ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾರಾವಿ ಗ್ರಾಮದಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಪೂಜ್ಯ ಆರ್ಯಿಕಾ ಚಿಂತನಮತಿ ಮಾತಾಜಿ ಮತ್ತು ಪೂಜ್ಯ ಕ್ಷುಲ್ಲಿಕಾ ಸುಶ್ರೇಯಾ ಮಾತಾಜಿ ಅವರ ಚಾತುರ್ಮಾಸ ವ್ರತಾಚರಣೆ ನಡೆಯಲಿದೆ.ಈಗಾಗಲೆ ಉಭಯ ಮಾತಾಜಿಯವರು ನಾರಾವಿ ಪುರಪ್ರವೇಶ ಮಾಡಿದ್ದಾರೆ.ಚಾತುರ್ಮಾಸ ಪ್ರಯುಕ್ತ ಜುಲೈ 23ರಂದು ಬಸದಿಯಲ್ಲಿ ಮಂಗಳ ಕಲಶ ಸ್ಥಾಪನಾ ಸಮಾರಂಭ ನಡೆಯಲಿದ್ದು, ಇದರ ಪೂರ್ವಭಾವಿ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಸಂಘಟಕರು ತಿಳಿಸಿದ್ದಾರೆ.






