ಮಧ್ಯಾಹ್ನ 1ಗಂಟೆಯವರೆಗೆ ರಬ್ಬರ್ ಸೊಸೈಟಿಯಲ್ಲಿ ವ್ಯವಹಾರ

Facebook
Twitter
LinkedIn
WhatsApp

ಬೆಳ್ತಂಗಡಿ: ಕೊರೋನಾ ಲಾಕ್‌ಡೌನ್ ನಿಯಮವನ್ನು ಸಡಿಲಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಜೂನ್ 20ರಂದು ಹೊರಡಿಸಿದ ಮಾರ್ಗಸೂಚಿಯಂತೆ ಕೃಷಿಗೆ ಪೂರಕವಾದ ವ್ಯವಹಾರಗಳಿಗೆ ಷರತ್ತುಬದ್ಧ ಅನುಮತಿ ನೀಡಿದ್ದು, ಅದರಂತೆ ಜೂನ್ 21ರಿಂದ ಉಜಿರೆ ರಬ್ಬರು ಸೊಸೈಟಿಯಲ್ಲಿ ಬೆಳಿಗ್ಗೆ ಗಂಟೆ 9-30ರಿಂದ ಮಧ್ಯಾಹ್ನ ಗಂಟೆ 1-00ರತನಕ ವ್ಯವಹಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೇಂಗೆತ್ತ್ಯಾರು ರಾಜುಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೊಸೈಟಿಯ ಸದಸ್ಯ ಬೆಳೆಗಾರರು ಸರಕಾರ ಸೂಚಿಸಿರುವ ಕೋವಿಡ್ ನಿಯಮ ಪಾಲಿಸಿ, ಸಕಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ ವ್ಯವಹಾರ ನಡೆಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Latest News

Related Posts