ಮಾಜಿ ಸಚಿವರ ಹುಟ್ಟುಹಬ್ಬವನ್ನು ಆಶ್ರಮಕ್ಕೆ ದಿನಸಿ ನೀಡಿ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು

ಮಾಜಿ ಸಚಿವರ ಹುಟ್ಟುಹಬ್ಬವನ್ನು ಆಶ್ರಮಕ್ಕೆ ದಿನಸಿ ನೀಡಿ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು
Facebook
Twitter
LinkedIn
WhatsApp

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಇವರ ಹುಟ್ಟುಹಬ್ಬದ ದಿನವನ್ನು ಅನಾಥಾಶ್ರಮಕ್ಕೆ ಅಕ್ಕಿ ಮತ್ತು ದಿನಸಿ ವಸ್ತುಗಳನ್ನು ನೀಡುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಿಸಿದರು.ಮೇ 30 ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರ ಹುಟ್ಟುಹಬ್ಬದ ದಿನವಾಗಿದ್ದು ಆ ಪ್ರಯುಕ್ತ ಇಂದು ಯುವ ನಾಯಕ, ಎಪಿಎಂಸಿ ಸದಸ್ಯರು ಆಗಿರುವ ಚಂದ್ರಹಾಸ ಸಾಧು ಸನಿಲ್ ಅವರು ತಮ್ಮ ವೈಯುಕ್ತಿಕ ನೆಲೆಯಲ್ಲಿ ಅಲಂಗಾರು ಮೌಂಟ್ ರೊಸಾರಿ ಆಶ್ರಮಕ್ಕೆ ಅಕ್ಕಿ ಹಾಗೂ ದಿನ ಉಪಯೋಗಿ ವಸ್ತುಗಳನ್ನು ನೀಡಿದರು , ಮೌಂಟ್ ರೊಸಾರಿ ಸಂಸ್ಥೆಗಳ ನಿರ್ದೇಶಕರಾದ ರೇ ಫಾ ಏವ್ಜಿನ್ ಪಿಂಟೊ , ಸಂಸ್ಥೆಯ ಮುಖ್ಯಸ್ತೆ ಸಿಸ್ಟರ್ ಪ್ರೆಸಿಲ್ಲಾ ಅವರು ಮಾಜಿ ಸಚಿವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು , ಈ ಸಂದರ್ಭದಲ್ಲಿ ಮೂಡಬಿದ್ರಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಾಜೇಶ್ ಕಡಲಕೆರೆ , ಯುವ ಇಂಟಕ್ ಅಧ್ಯಕ್ಷರಾದ ಸುಚಿನ್ ಮಡಿವಾಳ , ಕಾಂಗ್ರೆಸ್ ಮುಖಂಡ ನ್ಯಾಯವಾದಿ ಇರ್ಷಾದ್ ಮೂಡಬಿದ್ರಿ ,ಯುವ ನಾಯಕ ಕ್ಲಾರಿಯೋ ಡಿ’ಸೋಜ ,ಕಾಂಗ್ರೆಸ್ ಮುಖಂಡರಾದ ಸಂತೋಷ್ ಶೆಟ್ಟಿ , ವಜೀರ್ , ಪ್ರವೀಣ್ ಮೆಂಡೋನ್ಸಾ ಶಿರ್ತಾಡಿ , ರವಿ ಭೋವಿ , ಹಾಗೂ ಇವತ್ತಿನ ಈ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡಿರುವ ಪ್ರಕಾಶ್ ದೇವಾಡಿಗ ಹಾಜರಿದ್ದರು. ಮಾಜಿ ಸಚಿವರಾದ ಅಭಯಚಂದ್ರ ಜೈನ್ ಅವರು ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಲು ಸೂಚಿಸಿದ್ದು, ಕೊರೊನ ಸಂದರ್ಭದಲ್ಲಿ ಬಡವರಿಗೆ ನೇರವಾಗಿ ಕಷ್ಟಕ್ಕೆ ಸ್ಪಂದನೆ ಮಾಡಲು ಸೂಚಿಸಿರುವ ಬಗ್ಗೆ ಚಂದ್ರಹಾಸ್ ಸನಿಲ್ ಈ ಸಂದರ್ಭದಲ್ಲಿ ತಿಳಿಸಿದರು.

Latest News

Related Posts