ರೋಟರಿ ಕ್ಲಬ್ಬಿನಿಂದ ಸ್ಯಾನಿಟೈಸರ್ ಸ್ಟ್ಯಾಂಡ್ ಕೊಡುಗೆ
ಕೊರೋನಾ ಸೋಂಕು ಹರಡುವಿಕೆ ತಡೆಗೆ ಸದ್ಯಕ್ಕೆ ಮುಂಜಾಗ್ರತೆಯೊಂದೇ ಪರಿಹಾರ. ಈ ಸತ್ಯವನ್ನರಿತ ಬೆಳ್ತಂಗಡಿ ರೋಟರಿ ಕ್ಲಬ್, ಮುಂಜಾಗ್ರತೆಗೆ ತನ್ನಿಂದಾದ ಸಹಕಾರ ನೀಡುತ್ತಿದೆ. ಮಾಸ್ಕ್ ಧಾರಣೆ ಹಾಗೂ ವೈಯಕ್ತಿಕ ಅಂತರ ಕಾಪಾಡುವುದು ಪ್ರತಿಯೊಬ್ಬರ ವೈಯಕ್ತಿಕ ಜವಾಬ್ದಾರಿ. ಈ ವಿಚಾರದಲ್ಲಿ ಅರಿವನ್ನು ಮೂಡಿಸುವುದರ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲೂ ವೈಯಕ್ತಿಕ ಸ್ವಚ್ಛತೆ ಕಾಪಾಡುವ ಉದ್ಧೇಶದಿಂದ ಸ್ಯಾನಿಟೈಜರ್ ಸ್ಟ್ಯಾಂಡನ್ನು ನೀಡುವ ಯೋಜನೆ ಹಮ್ಮಿಕೊಂಡಿದೆ.ಬೆಳ್ತಂಗಡಿ ರೋಟರಿ ಕ್ಲಬ್ಬಿನ ವತಿಯಿಂದ ಈಗಾಗಲೇ ಬೆಳ್ತಂಗಡಿ ಪತ್ರಕರ್ತರ ಸಂಘ ಹಾಗೂ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ಸ್ಟ್ಯಾಂಡನ್ನು ಕೊಡುಗೆಯಾಗಿ ನೀಡಿದ್ದು,; […]
ಬೆಳ್ತಂಗಡಿ ತಾಲೂಕಿನ ಎಂಡೋ ಪೀಡಿತರಿಗೆ ಶಾಸಕ ಹರೀಶ್ ಪೂಂಜಾರವರಿಂದ ನೆರವು:
ಕೊಕ್ಕಡ, ಬೆಳ್ತಂಗಡಿ ತಾಲೂಕಿನ ಎಂಡೋಪೀಡಿತರ ಸಂಕಷ್ಟಕ್ಕೆ ಶಾಸಕ ಹರೀಶ್ ಪೂಂಜಾ ನೆರವಿನ ಹಸ್ತ ಚಾಚಿದ್ದು ಈ ಸಂಬಂದ ಕೊಕ್ಕಡದ ಎಂಡೋಪೀಡಿತ ಸಂತೋಷ್ ಮಿನೆಜಸ್ ಮನೆಗೆ ಭೇಟಿ ನೀಡಿ ಕಿಟ್ ನೀಡಿದರು. ಶಾಸಕರಾಗುವ ಮೊದಲೇ ಎಂಡೋಪೀಡಿತ ಪ್ರತಿಭಟನಾಕಾರರೊಂದಿಗೆ 3 ದಿನಗಳ ಕಾಲ ಕೊಕ್ಕಡದಲ್ಲಿ ನಡೆದಿದ್ದ ಧರಣಿಯಲ್ಲೂ ಪಾಲ್ಗೊಂಡು ಎಂಡೋಪೀಡಿತರ ಬಗ್ಗೆ ವಿಷೇಷ ಕಾಳಜಿ ತೋರಿಸಿದ್ದರು.ಈ ಸಂದರ್ಬದಲ್ಲಿ ಎಂಡೋವಿರೋಧಿ ಹೋರಾಟಗಾರ ಶ್ರೀಧರ ಗೌಡ ಕೆಂಗುಡೇಲು, ಯೋಗೀಶ್ ಗೌಡ ಆಲಂಬಿಲ, ರಾಘವ ಭಂಡಾರಿ, ಶ್ರೀಕೃಷ್ಣ ಭಟ್ ಹಿತ್ತಿಲು ಮೊದಲಾದವರು ಉಪಸ್ಥಿತರಿದ್ದರು. ಪಟ್ರಮೆ […]
ಕುಡಿತದ ಮತ್ತು ಸ್ನೇಹಕ್ಕೆ ಕುತ್ತು ಅಮಲಿನಲ್ಲಿ ನಡೆದ ಹೊಡೆದಾಟದಲ್ಲಿ ಓರ್ವ ಆಸ್ಪತ್ರೆಗೆ-ಇನ್ನೋರ್ವ ಪರಾರಿ
ಅಲ್ಲಿ ತಲವಾರೂ ಇರಲಿಲ್ಲ; ಚಾಕು-ಚೂರಿಯೂ ಇರಲಿಲ್ಲ; ಇದ್ದದ್ದು ಒಂದು ಸ್ಪೇನರ್ ಮಾತ್ರ. ಇಬ್ಬರೂ ಒಂದಷ್ಟು ಮದ್ಯ ಸೇವಿಸಿ ಅಮಲಿನಲ್ಲಿದ್ದರು. ಯಾವುದೋ ಹಳೆಯ ವಿಚಾರ ಕೆದಕಿ ಇಬ್ಬರೊಳಗೆ ನಡೆದ ಮಾತಿನ ಜಗಳ ಕ್ರಮೇಣ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿ, ಓರ್ವ ಕೈಗೆ ಸಿಕ್ಕ ಸ್ಪೇನರೊಂದರಿಂದ ಮತ್ತೊಬ್ಬನ ತಲೆಗೆ ಹೊಡೆದಿದ್ದಾನೆ. ರಕ್ತ ಸೋರಿದೆ. ಸ್ಥಳೀಯರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೊಡೆದಾತ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.ಇದು ಮೇ 6ರ ರಾತ್ರಿ ಧರ್ಮಸ್ಥಳದ ನಾರ್ಯದಲ್ಲಿ ನಡೆದ ಘಟನೆಯ ನೈಜ […]
ಬಿಗ್ ಬ್ರೇಕಿಂಗ್ ನ್ಯೂಸ್ ಕೊರೋನಾ ವಾರಿಯರ್ಸ್ ಮೇಲೆ ಶಾಸಕರ ದರ್ಪ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ಏರಿ ಹೋದ ಮೂಡುಬಿದಿರೆಯ ಶಾಸಕರು
ಮೂಡುಬಿದಿರೆ : ದೇಶದಾದ್ಯಂತ ನಿಸ್ವಾರ್ಥ ಸೇವೆಗೈಯುತ್ತಿರು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗಳನ್ನು ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೊರೋನಾ ವಾರಿಯರ್ಸ್ ಎಂದು ಘೋಷಿಸಿದ್ದು, ಇವರ ಸೇವೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿಯವರ ಆದೇಶದಂತೆ ಚಪ್ಪಾಳೆ ತಟ್ಟಿ, ಗಂಟೆ ಮೊಳಗಿಸಿ, ದೀಪ ಮೊಂಬತ್ತಿ ಬೆಳಗಿಸಿ, ಸೈನಿಕರಿಂದ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸಿ ಅಭಿನಂದಿಸುವ ಕಾರ್ಯ ದೇಶದಾದ್ಯಂತ ನಡೆದಿದೆ.ಪ್ರಧಾನಮಂತ್ರಿಯವರ ನೇತೃತ್ವದಲ್ಲಿ ನಡೆದಿರುವ ಈ ಮಾನವೀಯ ಪ್ರಕ್ರಿಯೆಯನ್ನು ನಮ್ಮ ಜನಪ್ರತಿನಿಧಿಗಳೇ ಅರ್ಥೈಸಿಕೊಳ್ಳದಿದ್ದರೆ ಪ್ರಮಾದಗಳು ಮತ್ತೆ ಮತ್ತೆ ನಡೆಯುವ ಸಾಧ್ಯತೆಗಳೆ ಹೆಚ್ಚು. ಕಿವಿ […]
ವೈಯಕ್ತಿಕ ಅಂತರ ಇದ್ದರೆ ಸಾಲದಣ್ಣಾ….ಮಾಸ್ಕ್ ಧಾರಣೆ ಕಡ್ಡಾಯವಣ್ಣಾ….
ದೇಣಿಗೆ ನೀಡುವಾಗಲೂ ಕೊರೋನಾ ಸೋಂಕಿನ ವಿರುದ್ಧ ಮುಂಜಾಗ್ರತೆ ಅಗತ್ಯ ಪುದುವೆಟ್ಟುವಿನ ಬಾರಾಳಿಯ ಶ್ರೀ ಗುರುನಾರಾಯಣ ಬಿಲ್ಲವ ಸಂಘದಿಂದ ಮುಖ್ಯಮಂತ್ರಿ ಪರಿಹಾರ ನಿಧಿ ಕೋವಿಡ್-19ಗೆ 25,000ರೂಪಾಯಿಗಳ ಚಕ್ ನೀಡಿದರು. ಇದು ಸತ್ಕಾರ್ಯ; ಸರ್ವಶಕ್ತ ಮೆಚ್ಚುವ ಕೆಲಸ. ಆದರೆ ಸರಕಾರವೇ ಕೊರೋನಾ ಸೋಂಕು ಹರಡದಂತೆ ಸೂಚಿಸಿದ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಪರಿಹಾರ ಧನ ನೀಡಿದ ಮಾತ್ರಕ್ಕೆ ಕೊರೋನಾ ಸೋಂಕಿನಿಂದ ಪಾರಾಗಲು ಅಸಾಧ್ಯ. ಶಾಸಕರು ಹಾಗೂ ಸಂಘಟನೆಯ ಪದಾಧಿಕಾರಿಗಳು ಈ ವಿಚಾರದತ್ತ ಗಮನ ಹರಿಸಬೇಕಿತ್ತು. ವೈಯಕ್ತಿಕ ಅಂತರ ಕಾಪಾಡಿಕೊಂಡ ಇವರುಗಳು ಮಾಸ್ಕ್ […]
ಚಾಲಕನ ನಿಯಂತ್ರಣ! ತಪ್ಪಿದ ಕಾರು ರಸ್ತೆಯ ಬಲಬದಿ ನಿಲ್ಲಿಸಿದ್ದ ಟಿಪ್ಪರ್ ಲಾರಿಯ ಹಿಂಬದಿಗೆ ಢಿಕ್ಕಿ ಹಸುಳೆ ಸಾವು-ಐದು ಮಂದಿಗೆ ಗಾಯ
ಮೇ 5ರ ರಾತ್ರಿ 11-00ಗಂಟೆಗೆ ಮಂಗಳೂರು-ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿಯ ಉಜಿರೆ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕಿನ ಬಳಿ ಇಕೋ ಕಾರೊಂದು ರಸ್ತೆಯ ಬಲಬದಿಯಲ್ಲಿ ನಿಲ್ಲಿಸಿದ್ದ ಟಿಪ್ಪರ್ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಹೆತ್ತವರೊಂದಿಗೆ ಪಯಣಿಸುತ್ತಿದ್ದ ಹಸುಳೆ ಮಾಧವಿ ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಇತರ 5ಮಂದಿ ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಉಜಿರೆ ಹಾಗೂ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.ಕಾರಿನಲ್ಲಿದ್ದ ದೀಕ್ಷಾ, ಚಾಲಕ ಪ್ರಮೋದ್, ಮಮತಾ, ಸ್ವಾತಿ, ಅಶ್ವಿನಿ ಅಪಘಾತದಲ್ಲಿ ಗಂಭೀರ ಗಾಯಗೊಂಡವರಾಗಿದ್ದು, ಇವರ ಪೈಕಿ ಪ್ರಮೋದ್, […]
ಮುಂಡೂರು ಬಿಲ್ಲವ ಸಂಘದಿಂದ ಆಹಾರ ಸಾಮಾಗ್ರಿ ಕಿಟ್ ವಿತರಣೆ ಮಾಸ್ಕ್ ದರಿಸಿ ವೈಯಕ್ತಿಕ ಅಂತರ ಕಾಪಾಡಿ ಮಾದರಿಯಾದರಿವರು
ಮುಂಡೂರು: ಕೋವಿಡ್-19 ಕೊರೋನಾ ಸೋಂಕನ್ನು ತಡೆಗಟ್ಟಲು ಸರಕಾರ ಲಾಕ್ಡೌನ್ ಮಾಡಿರುವ ಹಿನ್ನಲೆಯಲ್ಲಿ ಮುಂಡೂರು ಗ್ರಾಮದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಬಿಲ್ಲವ ಮಹಿಳಾ ವೇದಿಕೆ ಮುಂಡೂರು ಇವುಗಳ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳು ಸಾರಿದ ಒಂದೇ ಜಾತಿ-ಒಂದೇ ಮತ-ಒಂದೇ ದೇವರು ಎಂಬ ತತ್ವದಂತೆ ಗ್ರಾಮದಲ್ಲಿರುವ ಬಿಲ್ಲವ ಕುಟುಂಬ ಹಾಗೂ ಇತರ ವರ್ಗದ ಎಲ್ಲಾ ಧರ್ಮಗಳಲ್ಲಿರುವ ತೀರಾ ಹಿಂದುಳಿದ ಬಡತನದಲ್ಲಿರುವ ಕುಟುಂಬಗಳನ್ನು ಗುರುತಿಸಿ 52 ಕುಟುಂಗಳಿಗೆ ದಿನ ಬಳಕೆಯ ಆಹಾರ ಸಾಮಾಗ್ರಿ ಕಿಟ್ಗಳನ್ನು ಮುಂಡೂರು […]
ನದಿ ನೀರಿಗೆ ವಿಷ ಹಾಕಿದ ಪಾತಕಿಗಳ ಬಂಧನ

ಎಪ್ರಿಲ್ 30ರಂದು ವೇಣೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೂಡುಕೋಡಿಯಲ್ಲಿ ಫಲ್ಗುಣಿ ಹೊಳೆಗೆ ವಿಷ ಬೆರೆಸಿ, ಮೀನುಗಳ ಮಾರಣ ಹೋಮ ನಡೆಸಿದ ಪ್ರಕರಣವನ್ನು ಭೇದಿಸಿದ ವೇಣೂರು ಪೊಲೀಸರು ಆರೋಪಿಗಳಾದ ಮೂಡುಕೋಡಿ ಗ್ರಾಮದ ಇರ್ಷಾದ್ ಹಾಗೂ ಮಹಮ್ಮದ್ ಹನೀಫನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೃತ್ತಿಯಲ್ಲಿ ಅಟೋ ಚಾಲಕರಾಗಿರುವ ಈ ಇಬ್ಬರು ದುಷ್ಕರ್ಮಿಗಳು ನದಿ ನೀರಿಗೆ ವಿಷ ಬೆರೆಸಿ, ಮೀನುಗಳ ಮಾರಣ ಹೋಮ ನಡೆಸುವ ದುಷ್ಕೃತ್ಯ ಯಾಕೆ ಎಸಗಿದರು ಎಂಬ ಸತ್ಯ ಹೊರಬರಬೇಕಾಗಿದೆ.ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲು ಬೆಳ್ತಂಗಡಿಯ ಪೊಲೀಸ್ ಇನ್ಸ್ ಪೆಕ್ಟರ್ […]
ಬಸದಿಗಳ ಪುರೋಹಿತ ಕುಟುಂಬಗಳಿಗೆ ಹೊಂಬುಜ ಜೈನ ಮಠದಿಂದ ಆಹಾರ ವಸ್ತುಗಳ ಕೊಡುಗೆ
ಬೆಳ್ತಂಗಡಿ; ಶ್ರೀ ಕ್ಷೇತ್ರ ಹೊಂಬುಜ ಶ್ರೀ ಜೈನ ಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿಯವರಿಂದ ಬೆಳ್ತಂಗಡಿ ತಾಲೂಕಿನ ಜೈನ ಬಸದಿಯ ಪುರೋಹಿತ ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ ಇಂದು ನಡೆಯಿತು.ಭರತ್ ರಾಜ್ ಇಂದ್ರ ಕಾರ್ಕಳ ಇವರು ವಿತರಣೆಯ ನೇತೃತ್ವ ವಹಿಸಿದ್ದರು.ಕರ್ನಾಟಕ ರಾಜ್ಯಾಧ್ಯಂತ 400 ರಷ್ಟು ಪುರೋಹಿತ ಕುಟುಂಬಗಳಿಗೆ ಈಗಾಗಲೇ ಕಿಟ್ಟ್ ವಿತರಣೆ ಮಾಡಲಾಗಿದ್ದು, ಇನ್ನುಳಿದ ಕುಟುಂಬಗಳಿಗೆ ವಿತರಿಸಲಾಗುವುದು ಎಂದು ಭಟ್ಟಾರಕರು ತಿಳಿಸಿದರು.ತಾಲೂಕಿನಲ್ಲಿ ನಾರಾವಿ, ಅಳದಂಗಡಿ, ಗುರುವಾಯನಕೆರೆ, ಬಂಗಾಡಿ ಸೇರಿದಂತೆ 14 ಬಸದಿಗಳ 35 ಕುಟುಂಬಗಳಿಗೆ ತಲಾ […]
ತಾಲೂಕಿನ ಮಳೆಹಾನಿ ಪ್ರದೇಶಕ್ಕೆ ಎಂ.ಎಲ್.ಸಿ. ಹರೀಶ್ ಕುಮಾರ್ ಭೇಟಿ ಮಾಸ್ಕ್ ಧರಿಸದವರಿಂದ ಜನಪ್ರತಿನಿಧಿಗಳಾದರೂ ಅಂತರ ಕಾಪಾಡುವಂತಾಗಲಿ
ತಾಲೂಕಿನಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಕ ಗಾಳಿ ಮಳೆಯಿಂದಾಗಿ ತಾಲೂಕಿನ ಕಣಿಯೂರು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ವ್ಯಾಪಕ ಹಾನಿಯುಂಟಾಗಿದ್ದು , ಈ ಪ್ರದೇಶಗಳಿಗೆ ಕರ್ನಾಟಕ ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್ ಇಂದು ಭೇಟಿ ನೀಡಿದರು. ಈ ಭೇಟಿಯ ಸಂದರ್ಭ ಹರೀಶ್ ಕುಮಾರರೊಂದಿಗಿದ್ದ ಸಾಕಷ್ಟು ಕಾರ್ಯಕರ್ತರು ಮಾಸ್ಕ್ ಧರಿಸದೇ, ವೈಯಕ್ತಿಕ ಅಂತರ ಕಾಪಾಡದೇ, ಅಪಾಯವನ್ನು ಆಹ್ವಾನಿಸುವಂತೆ ಭಾಗವಹಿಸಿದ್ದರು. ನಾಡಿನ ಜನಪ್ರತಿನಿಧಿಗಳಾದವರು ತಾವು ಮಾಸ್ಕ್ ಧರಿಸುವುದರ ಜೊತೆಗೆ ಸರಿಯಾಗಿ ಮಾಸ್ಕ್ ಧರಿಸದವರಿಂದ ವೈಯಕ್ತಿಕ ಅಂತರ ಕಾಪಾಡದೇ […]