ದೀಪ ಪ್ರಜ್ವಲನ-ಅವರವರ ಭಾವಕ್ಕೆ

ದೀಪ ಪ್ರಜ್ವಲನ-ಅವರವರ ಭಾವಕ್ಕೆ ಎಪ್ರಿಲ್ 5ರ ರಾತ್ರಿ 9ಗಂಟೆಗೆ ದೇಶದ ನಾಗರಿಕರು ಪ್ರಧಾನಿ ನರೇಂದ್ರ ಮೋದಿಯ ಕರೆಗೆ ಸ್ಪಂದಿಸಿ, ರಾಜಕೀಯ ಪಕ್ಷ, ಜಾತಿ, ಧರ್ಮ ಸಹಿತ ಎಲ್ಲ ಭೇದವನ್ನು ಬದಿಗಿರಿಸಿ; ತಮ್ಮ ತಮ್ಮ ಮನೆಯ ಹೊರಗಡೆ ದೀಪವನ್ನು ಬೆಳಗುವ ಮೂಲಕ ರಾಷ್ಟ್ರ ಸಂಕಷ್ಟದಲ್ಲಿರುವ ಸಂದರ್ಭಗಳಲ್ಲಿ ನಾವು ಏಕತೆಯಿಂದ ದೇಶದ ಸರಕಾರದ ಜೊತೆಗಿರುತ್ತೇವೆ ಎಂಬ ಸಂದೇಶ ಸಾರಿದರು. ಆ ಮೂಲಕ ಹೆಮ್ಮಾರಿ ಕೊರೋನಾ ವಿರುದ್ಧದ ಹೋರಾಟಕ್ಕೆ ಸರಕಾರಕ್ಕೆ ಸಾಥ್ ನೀಡಿದರು. ಇನ್ನು ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ […]
ತಮಸೋಮಾ ಜ್ಯೋತಿರ್ಗಮಯ

-ಅರವಿಂದ ಚೊಕ್ಕಾಡಿ ಹೇಗೆ ಒಬ್ಬರಿಂದ ಒಬ್ಬರು ದೈಹಿಕ ಅಂತರವನ್ನು ಕಾಪಾಡಿಕೊಂಡರೆ ಕಾಯಿಲೆಯನ್ನು ತಡೆಯ ಬಹುದೆಂದು ಗೊತ್ತಿದ್ದರೂ ಅದನ್ನು ಮಾಡದೆ ಅಜ್ಞಾನವನ್ನು ಪ್ರದರ್ಶಿಸಿದ್ದೇವೆಯೋ ಅದೇ ರೀತಿಯಲ್ಲಿ ನಮ್ಮ ಮನೆಯಲ್ಲಿದ್ದ ವಿದ್ಯುತ್ ದೀಪಗಳನ್ನು ನಾವೇ ನಂದಿಸಿ ಕತ್ತಲನ್ನು ಆಹ್ವಾನಿಸಿಕೊಂಡಿದ್ದೇವೆ;ಕೊರೋನಾವನ್ನು ಆಹ್ವಾನಿಸಿಕೊಂಡಂತೆ. ಆ ಕತ್ತಲೆಯಲ್ಲಿಯೇ ಹಣತೆಯಲ್ಲಿ ದೀಪವನ್ನು ಬೆಳಗಿದ್ದೇವೆ.ಕೊರೋನಾವನ್ನು ತಡೆಯುವ ಶಕ್ತಿ ನಮಗಿದೆ ಎಂದು ನಾವೇ ದೃಢಪಡಿಸಿಕೊಂಡಿದ್ದೇವೆ.ಇದು ಜ್ಞಾನದ ಹಣತೆ.ಮೇಲ್ಮುಖಿಯಾಗಿ ಚಲಿಸುವ ಹಣತೆ ಮಾತ್ರವೇ ಜ್ಞಾನದ ಹಣತೆ.ಈ ಹಣತೆಯನ್ನು ಬೆಳಗಿದ ನಂತರವಾದರೂ ನಮ್ಮ ಮೂರ್ಖತನವು ತೊಲಗಲಿ. ಆತ್ಮವನ್ನು ನಾವು ಜ್ಯೋತಿ ರೂಪದಲ್ಲಿ […]