ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಂ ಮೇ 8ರಂದು ಇಳಂತಿಲ ಗ್ರಾಮದ ಪಾಡೆಂಕಿ ಕೋಟ್ಯಾನ್ ಕುಟುಂಬಸ್ಥರ ದೈವದ ಚಾವಡಿಗೆ ಭೇಟಿ ನೀಡಿದರು.ಈ ಸಂಧರ್ಭದಲ್ಲಿ ಬೆಳ್ತಂಗಡಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಈಶ್ವರ ಭಟ್ ಮಯಿಲ್ತೋಡಿ, ಬಂದಾರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಉಮಾವತಿ ದೇಜಪ್ಪ ಗೌಡ, ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರುಗಳಾದ ಮನೋಹರ ಕುಮಾರ್ ಹಾಗೂ ಯು.ಕೆ. ಇಸುಬು, ಪುತ್ತೂರು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವರದರಾಜ್ ಎಂ., ಆಟಾಲು ಜಿನ್ನಪ್ಪ ಪೂಜಾರಿ, ತರವಾಡು ಮನೆಯ ಮುಖ್ಯಸ್ಥರಾದ ತಿಮ್ಮಪ್ಪ ಪೂಜಾರಿ, ಸದಸ್ಯರಾದ ಶೀನಪ್ಪ ಪೂಜಾರಿ, ಬಾಲಕೃಷ್ಣ ಪೂಜಾರಿ, ಸದಾನಂದ ಪೂಜಾರಿ, ತಣ್ಣೀರುಪಂಥ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಯೂಬ್ ಡಿ.ಕೆ., ಇಳಂತಿಲ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಈಶ್ವರ ಗೌಡ, ಜನಾರ್ಧನ ಪೂಜಾರಿ ನೊಜ, ಡಾನ್ ಬಾಸ್ಕೋ ಲೋಬೊ, ನವೀನ್ ಬ್ರಾಗ್ಸ್ ಮುಂತಾದವರು ಜೊತೆಗಿದ್ದರು.