ಬೆಳ್ತಂಗಡಿ: ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರ ಸಭೆಯು ಜನವರಿ 18ರಂದು ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ನಡೆಯಿತು ಆಡಳಿತ ಮೊಕ್ತೇಸರರಾಗಿ ನಿರಂಜನ ಬಿ. ಆಜ್ರಿ ರಾಮೆರಗುತ್ತು ನಾರಾವಿ ಆಯ್ಕೆಯಾದರು. ಸಹ ಮೊಕ್ತೇಸರರಾದ ದೇವಸ್ಥಾನದ ಪ್ರಧಾನ ಅರ್ಚಕರಾದ ವಿ. ಕೃಷ್ಣತಂತ್ರಿ, ಪ್ರಸಾದ್ ಬಿ. ಶೆಟ್ಟಿ, ಉದಯ ಕುಮಾರ್ ಹೆಗ್ಡೆ, ಡಾಕಯ್ಯ ಪೂಜಾರಿ, ವಸಂತಿ ನಾರಾಯಣ ಪೂಜಾರಿ, ಅರ್ಪಿತಾ ವಸಂತ ಆಚಾರ್ಯ ಸಭೆಯಲ್ಲಿ ಭಾಗವಹಿಸಿದ್ದರು.






