ಬೆಳ್ತಂಗಡಿ: ಸೇವಾಭಾರತಿ ಬೆಳ್ತಂಗಡಿ ಇದರ ಸೇವಾಧಾಮ ಪುನಶ್ಚೇತನ ಕೇಂದ್ರಕ್ಕೆ ಬೆನ್ನು ಮೂಳೆ ಮುರಿತಕ್ಕೊಳಗಾದ ದಾವಣಗೆರೆ ಜಿಲ್ಲೆಯ ಗೊಪ್ಪೇನಹಳ್ಳಿಯ ನಾಗರಾಜ್ ಇವರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದು, ಗಾಲಿಕುರ್ಚಿಯ ಸಹಾಯವಿಲ್ಲದೆ ನಡೆದಾಡಲು ಕಷ್ಟಪಡುತ್ತಿದ್ದರು. ಇವರು ಸತತ ಮೂರು ತಿಂಗಳ ಪುನಶ್ಚೇತನ ಶಿಬಿರದಲ್ಲಿ ತೊಡಗಿಸಿಕೊಂಡು ಇದೀಗ ವಾಕರ್ ಮೂಲಕ ನಡೆಯುವಂತಾಗಿದ್ದು; ಪುನಶ್ಚೇತನ ಮುಗಿಸಿ ಮನೆಗೆ ಹೋಗುವ ದಾರಿ ಮಧ್ಯೆ ಸೇವಾಭಾರತಿಯ ಕಾರ್ಯಾಲಯ ಕನ್ಯಾಡಿಯ ಸೇವಾನಿಕೇತನಕ್ಕೆ ಭೇಟಿನೀಡಿ ಕೃತಜ್ಞತೆ ತಿಳಿಸಿರುತ್ತಾರೆ.ಈ ಸಂದರ್ಭ ನಾಗರಾಜ್ರ ತಾಯಿ ಮತ್ತು ಸ್ನೇಹಿತರು ಉಪಸ್ಥಿತರಿದ್ದರು. ಸೇವಾಭಾರತಿಯ ಅಧ್ಯಕ್ಷ ವಿನಾಯಕ ರಾವ್ ಈ ಸಂದರ್ಭದಲ್ಲಿ ನಾಗರಾಜ್ರಿಗೆ ಶುಭಹಾರೈಸಿ, ಉತ್ತರೋತ್ತರ ಯಶಸ್ಸಿಗೆ ಶುಭಾಶಯ ಕೋರಿರುತ್ತಾರೆ.






