ಬೆಳ್ತಂಗಡಿ: ಮುಲ್ಕಿ ಲಯನ್ಸ್ ಕ್ಲಬ್ ಬಪ್ಪನಾಡು ಇನ್ಸ್ಫಯರ್ ವತಿಯಿಂದ ಸೈಂಟ್ ಮೇರಿಸ್ ವಿಶೇಷ ಚೇತನ ಮಕ್ಕಳ ಶಾಲೆಗೆ ಮಧ್ಯಾಹ್ನದ ಊಟ ವಿತರಣೆಯನ್ನು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಬಪ್ಪನಾಡು ಲಯನ್ಸ್ ಅಧ್ಯಕ್ಷ ಬಿ. ಶಿವಪ್ರಸಾದ್, ಕಾರ್ಯದರ್ಶಿ ಪ್ರತಿಭಾ ಹೆಬ್ಬಾರ್, ಖಜಾಂಚಿ ಅನಿಲ್ ಕುಮಾರ್ ಸದಸ್ಯರಾದ ಕಲ್ಲಪ್ಪ ತಡವಲಗ, ಲಯನ್ ಪ್ರಾಂತ್ಯ 11ರ ಪ್ರಾಂತ್ಯ ಅಧ್ಯಕ್ಷ ವೆಂಕಟೇಶ ಹೆಬ್ಬಾರ್, ದಿವ್ಯ ಚೇತನ ಶಾಲೆಯ ಮುಖ್ಯ ಶಿಕ್ಷಕಿ ರೇಷ್ಮಾ ಮರಿಯ ಮಾರ್ಟಿಸ್, ಶಿಕ್ಷಕರು ಸಿಬ್ಬಂದಿ ವರ್ಗದವರು ಮಕ್ಕಳ ಪೋಷಕರು ಉಪಸ್ಥಿತರಿದ್ದರು.






