ಕಡವೆಯ ರಕ್ಷಣೆಗೆ ನಿಂತ ಶೌರ್ಯ ಸ್ವಯಂಸೇವಕ

ಕಡವೆಯ ರಕ್ಷಣೆಗೆ ನಿಂತ ಶೌರ್ಯ ಸ್ವಯಂಸೇವಕ
Facebook
Twitter
LinkedIn
WhatsApp

ಬೆಳ್ತಂಗಡಿ: ಧರ್ಮಸ್ಥಳ ನೇತ್ರಾವತಿ ಸಮೀಪದಲ್ಲಿ ಜೂನ್ 17ರಂದು ಕಡವೆಯೊಂದು ವಾಹನಕ್ಕೆ ಡಿಕ್ಕಿ ಹೊಡೆದು ತೀವ್ರ ಗಾಯಗೊಂಡಿತ್ತು. ಇದನ್ನು ಗಮನಿಸಿದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಧರ್ಮಸ್ಥಳದ ಧರ್ಮಸ್ಥಳ ವಲಯದ ಸ್ವಯಂಸೇವಕ ಸ್ನೇಕ್ ಪ್ರಕಾಶ್ ಸ್ಥಳೀಯರೊಂದಿಗೆ ಸೇರಿ ಪ್ರಥಮ ಚಿಕಿತ್ಸೆ ಒದಗಿಸಿದ್ದಾರೆ. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ರವಾನಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಉಜಿರೆಯ ಪಶು ಆಸ್ಪತ್ರೆಗೆ ಕಡವೆಯನ್ನು ಸಾಗಿಸಿದ್ದಾರೆ. ಸ್ನೇಕ್ ಪ್ರಾಕಾಶ್ ಅವರ ಸಮಯಪ್ರಜ್ಞೆಯಿಂದ ಕಡವೆ ಪ್ರಾಣಾಪಾಯದಿಂದ ಪಾರಾಗಿದೆ.ವರದಿ : ಸ್ವಸ್ತಿಕ್ ಕನ್ಯಾಡಿ

Latest News

Related Posts