ಎಪ್ರಿಲ್ 21 ರಂದು ರಾತ್ರಿ ಸುಮಾರು 8 ಗಂಟಗೆ ಗುರುವಾಯನಕೆರೆ ಯಿಂದ ಉಪ್ಪಿನಂಗಡಿ ಕಡೆಗೆ ಅತೀ ವೇಗವಾಗಿ ಬಿಳಿ ಬಣ್ಣದ ಅಕ್ರಮ ದನ ಸಾಗಾಟದ ಪಿಕಪ್ ಒಂದು ಅತೀ ವೇಗವಾಗಿ ಚಲಿಸುತಿದ್ದು, covid-19ನ ಲಾಕ್ ಡೌನ್ ನಿಮಿತ್ತ ಬೆಳ್ತಂಗಡಿ ಪೊಲೀಸ್ ರು ಗಸ್ತು ನಲ್ಲಿದ್ದರು ಪರಪ್ಪು ಎಂಬಲ್ಲಿ ಸಂಶಯಗೊಂಡ ಪೊಲೀಸ್ ರು ತಮ್ಮ ಬೈಕನ್ನು ರಸ್ತೆಗೆ ಅಡ್ಡಲಾಗಿ ಇಟ್ಟಿದ್ದರು ವೇಗವಾಗಿ ಬಂದ ಪಿಕಪ್ ವಾಹನವು ಚಾಲಕ ಮತ್ತ ಇಬ್ಬರು ಆರೋಪಿಗಳೊಂದಿಗೆ ಪೊಲೀಸರನ್ನು ಯಾಮಾರಿಸಿ ನಾಳ ದೇವಸ್ಥಾನದ ಪಳ್ಳಾದೆ ರಸ್ತೆಯಲ್ಲಿ ಪರಾರಿಯಾಗಿದ್ದಾರೆ.ಸಾರ್ವಜನಿ ಕರಿಗೆ ಮಾಹಿತಿ ತಿಳಿದು ಗುಡ್ಡ ಕಾಡಿನಲ್ಲಿ ಹುಡುಕುತ್ತಿದ್ದಾರೆ.. ಮಹಾ ಹೆಮ್ಮಾರಿ ಕಾಯಿಲೆ ಕೊರನಾ ವೈರಸಿನ ಭಯದಿಂದ ಬಳಲುತ್ತಿರುವ ಈ ಸಮಯದಲ್ಲಿ ಈ ರೀತಿ ಮಾಡುತ್ತಿರುವು ದನ್ನು ತಿಳಿದು ಜನರು ಆಕ್ರೋಶ ಭರಿತರಾಗಿದ್ದಾರೆ. ಗೋಗಳ್ಳರ ಮೇಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ.








