ಬೆಳ್ತಂಗಡಿ ಮಂಡಲ ಬಿಜೆಪಿ ಯುವ‌ ಮೋರ್ಛಾಗೆ ಆಯ್ಕೆ

ಬೆಳ್ತಂಗಡಿ ಮಂಡಲ ಬಿಜೆಪಿ ಯುವ ಮೋರ್ಛಾದ ಅಧ್ಯಕ್ಷರಾಗಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ನಿತಿನ್ ಯಶವಂತ್ ಗೌಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬೆಳ್ತಂಗಡಿ ತಾಲೂಕು ಮೂಲ್ಯರ ಯಾನೆ ಕುಂಬಾರರ ಸಂಘದ ಸಂಘಟನಾ ಕಾರ್ಯದರ್ಶಿ ಗುರುವಾಯನಕೆರೆಯ ಉಮೇಶ್ ಕುಲಾಲ್ ಆಯ್ಕೆಯಾಗಿರುತ್ತಾರೆ. ಬಿಜೆಪಿ ಬೆಳ್ತಂಗಡಿ ಮಂಡಲ ಹಿಂದುಳಿದ ವರ್ಗ ಮೋರ್ಛಾದ ಅಧ್ಯಕ್ಷರಾಗಿ ನಾವೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ಗೌಡ ಆಯ್ಕೆಯಾದರೆ, ಪರಿಶಿಷ್ಟ ಜಾತಿ ಮೋರ್ಛಾದ ಅಧ್ಯಕ್ಷರಾಗಿ ಮಡಂತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ […]

ಇಂದಬೆಟ್ಟುವಿನಲ್ಲಿ ಆಹಾರ ಧಾನ್ಯದ ಕಿಟ್ ವಿತರಣೆ

ಮಾಸ್ಕ್ ಧರಿಸಿ ವೈಯಕ್ತಿಕ ಅಂತರ ಕಾಪಾಡಿದ ಮಾದರಿ ಕಾರ್ಯಕ್ರಮ. ಬೆಳ್ತಂಗಡಿಯ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಸಮುದಾಯದ ಅರ್ಹ ಅಶಕ್ತ ಕುಟುಂಬಗಳಿಗೆ ವಿತರಿಸಲು ನೀಡಲಾದ ಆಹಾರದ ಕಿಟ್ ಗಳನ್ನು ಮೇ 15ರಂದು ಇಂದಬೆಟ್ಟು ಗ್ರಾಮದಲ್ಲಿ ಫಲಾನುಭವಿಗಳಿಗೆ ನೀಡಲಾಯಿತು. ಫಲಾನುಭವಿಗಳು ಹಾಗೂ ಸಂಘಟಕರು ಸರಿಯಾಗಿ ಮಾಸ್ಕ್ ಧರಿಸಿ, ವೈಯಕ್ತಿಕ ಅಂತರ ಕಾಪಾಡಿಕೊಂಡು; ಕೊರೋನಾ ಸೋಂಕು ಹರಡದಂತೆ ಕೈಗೊಳ್ಳಬೇಕಾದ ಮುಂಜಾಗ್ರತೆಯಲ್ಲಿ ಮಾದರಿಯಾದರು.ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ನಿರ್ದೇಶಕ ಹಾಗೂ ಇಂದಬೆಟ್ಟು ಶ್ರೀ ಗುರುನಾರಾಯಣ […]

ಯುವವಾಹಿನಿ(ರಿ.) ಬೆಳ್ತಂಗಡಿ ಘಟಕ ದಿಂದ ಪೊಲೀಸ್ ಠಾಣೆ ಧರ್ಮಸ್ಥಳ ಮತ್ತು ಪ್ರಾಥಮಿಕ ಅರೋಗ್ಯ ಕೇಂದ್ರ ಇಂದಬೆಟ್ಟು ಗೆ ಸ್ಯಾನಿಟೈಸರ್ ಯಂತ್ರ ಹಸ್ತಾಂತರ

ಬೆಳ್ತಂಗಡಿ: ಮಾ.12 ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ವತಿಯಿದ ಅಪಾಯಕಾರಿ ಕೋವಿಡ್-19 ಕೊರೊನಾ ವೈರಸ್ ವಿರುದ್ಧ ಕಾಯ೯ನಿವ೯ಹಿಸುತ್ತಿರುವ ಪೋಲಿಸ್ ಠಾಣೆ ಧರ್ಮಸ್ಥಳ ಹಾಗೂ ಪ್ರಾಥಮಿಕ ಅರೋಗ್ಯ ಕೇಂದ್ರ ಇಂದಬೆಟ್ಟು ಗೆ. ಘಟಕದ ವತಿಯಿಂದ ಸ್ಯಾನಿಟೈಸರ್ ಯಂತ್ರ ಹಸ್ತಾಂತರಿಸಲಾಯಿತು . ಈ ಸಂಧರ್ಭದಲ್ಲಿ ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಎಂ.ಕೆ. ಪ್ರಸಾದ್ , ಘಟಕದ ಉಪಾಧ್ಯಕ್ಷರಾದ ದೇವಿಪ್ರಸಾದ್ ಬರಮೇಲು, ಶ್ರೀಮತಿ ಸುಜಾತ ಅಣ್ಣಿ ಪೂಜಾರಿ, ಕಾರ್ಯದರ್ಶಿ ಗುರುರಾಜ್ ಸಾಲ್ಯಾನ್, ಕೋಶಧಿಕಾರಿ ಸಂತೋಷ್ ಕಾಶಿಬೆಟ್ಟು, ನಿರ್ದೇಶಕರಾದ ಮನೋಜ್ ಕುಂಜರ್ಪ,ಕಿಶೋರ್ […]

ಬೆನಕ ಆಸ್ಪತ್ರೆಯಲ್ಲಿ ವಿಶ್ವ ದಾದಿಯರ ದಿನಾಚರಣೆ

ತನ್ನ ಇಡೀ ಜೀವನವನ್ನು ರೋಗಿಗಳ ಸೇವೆಗೆ ಮುಡುಪಾಗಿಟ್ಟ ಪ್ಲಾರೆನ್ಸ್ ನೈಟಿಂಗ್ ಗೇಲ್ ಅವರ ನೆನಪಿಗಾಗಿ ಅವರ ಜನ್ಮ ದಿನವಾದ ಮೇ ತಿಂಗಳ 12 ನೇ ದಿನಾಂಕದಂದು ಅಂತರಾಷ್ಟ್ರೀಯ ದಾದಿಯರ ದಿನವನ್ನಾಗಿ ಆಚರಿಸಿ ನಮಗಾಗಿ ಸದಾ ಸೇವೆ ಸಲ್ಲಿಸುತ್ತಿರುವ ಎಲ್ಲಾ ದಾದಿಯರ ಸೇವೆಯನ್ನು ನೆನಪಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಉಜಿರೆಯ ಬೆನಕ ಆಸ್ಪತ್ರೆ ಮತ್ತು ಬೆಲ್ತಂಗಡಿ ರೋಟರಿ ಕ್ಲಬ್ ಸಹಯೋಗದೊಂದಿಗೆ ಆಸ್ಪತ್ರೆಯ ಆವರಣದಲ್ಲಿ ವಿಶ್ವ ದಾದಿಯರ ದಿನವನ್ನು ಆಚರಿಸಲಾಯಿತು .ಸೋಂಕು ನಿಯಂತ್ರಣ ನರ್ಸ್ ಶ್ವೇತಾ.ಏನ್.ವಿ ಇವರು ಆಸ್ಪತ್ರೆಯ […]

ಪ್ರಧಾನಿ ಮೋದಿಯ 20ಲಕ್ಷ ಕೋಟಿ ಪ್ಯಾಕೇಜ್ ವರ್ಷದ ದೊಡ್ಡ ನಾಟಕ-ಹರೀಶ್ ಕುಮಾರ್

ಬೆಳ್ತಂಗಡಿ : ‘ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿರುವ 20 ಲಕ್ಷ ಕೋಟಿ ಪ್ಯಾಕೇಜ್ ಈ ವರ್ಷದ ದೊಡ್ಡ ನಾಟಕ ವಾಗಿದೆ. ಅದೊಂದು ವೇಳೆ ಜನರಿಗೆ ನಿಜವಾಗಿಯೂ ಸಿಕ್ಕಿದ್ದೇ ಆದರೆ ಅದು ದೇಶದ ಪ್ರಜೆಗಳ ದೊಡ್ಡ ಭಾಗ್ಯ’ ಎಂದು ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹೇಳಿದರು.ಅವರು ಮೇ 13ರಂದು ಬೆಳ್ತಂಗಡಿ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘135 ಕೋಟಿ ಜನಸಂಖ್ಯೆಯಲ್ಲಿ 50% ಶ್ರಮಿಕ ವರ್ಗ ಮತ್ತು ಬಡವರಿರಬಹುದು. ಈ 20 ಲಕ್ಷ ಕೋಟಿಯನ್ನು ನಿಜವಾಗಿಯೂ […]

ಪಟ್ರಮೆಯ ಅಶಕ್ತ ಕುಟುಂಬಕ್ಕೆ ಚಾವಣಿ ಕೊಡುಗೆ.

ಪಟ್ರಮೆಯ ವಾರ್ಡ್ -2 ರ ಬಡಕುಟುಂಬವೊಂದರ ಮನೆಯ ಮಾಡು ತೀರಾ ಕುಸಿದ ಸ್ಥಿತಿಯಲ್ಲಿದ್ದಾಗ ಸದ್ರಿ ಮಾಡನ್ನು ಸಂಪೂರ್ಣ ಹೊಸದಾಗಿ ನಿರ್ಮಿಸಲು ಅಗತ್ಯ ನೆರವು ನೀಡುವುದಾಗಿ ಈ ಹಿಂದೆ ಪಟ್ರಮೆಯ ಭಗತ್ ಸಿಂಗ್ ಯುವ ಕೇಂದ್ರ ಭರವಸೆ ಕೊಟ್ಟಿತ್ತು . ಈ ಹಿನ್ನೆಲೆಯಲ್ಲಿ ಇದೀಗ ಸದ್ರಿ ಮಾಡನ್ನು ಪೂರ್ಣವಾಗಿ ಹೊಸದಾಗಿ ನಿರ್ಮಿಸಲಾಯಿತು. ಭಗತ್ ಸಿಂಗ್ ಯುವ ಕೇಂದ್ರದಿಂದ ಶ್ರಮನೆರವು ಹಾಗೂ ಧನನೆರವುಗಳನ್ನು ಒದಗಿಸಿದ್ದರು.ಪಟ್ರಮೆ ಗ್ರಾಮ ಪಂಚಾಯತ್ ಸದಸ್ಯ ಶ್ಯಾಮರಾಜ್ ಪಟ್ರಮೆ ಭಗತ್ ಸಿಂಗ್ ಯುವ ಕೇಂದ್ರದ ಕಾರ್ಯಕ್ಕೆ ಅಭಿನಂದನೆ […]

ಕೊಣಾಜೆ ಕಲ್ಲು ಸಿದ್ಧಾಶ್ರಮಕ್ಕೆ ಮಹಿಳಾ ತಂಡದಿಂದ ಗ್ಯಾಸ್ ಸಿಲಿಂಡರ್ ಕೊಡುಗೆ

ಮಾಸ್ಕ್ ಹಾಗೂ ವೈಯಕ್ತಿಕ ಅಂತರ ಮಾಯ ಮೂಡುಬಿದಿರೆ : ಇಲ್ಲಿನ ಕೊಣಾಜೆಕಲ್ಲು ಸಿದ್ಧಾಶ್ರಮ ಚಾರಣಪ್ರಿಯ ಭಕ್ತರ ಪ್ರವಾಸಿ ತಾಣವೂ ಹೌದು. ಪ್ರತಿನಿತ್ಯ ಇಲ್ಲಿಗೆ ಭಕ್ತರು ಆಗಮಿಸಿ ದರುಶನ ಪಡೆದು ಅನ್ನಪ್ರಸಾದವನ್ನೂ ಸ್ವೀಕರಿಸುತ್ತಾರೆ.ಸಿದ್ಧಾಶ್ರಮಕ್ಕೆ ಗ್ಯಾಸ್ ಸಿಲಿಂಡರ್ ಮತ್ತು ಬಯೋಗ್ಯಾಸ್ ಸಲಕರಣೆಯನ್ನು ಒದಗಿಸುವಂತೆ ಇಲ್ಲಿನ ಮುಖ್ಯಸ್ಥರು ಮೂಡುಬಿದಿರೆಯ ಮಹಿಳಾ ಸಂಘಟನೆಗೆ ಬೇಡಿಕೆ ಸಲ್ಲಿಸಿದ್ದರು.ಮಾನವ ಹಕ್ಕುಮತ್ತು ಭೃಷ್ಟಾಚಾರ ವಿರೋಧಿ ಸಂಸ್ಥೆಯ ಮಹಿಳಾ ಘಟಕದ ಸದಸ್ಯರು ದಾನಿಗಳ ಸಹಕಾರದಿಂದ ಎರಡು ಗ್ಯಾಸ್ ಸಿಲಿಂಡರ್ ಗಳನ್ನು ಕೊಣಾಜೆಕಲ್ಲು ಸಿದ್ಧಾಶ್ರಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಆದರೆ ಈ […]

ನಿಯಮ‌ ಪಾಲಿಸಿ ನಾವು ಬದುಕಿ ಇತರರನ್ನೂ ಬದುಕಿಸೋಣಾ

ತಾಲೂಕು ಬಿಲ್ಲವ ಸಂಘದಿಂದ 2,500 ಆಹಾರ ಧಾನ್ಯ ಕಿಟ್ ಗಳ ವಿತರಣಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವಸಂತ ಬಂಗೇರ ಪ್ರಪಂಚದಲ್ಲಿ ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ‌ಪಡೆದಿರುವ ಕೊರೋನಾ ಸೋಂಕಿನಿಂದ ನಮ್ಮನ್ನು ನಾವು ರಕ್ಷಿಸಿಕೊಂಡು ಇತರರನ್ನೂ ಬದುಕಲು ಬಿಡಬೇಕಾಗಿದೆ. ಅದಕ್ಕಾಗಿ ಸರಕಾರ ಹೇಳಿದ ನಿಯಮಗಳನ್ನು ಪಾಲಿಸೋಣಾ. ನಾವು ಬದುಕಿ ಇತರರಿಗೋ ಬದುಕಲು ಅವಕಾಶ ಕಲ್ಪಿಸೋಣಾ. ಮಾಸ್ಕ್ ಧಾರಣೆ ಮತ್ತು ವೈಯಕ್ತಿಕ ಅಂತರ ಕಾಪಾಡಲು ಹೆಚ್ಚು ಆಧ್ಯತೆ ನೀಡೋಣಾ. ತೀರಾ ಅಗತ್ಯ ಕೆಸಲ ಹೊರತುಪಡಿಸಿ, ಅನಗತ್ಯ ಮನೆಯಿಂದ ಹೊರಬಂದು ತಿರುಗಾಡಬೇಡಿ. […]

ಕೋವಿಡ್ ವಾರಿಯರ್ಸ್ ರಿಗೆ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ ರೋಟರಿ ಕ್ಲಬ್ಬಿನ ಸದಸ್ಯ ಡಾl ಪ್ರದೀಪ್ ಮೇ 12ರಂದು ಇಂದಬೆಟ್ಟುವಿನಲ್ಲಿ ಕೋವಿಡ್ ವಾರಿಯರ್ಸ್ ಎಂದು ಗುರುತಿಸಿಕೊಂಡ ಆಶಾ ಕಾರ್ಯಕರ್ತೆಯರನ್ನು ಆಹಾರ ಧಾನ್ಯದ ಕಿಟ್ ನೀಡಿ ಗೌರವಿಸುವ ಮೂಲಕ ದಾದಿಯರ ದಿನಾಚರಣೆ ಯನ್ನು ಅರ್ಥಪೂರ್ಣವಾಗಿ ಆಚರಿಸಿದರು. ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸೇವಾ ಟ್ರಸ್ಟಿನ ಅಧ್ಯಕ್ಷ ಎ. ಬಿ. ಉಮೇಶ್, ಸದಸ್ಯ ಧರ್ಣಪ್ಪ, ನಾವೂರು ಹಾಲಿನ ಸೊಸೈಟಿಯ ಅಧ್ಯಕ್ಷ ಉಮೇಶ್ ಪ್ರಭು ಮತ್ತಿತರರು ಹಾಜರಿದ್ದರು.

ರೋಟರಿ ಕ್ಲಬ್ಬಿನಿಂದ ತಾಲೂಕಿನ 50 ದಾದಿಯರಿಗೆ ಗೌರವಾರ್ಪಣೆ

50ನೇ ವರ್ಷಾಚರಣೆಯ ಸಂಭ್ರಮದಲ್ಲಿರುವ ಬೆಳ್ತಂಗಡಿ ರೋಟರಿ ಕ್ಲಬ್ಬಿನ ಪದಾಧಿಕಾರಿಗಳು ಮತ್ತು ಸದಸ್ಯರು ವಿಶ್ವ ದಾದಿಯರ ದಿನವಾದ ಮೇ 12ರಂದು ತಾಲೂಕಿನ‌ ವಿವಿಧ ಆಸ್ಪತ್ರೆಗಳ 50ಮಂದಿ ದಾದಿಯರನ್ನು ಗುರುತಿಸಿ, ಗೌರವಿಸುವ ಮೂಲಕ ತಮ್ಮ ಕ್ಲಬ್ಬಿನ ಸುವರ್ಣ ಮಹೋತ್ಸವ ವರ್ಷಾಚರಣೆಯ ಕಾರ್ಯಕ್ರವೊಂದನ್ನು ಸ್ಮರಣೀಯವಾಗಿಸಿದರು.ಕೊರೋನಾ ಸೋಂಕಿನ‌ ಭೀತಿಯಿರುವ ಇಂದಿನ ದಿನಗಳಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ದಾದಿಯರನ್ನು ಕೊರೋನಾ ವಿರುದ್ಧ ಸಮರ ಸಾರಿರುವ ವಾರಿಯರ್ಸ್ ಎಂದು ಗುರುತಿಸಲಾಗುತ್ತಿದ್ದು; ಇಂತಹ ಕಠಿಣ ದುಡಿಮೆಯ ದಾದಿಯರನ್ನು ತಾಲೂಕಿನ ವಿವಿಧ ಆಸ್ಪತ್ರೆಗಳಲ್ಲಿ ಗುರುತಿಸಿ, ಗೌರವಿಸಿದ ಈ […]