ್ಲದರ ಪರಿಣಾಮ ಸಾಂಕ್ರಾಮಿಕ ರೋಗ ಹರಡುವ ಭೀತಿಯ ಬಗ್ಗೆ ಜೈ ಕನ್ನಡಮ್ಮದಲ್ಲಿ ಸಚಿತ್ರ ವರದಿ ಪ್ರಕಟಿಸಿದ್ದೆವು. ಬೆಳ್ತಂಗಡಿ ಪಟ್ಟಣ ಪಂಚಾಯತಿನ ದಕ್ಷ ಆಡಳಿತಾಧಿಕಾರಿ-ಬೆಳ್ತಂಗಡಿ ತಾಲೂಕು ತಹಶೀಲ್ದಾರ್-ನಿವೃತ್ತ ಸೇನಾನಿ ಗಣಪತಿ ಶಾಸ್ತ್ರಿ ತಕ್ಷಣ ಕಾರ್ಯೋನ್ಮುಖರಾಗಿ; ಮೇ 21ರಂದೇ ಪಟ್ಟಣ ಪಂಚಾಯತಿನ ಮೂಲಕ ಚರಂಡಿಯನ್ನು […]

ಅಕ್ರಮ ಕಸಾಯಿಖಾನೆಗೆ ದಾಳಿ-1ಕ್ವಿಂಟಾಲ್ ಗೋಮಾಂಸ ವಶ

ಆರೋಪಿಗಳಿಬ್ಬರ ಬಂಧನ-ಪ್ರಕರಣ ದಾಖಲು ಖಚಿತ ಮಾಹಿತಿಯ ಮೇರೆಗೆ ಮೇ 20ರ ಬುಧವಾರ ಇಳಂತಿಲ ಗ್ರಾಮದ ಅಗರ್ತ ನಿವಾಸಿ ಮಹಮ್ಮದ್ ಅಶ್ರಫರ ಮನೆಗೆ ದಾಳಿ ನಡೆಸಿದ ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಡಿ. ಎಸ್. ವೀರಯ್ಯ ನೇತೃತ್ವದ ಪೊಲೀಸರ ತಂಡ ಮನೆಯಲ್ಲೇ ಕಸಾಯಿಖಾನೆ ನಿರ್ಮಿಸಿ, ಅಕ್ರಮವಾಗಿ ಕದ್ದ ಹಸುಗಳನ್ನು ಕೊಂದು ಮಾಂಸ ಮಾಡಿ ಮಾರಾಟ ಮಾಡುವ ಅಕ್ರಮ ದಂದೆಯನ್ನು ಭೇದಿಸಿ, ಆರೋಪಿಗಳಿಬ್ಬರನ್ನೂ ಬಂಧಿಸಿ‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸುಮಾರು 1ಕ್ವಿಂಟಾಲಿನಷ್ಟು ಗೋಮಾಂಸ, ಮಾಂಸ ತೂಕ ಮಾಡಲು ಇರಿಸಲಾದ ತೂಕದ […]

ಅಕ್ರಮ ಗೋಮಾಂಸ ಅಡ್ಡೆಗೆ ದಾಳಿ-ಆರೋಪಿ ಪರಾರಿ

ಖಚಿತ ಮಾಹಿತಿ ಪಡೆದು ಮೇ 19ರಂದು ಧರ್ಮಸ್ಥಳ ಪೊಲೀಸ್ ಠಾಣಾ ಸಬ್ ಇನ್ಸ್ ಪೆಕ್ಟರ್ ಪವನ್ ಕುಮಾರ್, ಪಂಚರು ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ನೆರಿಯ ಗ್ರಾಮದ ಇಟ್ವಾಡಿ ಎಂಬಲ್ಲಿರುವ ದಾವೂದ್ ಎಂಬಾತನ ಮನೆಯ ಸಮೀಪವಿದ್ದ ಆಕ್ರಮ ಗೋಮಾಂಸ ಅಡ್ಡೆಗೆ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ದಾವೂದ್ ಪೊಲೀಸರು ಬರುವುದನ್ನು ನೋಡಿ ಮನೆಯ ಹಿಂಬದಿಯ ಬಾಗಿಲಿನಿಂದ ಪರಾರಿಯಾಗಿದ್ದಾನೆ. ಪೊಲೀಸರು ಮನೆಯ ಸುತ್ತಮುತ್ತ ಪರಿಶೀಲನೆ ನಡೆಸಿದಾಗ ಮನೆಯ ಹಿಂಬಾಗದಲ್ಲಿಯೇ ಜಾನುವಾರಿನ ದೇಹದ ಅವಯವಗಳು ಪತ್ತೆಯಾಗಿದ್ದು, ದಾವೂದ್ ಎಲ್ಲಿಂದಲೋ ಯಾವುದೋ […]