ಬೆಳ್ತಂಗಡಿ : ಅರಕ್ಷಕ ಠಾಣೆ ವೇಣೂರು, ಪ್ರಾಥಮಿಕ ಆರೋಗ್ಯ ಕೇಂದ್ರ ಅಳದಂಗಡಿ, ಗ್ರಾ.ಪಂ.ಅಳದಂಗಡಿ, ಹಿಂದೂ ಯುವಶಕ್ತಿ ಆಲಡ್ಕ ಕ್ಷೇತ್ರ, ಶ್ರೀ ಗುರು ಚೈತನ್ಯ ಸೇವಾಶ್ರಮ ವೇಣೂರು ಇವರ ಜನಜಾಗೃತಿ ಅಭಿಯಾನದ ಅಂಗವಾಗಿ ಬುಧವಾರ ಅಳದಂಗಡಿ ಪರಿಸರದ ಇನ್ನೂರಕ್ಕೂ ಹೆಚ್ಚು ಅಂಗಡಿ ಮುಂಗಟ್ಟುಗಳ ಎದುರು ಎರಡು ತಂಡಗಳಲ್ಲಿ ಸ್ಯಾನಿಟೈಸರ್ ಸಿಂಪಡನೆ ನಡೆಯಿತು.
ವೇಣೂರು ಎಸ್ಐ ಲೋಲಾಕ್ಷ, ಗ್ರಾ.ಪಂ. ಅಧ್ಯಕ್ಷ ಸತೀಶ್ ಮಿತ್ತಮಾರು, ಡಾ. ಶಶಿಧರ ಡೋಂಗ್ರೆ, ಶಿವಪ್ರಸಾದ ಅಜಿಲ, ಅಳದಂಗಡಿ- ಸುಲ್ಕೇರಿ ಪಿಡಿಓ ಮಾರ್ಗದರ್ಶನದಲ್ಲಿ ಸಿಂಪಡನೆ ನಡೆಯಿತು.








