ಪುಂಜಾಲಕಟ್ಟೆ: ಬಂಟ್ವಾಳ ತಾಲೂಕಿನ ಮಧ್ವ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ವತಿಯಿಂದ ಮಂದಿರ ವ್ಯಾಪ್ತಿಯ 326 ಕುಟುಂಬಿಕರಿಗೆ ಅಕ್ಕಿ ಹಾಗೂ ಅಗತ್ಯ ವಸ್ತುಗಳ ವಿತರಣಾ ಕಾರ್ಯಕ್ರಮ ಎಪ್ರಿಲ್ 14ರಂದು ನಡೆಯಿತು.
ಮಧ್ವ ಶ್ರೀ ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ರಾಜಪ್ರಸಾದ್ ಆರಿಗ, ಗೌರವಾಧ್ಯಕ್ಷ ಸುರೇಂದ್ರ ಪೂಜಾರಿ ಮಧ್ವ, ಪ್ರಧಾನ ಕಾರ್ಯದರ್ಶಿ ನಾಗೇಶ್ ಮಧ್ವ, ಪದಾಧಿಕಾರಿಗಳಾದ ಶಿವಪ್ಪ ಗೌಡ ನಿನ್ನಿಕಲ್ಲು, ಶ್ರೀಧರ ಟೈಲರ್ ಮಧ್ವ, ಪ್ರಕಾಶ್ ಮಧ್ವ, ನಿತಿನ್ ಗುರುವಾಯನಕರೆ, ಯಾದೇಶ್ ರೈ, ಸುರೇಶ್ ಮಧ್ವ, ರಮೇಶ್ ಆಚಾರ್ಯ, ತಿಲಕ್ ರಾಜ್ ಮಧ್ವ, ಸುರೇಂದ್ರ ಮಧ್ವ, ಸತೀಶ್ ಕಲ್ಕರಬೆಟ್ಟು, ಜನಾರ್ದನ ಪೂಜಾರಿ, ರಮೇಶ್ ಮಧ್ವ ಹೊಸಮನೆ, ಸಂತೋಷ್ ಮಧ್ವ, ನಾಗೇಶ್ ರೈ ಬಂಗೆರೆಕೆರೆ, ಚರಣ್ ರಾಜ್, ಮಂಜುನಾಥ ಗೌಡ, ಶಶಾಂಕ್ ಮಧ್ವ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.








