ಮೂಡುಬಿದಿರೆಯ ಹೃದಯ ಭಾಗದಲ್ಲಿ ಕ್ವಾರಂಟೈನ್

ಸುರಕ್ಷತೆಯ ಬಗ್ಗೆ ಸ್ಥಳೀಯರಲ್ಲಿ ಅನುಮಾನ; ಸಹಜ ಆತಂಕ ಮೂಡುಬಿದಿರೆ: ಈ ವಾರ ಮುಂಬೈಯಿಂದ ಮತ್ತು ಮಹಾರಾಷ್ಟ್ರದ ಇತರ ಭಾಗಗಳಿಂದ ಹುಟ್ಟೂರಿಗೆ ಮರಳಿರುವ ಮೂಲತಃ ಮೂಡುಬಿದಿರೆ ಪರಿಸರದವರಾಗಿರುವ ಕೆಲವರಿಗೆ ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲೇ ಕ್ವಾರಂಟೈನ್ ಮಾಡಲಾಗಿದ್ದು, ಕ್ವಾರಂಟೈನ್ ವ್ಯವಸ್ಥೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿಲ್ಲ; ಜೊತೆಗೆ ಸರಯಾದ ಭದ್ರತೆಯನ್ನೂ ನೀಡಲಾಗಿಲ್ಲ ಎಂಬ ಅಸಮಾದಾನ ಸ್ಥಳೀಯರಿಂದ ವ್ಯಕ್ತವಾಗುತ್ತಿದ್ದು, ಪರಿಸರದ ನಿವಾಸಿಗಳು ಆತಂಕಗೊಳ್ಳುವಂತೆ ಮಾಡಿದೆ.ಮೂಡುಬಿದಿರೆಯ ತೀರಾ ಹೃದಯ ಭಾಗದಲ್ಲಿರುವ ಹೋಟೆಲ್ ಕಟ್ಟಡ ಒಂದರಲ್ಲಿ ಸ್ವಯಂ ವೆಚ್ವ ಭರಿಸಬಲ್ಲ ಕುಟುಂಬಗಳಿಗೆ 15ದಿನಗಳ ಕ್ವಾರಂಟೈನ್ ಗೆ […]
ಧರ್ಮಸ್ಥಳ ಕಾರ್ ಮ್ಯೂಸಿಯಂನ ಛಾವಣಿ ರಿಪೇರಿ ಸಂದರ್ಭ ಅವಘಡ
ಆಯ ತಪ್ಪಿ ಬಿದ್ದ ಓರ್ವ ಕಾರ್ಮಿಕ ಸಾವು-ಇಬ್ಬರಿಗೆ ಗಾಯ ಮೂವರು ಕಾರ್ಮಿಕರು ಛಾವಣಿಯಿಂದ ಬಿದ್ದ ಪರಿಣಾಮ ಓರ್ವ ಕಾರ್ಮಿಕ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನಿಬ್ಬರು ಕಾರ್ಮಿಕರು ಗಾಯಾಳುಗಳಾಗಿ ಉಜಿರೆಯ ಎಸ್.ಡ್.ಎಂ. ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾದ ಘಟನೆ ಮೇ 15ರಂದು ವರದಿಯಾಗಿದೆ.ದುರ್ಘಟನೆಯಲ್ಲಿ ಮೃತಪಟ್ಟ ಕಾರ್ಮಿಕನನ್ನು ಕಾರವಾರದ ಸಂಜೀವ ಎಂದು ಗುರುತಿಸಲಾಗಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಪವನ್ ಕುಮಾರ್ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಸಿಬ್ಬಂದಿಗಳೊಂದಿಗೆ ಧಾವಿಸಿ, ಅಗತ್ಯ ಕ್ರಮಗಳನ್ನು ಕೈಗೊಂಡು, ಮಹಜರು ನಡೆಸಿ […]
ಹೊಸಂಗಡಿಯಲ್ಲಿ ಗಾಳಿ-ಮಳೆಗೆ ಮನೆಗೆ ಹಾನಿ
ಎಂ.ಎಲ್.ಸಿ. ಹರೀಶ್ ಕುಮಾರ್ ಭೇಟಿ-ಪರಿಶೀಲನೆ-ಸಹಾಯಹಸ್ತ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಹೊಸಂಗಡಿ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಮಳೆ ಗಾಳಿಗೆ ಕೆಂಜಲ್ ಗುರಿ ಬಾಬು ಎಂಬವರ ಮನೆಗೆ ತೀವ್ರವಾದ ಹಾನಿಯಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಕರ್ನಾಟಕ ವಿಧಾನ ಪರಿಷತ್ತಿನ ಶಾಸಕರಾದ ಕೆ. ಹರೀಶ್ ಕುಮಾರ್ ಮೇ 15ರಂದು ಬಾಬುರವರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರಲ್ಲದೇ ವೈಯಕ್ತಿಕವಾಗಿ ಆರ್ಥಿಕ ಸಹಾಯವನ್ನು ನೀಡಿದರು. ಮಾತ್ರವಲ್ಲದೇ, ಸರಕಾರದಿಂದ ಸಿಗಬಹುದಾದ ಪರಿಹಾರವನ್ನು ಒದಗಿಸಿಕೊಡಲು ಪ್ರಯತ್ನಿಸುವುದಾಗಿ ಹೇಳಿದರು.ಈ ಸಂದರ್ಭ ಬೆಳ್ತಂಗಡಿ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ […]
ಬಿಗ್ ಬಿಗ್ ಬ್ರೇಕಿಂಗ್ ನ್ಯೂಸ್
ಬಂದಾರು ವ್ಯಾಪ್ತಿಯಲ್ಲಿ ಮಂಗಗಳ ಅಸಹಜ ಸಾವು ; ಮಂಗನ ಕಾಯಿಲೆ ಭೀತಿಯಲ್ಲಿ ಸ್ಥಳೀಯರು ಬೆಳ್ತಂಗಡಿ: ಕೋವಿಡ್ ಆತಂಕದ ನಡುವೆಯೇ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೋತಿಗಳ ಅಸಹಜ ಸಾವು ನಡೆದಿರುವ ವಿಚಾರ ಮೇ 15ರಂದು ಬೆಳಕಿಗೆ ಬಂದಿದೆ. ಬಂದಾರು ಗ್ರಾಮದ ಕುಂಟಾಲಪಲ್ಕೆ- ಪದ್ಮುಂಜ ರಸ್ತೆಯಾಗಿ ಸಾಗುವ ಮಾರ್ಗ ಸಮೀಪ ಸುಮಾರು 50 ಕ್ಕೂ ಅಧಿಕ ಮಂಗಗಳ ಮೃತದೇಹ ಪತ್ತೆಯಾಗಿದೆ.ಮೇ 14ರ ರಾತ್ರಿ 8.30 ಕ್ಕೆ ಮಂಗಗಳು ಸತ್ತು ಬಿದ್ದಿರುವುದನ್ನು ಸ್ಥಳೀಯರು ಕಂಡಿದ್ದು ಸಂಬಂಧ ಪಟ್ಟ ಇಲಾಖೆಗೆ […]
ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಛಾಗೆ ಆಯ್ಕೆ
ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಛಾದ ಅಧ್ಯಕ್ಷರಾಗಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ನಿತಿನ್ ಯಶವಂತ್ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸಂಘದ ಸಂಘಟನಾ ಕಾರ್ಯದರ್ಶಿ ಗುರುವಾಯನಕೆರೆಯ ಉಮೇಶ್ ಕುಲಾಲ್ ಆಯ್ಕೆಯಾಗಿರುತ್ತಾರೆ. ಬಿಜೆಪಿ ಬೆಳ್ತಂಗಡಿ ಮಂಡಲ ಹಿಂದುಳಿದ ವರ್ಗ ಮೋರ್ಛಾದ ಅಧ್ಯಕ್ಷರಾಗಿ ನಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಗೌಡ ಆಯ್ಕೆಯಾದರೆ, ಪರಿಶಿಷ್ಟ ಜಾತಿ ಮೋರ್ಛಾದ ಅಧ್ಯಕ್ಷರಾಗಿ ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ […]
ಇಂದಬೆಟ್ಟುವಿನಲ್ಲಿ ಆಹಾರ ಧಾನ್ಯದ ಕಿಟ್ ವಿತರಣೆ
ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಮಾದರಿ ಕಾರ್ಯಕ್ರಮ. ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಸಮುದಾಯದ ಅರ್ಹ ಅಶಕ್ತ ಕುಟುಂಬಗಳಿಗೆ ವಿತರಿಸಲು ನೀಡಲಾದ ಆಹಾರದ ಕಿಟ್ ಗಳನ್ನು ಮೇ 15ರಂದು ಇಂದಬೆಟ್ಟು ಗ್ರಾಮದಲ್ಲಿ ಫಲಾನುಭವಿಗಳಿಗೆ ನೀಡಲಾಯಿತು. ಫಲಾನುಭವಿಗಳು ಹಾಗೂ ಸಂಘಟಕರು ಸರಿಯಾಗಿ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿಕೊಂಡು; ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತೆಯಲ್ಲಿ ಮಾದರಿಯಾದರು.ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ನಿರ್ದೇಶಕ ಹಾಗೂ ಇಂದಬೆಟ್ಟು ಶ್ರೀ ಗುರುನಾರಾಯಣ […]
ಯುವವಾಹಿನಿ(ರಿ.) ಬೆಳ್ತಂಗಡಿ ಘಟಕ ದಿಂದ ಪೊಲೀಸ್ ಠಾಣೆ ಧರ್ಮಸ್ಥಳ ಮತ್ತು ಪ್ರಾಥಮಿಕ ಅರೋಗ್ಯ ಕೇಂದ್ರ ಇಂದಬೆಟ್ಟು ಗೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರ
ಬೆಳ್ತಂಗಡಿ: ಮಾ.12 ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ವತಿಯಿದ ಅಪಾಯಕಾರಿ ಕೋವಿಡ್-19 ಕೊರೊನಾ ವೈರಸ್ ವಿರುದ್ಧ ಕಾಯ೯ನಿವ೯ಹಿಸುತ್ತಿರುವ ಪೋಲಿಸ್ ಠಾಣೆ ಧರ್ಮಸ್ಥಳ ಹಾಗೂ ಪ್ರಾಥಮಿಕ ಅರೋಗ್ಯ ಕೇಂದ್ರ ಇಂದಬೆಟ್ಟು ಗೆ. ಘಟಕದ ವತಿಯಿಂದ ಸ್ಯಾನಿಟೈಸರ್ ಯಂತ್ರ ಹಸ್ತಾಂತರಿಸಲಾಯಿತು . ಈ ಸಂಧರ್ಭದಲ್ಲಿ ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಎಂ.ಕೆ. ಪ್ರಸಾದ್ , ಘಟಕದ ಉಪಾಧ್ಯಕ್ಷರಾದ ದೇವಿಪ್ರಸಾದ್ ಬರಮೇಲು, ಶ್ರೀಮತಿ ಸುಜಾತ ಅಣ್ಣಿ ಪೂಜಾರಿ, ಕಾರ್ಯದರ್ಶಿ ಗುರುರಾಜ್ ಸಾಲ್ಯಾನ್, ಕೋಶಧಿಕಾರಿ ಸಂತೋಷ್ ಕಾಶಿಬೆಟ್ಟು, ನಿರ್ದೇಶಕರಾದ ಮನೋಜ್ ಕುಂಜರ್ಪ,ಕಿಶೋರ್ […]
ಬೆನಕ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ
ತನ್ನ ಇಡೀ ಜೀವನವನ್ನು ರೋಗಿಗಳ ಸೇವೆಗೆ ಮುಡುಪಾಗಿಟ್ಟ ಪ್ಲಾರೆನ್ಸ್ ನೈಟಿಂಗ್ ಗೇಲ್ ಅವರ ನೆನಪಿಗಾಗಿ ಅವರ ಜನ್ಮ ದಿನವಾದ ಮೇ ತಿಂಗಳ 12 ನೇ ದಿನಾಂಕದಂದು ಅಂತರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಿ ನಮಗಾಗಿ ಸದಾ ಸೇವೆ ಸಲ್ಲಿಸುತ್ತಿರುವ ಎಲ್ಲಾ ದಾದಿಯರ ಸೇವೆಯನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಉಜಿರೆಯ ಬೆನಕ ಆಸ್ಪತ್ರೆ ಮತ್ತು ಬೆಲ್ತಂಗಡಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಆಸ್ಪತ್ರೆಯ ಆವರಣದಲ್ಲಿ ವಿಶ್ವ ದಾದಿಯರ ದಿನವನ್ನು ಆಚರಿಸಲಾಯಿತು .ಸೋಂಕು ನಿಯಂತ್ರಣ ನರ್ಸ್ ಶ್ವೇತಾ.ಏನ್.ವಿ ಇವರು ಆಸ್ಪತ್ರೆಯ […]
ಪ್ರಧಾನಿ ಮೋದಿಯ 20ಲಕ್ಷ ಕೋಟಿ ಪ್ಯಾಕೇಜ್ ವರ್ಷದ ದೊಡ್ಡ ನಾಟಕ-ಹರೀಶ್ ಕುಮಾರ್
ಬೆಳ್ತಂಗಡಿ : ‘ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ ಈ ವರ್ಷದ ದೊಡ್ಡ ನಾಟಕ ವಾಗಿದೆ. ಅದೊಂದು ವೇಳೆ ಜನರಿಗೆ ನಿಜವಾಗಿಯೂ ಸಿಕ್ಕಿದ್ದೇ ಆದರೆ ಅದು ದೇಶದ ಪ್ರಜೆಗಳ ದೊಡ್ಡ ಭಾಗ್ಯ’ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು.ಅವರು ಮೇ 13ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘135 ಕೋಟಿ ಜನಸಂಖ್ಯೆಯಲ್ಲಿ 50% ಶ್ರಮಿಕ ವರ್ಗ ಮತ್ತು ಬಡವರಿರಬಹುದು. ಈ 20 ಲಕ್ಷ ಕೋಟಿಯನ್ನು ನಿಜವಾಗಿಯೂ […]
ಪಟ್ರಮೆಯ ಅಶಕ್ತ ಕುಟುಂಬಕ್ಕೆ ಚಾವಣಿ ಕೊಡುಗೆ.
ಪಟ್ರಮೆಯ ವಾರ್ಡ್ -2 ರ ಬಡಕುಟುಂಬವೊಂದರ ಮನೆಯ ಮಾಡು ತೀರಾ ಕುಸಿದ ಸ್ಥಿತಿಯಲ್ಲಿದ್ದಾಗ ಸದ್ರಿ ಮಾಡನ್ನು ಸಂಪೂರ್ಣ ಹೊಸದಾಗಿ ನಿರ್ಮಿಸಲು ಅಗತ್ಯ ನೆರವು ನೀಡುವುದಾಗಿ ಈ ಹಿಂದೆ ಪಟ್ರಮೆಯ ಭಗತ್ ಸಿಂಗ್ ಯುವ ಕೇಂದ್ರ ಭರವಸೆ ಕೊಟ್ಟಿತ್ತು . ಈ ಹಿನ್ನೆಲೆಯಲ್ಲಿ ಇದೀಗ ಸದ್ರಿ ಮಾಡನ್ನು ಪೂರ್ಣವಾಗಿ ಹೊಸದಾಗಿ ನಿರ್ಮಿಸಲಾಯಿತು. ಭಗತ್ ಸಿಂಗ್ ಯುವ ಕೇಂದ್ರದಿಂದ ಶ್ರಮನೆರವು ಹಾಗೂ ಧನನೆರವುಗಳನ್ನು ಒದಗಿಸಿದ್ದರು.ಪಟ್ರಮೆ ಗ್ರಾಮ ಪಂಚಾಯತ್ ಸದಸ್ಯ ಶ್ಯಾಮರಾಜ್ ಪಟ್ರಮೆ ಭಗತ್ ಸಿಂಗ್ ಯುವ ಕೇಂದ್ರದ ಕಾರ್ಯಕ್ಕೆ ಅಭಿನಂದನೆ […]