ಬೆಳ್ತಂಗಡಿ: ಕ್ಷೇತ್ರ ಚಂದ್ರಪುರ ಶಿಶಿಲ ಭಗವಾನ್ ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಜಿನ ಮಂದಿರದಲ್ಲಿ ಮಾರ್ಚ್ 29ರಂದು ಸ್ವರ್ಗೀಯ ಶ್ರವಣಬೆಳಗೊಳ ಶ್ರೀಗಳಿಗೆ ವಿನಯಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಸ್ಥಳದ ಸುರೇಂದ್ರ ಕುಮಾರ್ ಕೋಟ್ಯಾನ ಬಂಟ್ರು, ವಿಜಯಕುಮಾರ್ ಹಣೆರಾಜ ಜೈನ್, ಯಶೋಧರ ಶೆಟ್ಟಿ ರವಿರಾಜ್ ಶೆಟ್ಟಿ, ಡಾ. ಜಯ ಕೀರ್ತಿ ಜೈನ್, ಜಿನರಾಜ ಪೂವಣಿ, ಅತಿಶಯ ಜೈನ್, ಅರಹಂತ ಇಂದ್ರ, ಪದ್ಮಲತಾ, ನಾಗಕನ್ನಿಕ, ಜಯಶ್ರೀ, ಸುರಭಿ ಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.






