ಬೆಳ್ತಂಗಡಿ: ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಗ್ರಾಮದ ಶಿವಾನಂದರವರಿಗೆ ಅಗತ್ಯವಿರುವ ವಾಟರ್ಬೆಡ್ನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗಡೆಯವರು ಉಚಿತವಾಗಿ ನೀಡಿದ್ದು; ಈ ವಾಟರ್ಬೆಡ್ನ್ನು ಶಿವಾನಂದರವರ ಮನೆ ಭೇಟಿಯನ್ನು ಮಾಡಿ ಪ್ರಗತಿಬಂದು ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಲಕ್ಷ್ಮಣ ಗೌಡ ಹಸ್ತಾಂತರಿಸಿದರು
ಈ ಸಂದರ್ಭ ಕೊಲ್ಲಿ-ಕಿಲ್ಲೂರು ‘ಶೌರ್ಯ’ ಶ್ರೀ ಧರ್ಮಸ್ಥಳ ವಿಪತ್ತು ಘಟಕದ ಪ್ರತಿನಿಧಿಯಾದ ಉಮೇಶ್ ಮಾಲೂರು, ಯೋಜನೆಯ ಇಂದಬೆಟ್ಟು ವಲಯದ ಮೇಲ್ವಿಚಾರಕಿ ಉಷಾ, ಸೇವಾಪ್ರತಿನಿಧಿ ಲತಾರವರು ಉಪಸ್ಥಿತರಿದ್ದರು.






